Actor Ravindra Mahalakshmi: ಮಲಗಿದ್ರು ಬಿಡಲ್ಲ ಅದನ್ನ ಮಾಡು ಅಂತಾರೆ, ಗಂಡನ ಈ ಅಭ್ಯಾಸಕ್ಕೆ ಸುಸ್ತಾದ ನಟಿ

By Sandeep Kumar. B

Published on:

Actor Ravindra Mahalakshmi

Actor Ravindra Mahalakshmi: ಮದುವೆ ಆದಾಗಿನಿಂದ ಕೂಡ ಈ ಜೋಡಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ. ಇನ್ನೊಂದು ಏನೆಂದರೆ ಇವರಿಬ್ಬರಿಗೂ ಇದು 2 ನೇ ಮದುವೆ. ಆದರೆ, ಮಹಾಲಕ್ಷ್ಮಿ (Mahalakshmi) ಹಣಕ್ಕಾಗಿ ರವೀಂದ್ರ (Ravindra) ಅವರನ್ನು ಮದುವೆ ಆಗಿದ್ದಾರೆ ಎಂದೆಲ್ಲಾ ಟೀಕೆಗಳು ಅವರ ಮದುವೆ ಆದಾಗ ಆರಂಭದಲ್ಲಿ ಕೇಳಿ ಬಂದಿತ್ತು.

Actor Ravindra Mahalakshmi

ಈ ಹಿಂದೆ ಸಹ ರವೀಂದ್ರ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದರು. ರವೀಂದ್ರ ಅವರ ದಡೂತಿ ದೇಹ ಕೂಡ ಭಾರೀ ಟ್ರೋಲ್’ಗೆ ಒಳಗಾಗಿತ್ತು. ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ, ಖ್ಯಾತ ನಿರ್ಮಾಪಕ ಹಾಗೂ ಲಿಬ್ರಾ ಪ್ರೊಡಕ್ಷನ್ಸ್ ಮುಖ್ಯಸ್ಥ ರವೀಂದ್ರ ಚಂದ್ರಶೇಖರನ್ ಸಪ್ತಪದಿ ತುಳಿದ ದಿನದಿಂದ ಭಾರೀ ಸುದ್ದಿಯಲ್ಲಿ ಇದ್ದಾರೆ.

ಇನ್ನು ಈ ಹಿಂದೆ ರವೀಂದ್ರ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ. ಆಗ ಇವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಅವೆಲ್ಲವೂ ಊಹಾಪೂಹಗಳಾಗಿ ಉಳಿದಿವೆ. ಮದುವೆಯ ಸಮಯದಿಂದ ಕೂಡ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದ ಈ ಜೋಡಿ, ಅವುಗಳನ್ನು ಎದುರಿಸಿ ನಿಂತು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಈ ಮಧ್ಯೆ ಮಹಾಲಕ್ಷ್ಮಿ ಜೊತೆಗಿನ ಮದುವೆಯ ಸಂದರ್ಭದಲ್ಲಿ, ರವೀಂದ್ರ ದಡೂತಿ ದೇಹವು ಭಾರೀ ಟ್ರೋಲ್’ಗೆ ಒಳಗಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಮದುವೆಯ ನಂತರ ಹಲವರು ಟ್ರೋಲ್ ಮಾಡಿದ್ದಾರೆ. ನಾವು ಅವರನ್ನು ನಿರ್ಲಕ್ಷ ಮಾಡಿದೆವು. ಅದರಲ್ಲೂ ನನ್ನ ಪತಿ ರವೀಂದ್ರ ತೂಕ ಜಾಸ್ತಿ ಆಗಿರುವುದರಿಂದ ಕೆಲ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟ್ರೋಲ್‌ʼಗಳನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಟ್ರೋಲ್’‌ಗಳನ್ನು ನೋಡಿದ ರವೀಂದ್ರ ತೂಕ ಇಳಿಸಿಕೊಳ್ಳಲು ತುಂಬಾ ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಅದಕ್ಕೇ ನಾನು ಅವರಂತೆ ತೂಕ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದಿದ್ದಾರೆ.

ಇದಕ್ಕಾಗಿ ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನೂ ತೆಗೆದುಕೊಳ್ಳುತ್ತಿದ್ದೇನೆ. ಮಧ್ಯರಾತ್ರಿಯಲ್ಲಿ ಹೆಚ್ಚು ಆಹಾರವನ್ನು ಸೇವಿಸುತ್ತೇನೆ. ಇನ್ನು ಹೀಗೆಲ್ಲಾ ತಿನ್ನುವುದರಿಂದ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಆದರೆ, ನಾನು ಅವರಂತೆ ಆಗಲು ನಿರ್ಧರಿಸಿದೆ. ಆಗಲಾದರೂ ಈ ಟ್ರೋಲ್‌’ಗಳು ನಿಲ್ಲುತ್ತವೆ ಎಂದು ನಾನು ಭಾವಿಸುತ್ತೇನೆ ” ಎಂದು ಮಹಾಲಕ್ಷ್ಮಿ ತಿಳಿಸಿದ್ದಾರೆ.

ಇನ್ನು, ನನ್ನ ಪತಿ ಜೊತೆ ಇದ್ದು ನನ್ನ ಡಯೆಟ್ ಕೂಡ ಮಿಸ್ ಆಗುತ್ತಿದೆ. ಮಲಗಿದ್ದರೂ ಸಹ ನನ್ನನ್ನು ಎಬ್ಬಿಸಿ ತಿನ್ನು ಎಂದು ಒತ್ತಾಯಿಸುತ್ತಾರೆ. ಊಟ ಮಾಡಿಸುತ್ತಾರೆ. ಕಾಳಜಿ ವಹಿಸುತ್ತಾರೆ. ಇನ್ನು ನಾನು ತಿನ್ನಲು ಶುರು ಮಾಡಿದ್ರೆ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ. ರವೀಂದ್ರ ಅವರಂತೆ ಮುಂದೊಂದು ದಿನ ನಾನು ಆಗಬಹುದು ” ಎಂದು ನಟಿ ಹೇಳಿದ್ದಾರೆ.

ಇದು ಅಲ್ಲದೆ ಡಯಟ್‌ ಮಾಡಲು ಹೋದ ಪತಿ ರವೀಂದ್ರ ಅವರ ಕೂದಲು ಕೂಡ ಉದುರುತ್ತಿದೆ. ಇದರಿಂದ ನನಗೆ ತುಂಬಾ ನೋವಾಗುತ್ತಿದೆ ಎಂದು ನಟಿ ತಿಳಿಸಿದ್ದಾರೆ. ಇದನ್ನು ತಮಾಷೆಗಾಗಿ ಹೇಳಿದ್ದಾರೋ ಅಥವಾ ಗಂಭೀರವಾಗಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಮಹಾಲಕ್ಷ್ಮಿ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ನಿಜ. ಇಂತಹ ನಿರ್ಧಾರಗಳು ಆರೋಗ್ಯಕ್ಕೆ ಅಡ್ಡಿ ಆಗುತ್ತವೆ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಸಲಹೆ ನೀಡಿದ್ದಾರೆ. ಆದರೆ, ಇವೆಲ್ಲವನ್ನೂ ಲೆಕ್ಕಿಸದ ಜೋಡಿ ಸದ್ಯ ಸುಖೀ ಜೀವನ ನಡೆಸುತ್ತಿದ್ದಾರೆ.ಯಾರು ಹೇಗೆ ಎಂದು ಅವರ ಆಕಾರ ಗಾತ್ರ ಬಣ್ಣ ನೋಡಿ ಅಳೆಯುವುದು ತಪ್ಪು. ಗುಣ ಮುಖ್ಯ ಎಂದು ಈ ಜೋಡಿ ಪ್ರೂವ್ ಮಾಡಲು ಹೊರಟಿರುವ ಆಗಿದೆ.

Read More:

Sandeep Kumar. B

Leave a Comment