Actor Darshan: ನಟ ದರ್ಶನ್ ಗೆ ಈ ವಿಚಿತ್ರ ಖಾಯಿಲೆ ಇದೆಯಂತೆ!

By Sandeep Kumar. B

Published on:

Darshan VS prashanth Sambaragi

Actor Darshan VS prashanth Sambaragi: ನಟ ದರ್ಶನ್ ಹಾಗೂ ಪ್ರೀಯತಮೆ ಪವಿತ್ರ ಗೌಡ ಇದೀಗ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ, ಈ ನಡುವೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ (prashanth Sambaragi) ತಮ್ಮ ಫೇಸ್ ಬುಕ್ ಪೇಜ್ ಮೂಲಕ ದರ್ಶನ್ ವಿರುದ್ಧ ಸರಣಿ ಆರೋಪ ಮಾಡಿದ್ದಾರೆ. ‘ಆರು ಅಡಿಯ ದೈತ್ಯನ ಕರ್ಮ ಕಾಂಡ’ ಎಂಬ ಶೀರ್ಷಿಕೆಯು ಪ್ರತಿದಿನ ದರ್ಶನ್ ಬಗ್ಗೆ ಹಲವು ಕರಾಳ ಕತೆಯನ್ನು ಹೇಳ್ತಿದ್ದಾರೆ, ಆದರೆ ಇದು ಎಷ್ಟು ಸತ್ಯ ಎಂಬುದು ಸಂಬರಗಿಗೆ ಮಾತ್ರ ಗೊತ್ತು.

Actor Darshan VS prashanth Sambaragi

ಈ ಹಿಂದೆ ಮೂರು ಕರ್ಮಕಾಂಡಗಳನ್ನು ಬಯಲು ಮಾಡಿದ್ದ ಪ್ರಶಾಂತ್ ಸಂಬರಗಿ ಇದೀಗ ನಾಲ್ಕನೇ ರ್ಮಕಾಂಡ ಬಹಿರಂಗಪಡಿಸಿದ್ದಾರೆ. ನ್ಯಾಯವನ್ನು ಎತ್ತಿ ಹಿಡಿಯಲು ಮಲಂರಾಜನ ಮನಶಾಸ್ತ್ರಜ್ಞ ರೇಣುಕಾಸ್ವಾಮಿಯವರ ಕಥೆಯನ್ನು ‘ದರ್ಶನ್ ಕರ್ಮ ಕಂಡ ಭಾಗ 4’ ಎಂದು ಬರೆಯಲು ಆರಂಭಿಸಿದ ಪ್ರಶಾಂತ್ ಸಂಬರಗಿ ಅವರು ದರ್ಶನ್ IED (Intermittent Explosive Disorder) ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕನ್ನಡದಲ್ಲಿ, ಈ ಮಾನಸಿಕ ಅಸ್ವಸ್ಥತೆಯನ್ನು ಪುನರಾವರ್ತಿತ ಸ್ಫೋಟಕ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಪ್ರವೃತ್ತಿಗಳು ಈ ರೋಗದ ಲಕ್ಷಣಗಳಾಗಿವೆ. ಈ ಪರಿಸ್ಥಿತಿಯಲ್ಲಿ ಬಡವರು ಇವನ ಕೈಯಲ್ಲಿ ಸಿಕ್ಕರೆ ಕತೆ ಅಷ್ಟೇ

ಸಾಮಾಜಿಕ ಜಾಲತಾಣಗಳಲ್ಲಿ ಈ ಸೈಕೋನ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಫೋಟೋಗಳನ್ನು ಚೆನ್ನಾಗಿ ನೋಡಿ. ಅವನ ಬಲಗೈಯಲ್ಲಿ ಬ್ಯಾಂಡೇಜ್ ಇದೆ. ಹಿಂದಿನ ರಾತ್ರಿ, ಅವನು ತನ್ನ ದರ್ಪವನ್ನು ಬಡವರ ಮೇಲೆ ತೋರಿಸುತ್ತಾನೆ. ಅವನ ವಿಚಿತ್ರ ನಡವಳಿಕೆ, ಗೂಂಡಾಗಿರಿ ಮತ್ತು ಅನೇಕ ಜನರ ಮೇಲೆ ದಾಳಿ ಮಾಡುವುದನ್ನು ಹಲವರು ನೋಡಿದ್ದಾರೆ. ಈ ಹಿಂಸಾಕೃತ್ಯವು ಪೊಲೀಸ್ ವರದಿಗಳಲ್ಲಿ ಹಲವಾರು ಬಾರಿ ದಾಖಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆಗೊಳಗಾದ ಮತ್ತು ದೌರ್ಜನ್ಯಕ್ಕೊಳಗಾದವರ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಎಂಬುದಾಗಿ ಪ್ರಶಾಂತ್ ಸಂಬರಗಿ ವಿವಿಧ ಕೃತ್ಯಗಳ ಬಗ್ಗೆ ತಿಳಿಸುತ್ತಿಸಿದ್ದಾರೆ.

Read More:

Sandeep Kumar. B

Leave a Comment