ಆರು ತಿಂಗಳ ನಂತರ ಅಪ್ಪುವಿನ ಸಾ’ವಿನ ಸುದ್ದಿ ತಿಳಿಯುತ್ತಿದ್ದಂತೆ ಅತ್ತೆ ನಾಗಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ ಪಾಪ ನಾಗಮ್ಮ ನ ಕಷ್ಟ ಯಾರಿಗೂ ಬೇಡ

ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ 6 ತಿಂಗಳುಗಳು ಕಳೆದಿವೆ. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಬಿಟ್ಟು ಹೋದ ದಿನದಿಂದ ಈ ದಿನದವರೆಗೂ ಕೂಡ ನಾವು ಅವರನ್ನು ಪ್ರತಿದಿನ ನೆನೆಸಿಕೊಳ್ಳುತ್ತಿದ್ದೇವೆ. ಅವರು ಇಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಮಾತ್ರ ಇನ್ನೂ ಕೂಡ ಸಾಧ್ಯವಾಗಿಲ್ಲ. ಹೀಗಿರುವಾಗ 6 ತಿಂಗಳ ನಂತರ ತನ್ನ ಅಳಿಯ ಇಲ್ಲ ಎಂಬ ಸುದ್ದಿ ಕೇಳಿದರೆ ನಾಗಾಮ್ಮ ಅಜ್ಜಿಗೆ ಎಷ್ಟೊಂದು ಆ’ಘಾತವಾಗಿರಬೇಡ ಅವರ ಜೀವಕ್ಕೆ ಎಷ್ಟು ನೋ’ವಾಗಿರಬೇಡ ನೀವೇ ಯೋಚನೆ ಮಾಡಿ.

ರಾಜ್ ಕುಮಾರ್ ಅವರ ತಂಗಿ ಅಂದರೆ ನಾಗಮ್ಮ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪುನೀತ್ ಅವರ ಸಂಚಿಕೆಯಲ್ಲಿ ಅತಿಥಿಯಾಗಿ ಬಂದಿದ್ರು. ಅತ್ತೆ ನಾಗಮ್ಮ ಅಂದರೆ ಪುನೀತ್ ಅವರಿಗೆ ತುಂಬಾ ಪ್ರೀತಿ ಯಾಕೆಂದರೆ ಪುನೀತ್ ಅವರು ಚಿಕ್ಕವರಿದ್ದಾಗ ಅಜ್ಜಿಮನೆಯಲ್ಲೇ ಹೆಚ್ಚಿನ ಕಾಲವನ್ನು ಕಳೆದಿದ್ದಾರೆ ಮತ್ತು ಅಪ್ಪ ಅಮ್ಮ ಶೂಟಿಂಗ್ ಗೆ ಹೋದಾಗ ಪುನೀತ್ ಅವರು ನಾಗಮ್ಮನ ಬಳಿಗೆ ಹೊಗುತ್ತಿದ್ದರು. ಪುನೀತ್ ಚಿಕ್ಕವರಿದ್ದಾಗ ಅವರನ್ನು ಸಾಕಿ ಸಲಹಿದ್ದು ನಾಗಮ್ಮನವರೇ. ನಾಗಮ್ಮ ಮತ್ತು ಅಪ್ಪು ಅವರದ್ದು ತಾಯಿ ಮಗನ ಸಂಬಂಧ.

ಪುನೀತ್ ಅವರು ತೀರಿಹೋದ ಮೇಲೆ ನಾಗಮ್ಮ ಅವರಿಗೆ ಈ ವಿಷಯವನ್ನು ಮನೆಯ ಸದಸ್ಯರು ಹೇಳಿಲ್ಲ ಯಾಕೆಂದರೆ ನಾಗಮ್ಮನವರು ಪುನೀತ್ ಅವರನ್ನು ತುಂಬಾ ಪ್ರೀತಿ ಮಾಡ್ತಾ ಇದ್ರು ಇದ್ದಕ್ಕಿದ್ದಂತೆ ಪುನೀತ್ ಅವರು ಇಲ್ಲವೆಂದರೆ ನಾಗಮ್ಮ ಅವರ ತೆರೆದುಕೊಳ್ಳದ ಎಂಬ ಕಾರಣದಿಂದ ಯಾರೂ ಕೂಡ ಈ ವಿಷಯವನ್ನು ಹೇಳಲಿಲ್ಲ. ಪುನೀತ್ ಅವರು ಸ’ತ್ತಾಗ ಮನೆಯಲ್ಲಿ ಟೀವಿ ಮೊಬೈಲ್ ಯಾವುದನ್ನು ಕೂಡ ನೋಡುತ್ತಿರಲಿಲ್ಲ ನಾಗಮ್ಮ ಗೆ ಈ ವಿಷಯ ತಿಳಿಯದಂತೆ ಗುಟ್ಟಾಗಿ ಮುಚ್ಚಿಟ್ಟಿದ್ದರು.

ಆದರೆ ಇದೀಗ 6 ತಿಂಗಳುಗಳು ಕಳೆದು ನಂತರ ನಾಗಮ್ಮಗೆ ಟೀವಿ ನೋಡುತ್ತಿದ್ದ ಸಂದರ್ಭದಲ್ಲಿ ಪುನೀತ್ ಅವರ ವಿಷಯ ತಿಳಿದಿದೆ. 24 ಏಪ್ರಿಲ್ ರಂದು ರಾಜ್ ಕುಮಾರ್ ಅವರ ಹುಟ್ಟಿದ ದಿನ ನಾಗಮ್ಮ ಅವರಿಗೆ ಈ ವಿಷಯ ತಿಳಿದಿದೆ. ಅಪ್ಪುವಿನ ಸಾ’ವಿನ ಸುದ್ದಿ ತಿಳಿಯುತ್ತಿದ್ದಂತೆ ನಾಗಮ್ಮ ಅವರ ಬಾಯಲ್ಲಿ ಮಾತೇ ಹೊರಡಲಿಲ್ಲ ಹತ್ತು ನಿಮಿಷಗಳ ಕಾಲ ದಿಗ್ಭ್ರಮೆಯಾಗಿ ಮಲಗಿದ್ದರು. ಅಪ್ಪುವಿನ ಸಾ-ವಿನ ಬಗ್ಗೆ ನಾಗಮ್ಮ ನವರ ರಿಯಾಕ್ಷನ್ ನೋಡಿದರೆ ನಿಜಕ್ಕೂ ನೀರು ತುಂಬುತ್ತದೆ.

ಹಾಸಿಗೆಯ ಮೇಲೆ ಮಲಗಿದ್ದ ನಾಗಮ್ಮನವರು ಅಪ್ಪುವಿನ ವಿಷಯ ತಿಳಿಯುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡು ದೇವರೇ ನನಗೆ ಯಾಕಿಂಥಾ ಶಿಕ್ಷೆ ಕೊಡುತ್ತಿದ್ದೀಯಾ ನನ್ನ ಅಣ್ಣ ರಾಜ್ ಕುಮಾರ್ ನನ್ನು ಕಡಿದುಕೊಂಡೆ ಇದೀಗ ನನ್ನ ಮಗ ಪುನೀತ್ ನನ್ನು ಕೂಡ ಕಸಿದುಕೊಂಡಿದ್ದೀಯಾ. ನನ್ನ ಅಣ್ಣ ನನ್ನ ಮಗ ಎಲ್ಲರನ್ನು ಬಿಟ್ಟು ನಾನು ಇನ್ನೂ ಇಲ್ಲೇ ಇದ್ದೀನಿ ನೋಡ್ರಪ್ಪ.. ಅವರೆಲ್ಲ ದೇವರ ಬಳಿ ಹೋಗಿ ಚೆನ್ನಾಗಿದ್ದಾರೆ. ನಾನೇ ಇಲ್ಲಿ ಬಿದ್ದುಕೊಂಡಿದ್ದೇನೆ. ಅಣ್ಣಾ ಇರೋ ಜಾಗಕ್ಕೆ ಹೋಗಿ ಆದಷ್ಟು ಬೇಗ ಅವನನ್ನು ತಬ್ಬಿಕೊಳ್ಳಬೇಕು. ಆದಷ್ಟು ಬೇಗ ನನ್ನನ್ನು ಕೂಡ ದೇವರು ಕರೆದುಕೊಂಡು ಬಿಟ್ರೆ ಸಾಕು, ನನ್ನನ್ನು ಒಬ್ಬಳೇ ಬಿಟ್ಟು ಅವರು ಹೇಗಿರುತ್ತಾರೆ. ನನ್ನನ್ನು ಕರ್ಕೋಬೇಕು ತಾನೆ ಅಂತ ಕಣ್ಣೀರು ಹಾಕುತ್ತಾ ನಾಗಮ್ಮ ದುಃಖದ ಮಾತುಗಳನ್ನು ಭಾರವಾದ ಮನಸ್ಸಿನಿಂದ ಹೇಳಿದ್ದಾರೆ.

punit rajkumar aunty nagamma reaction
Leave A Reply

Your email address will not be published.

error: Content is protected !!