Darshan: ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡ್ತಾರಾ?

By Sandeep Kumar. B

Published on:

Darshan Meet Renukaswamy

Darshan Visits Renukaswamy House: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್’ನಲ್ಲಿ ನಟ ದರ್ಶನ್‌ (Darshan) ಮತ್ತು ಪಟಾಲಂ ‌ಜೈಲು ಪಾಲಾಗಿದೆ. ಇನ್ನು, ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕು ಮಾಡಿ ಮಹತ್ವದ ಸಾಕ್ಷ್ಯ ಸಂಗ್ರಹಕ್ಕೆ ಮುನ್ನುಡಿ ಬರೆದಿದ್ದಾರೆ.

ಈ ನಡುವೆ ಜೈಲು ಪಾಲಾಗಿರುವ ನಟ ದರ್ಶನ್‌ ಅವರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ತೆರೆಮರೆಯಲ್ಲಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನೊಂದು ಕಡೆ ನಟ ದರ್ಶನ್‌ ಅವರು ಚಿತ್ರದುರ್ಗದ ಅಭಿಮಾನಿ ಮುಖಾಂತರ ವಿಶೇಷ ಸಂದೇಶ ಒಂದನ್ನು ಹೇಳಿ ಕಳಿಸಿದ್ದಾರೆ ಎನ್ನುವ ಸ್ಫೋಟಕ ಸುದ್ದಿ ಸಧ್ಯ ಓಡಾಡುತ್ತಿದೆ.

Darshan Visits Renukaswamy House

ಈಗಾಗಲೇ ಜೈಲೂಟದಿಂದ ದರ್ಶನ್‌ ಸೊರಗಿ ಹೋಗಿ ಒಂದೇ ತಿಂಗಳಿನಲ್ಲಿ 10 ಕೆಜಿ ಕಳೆದುಕೊಂಡಿದ್ದಾರೆ, ಇದರ, ಜೊತೆಗೆ ಮನೆ ಊಟಕ್ಕಾಗಿ ಕೋರ್ಟ್ ಮೊರೆ ಸಹ ಹೋಗಿದ್ದರು. ಆದರೆ, ಕೋರ್ಟ್‌ ಇದನ್ನು ತಿರಸ್ಕಾರ ಮಾಡಿ ಜೈಲಿನಲ್ಲಿ ಎಲ್ಲರಿಗೂ ನೀಡುವಂತೆ ನಿಮಗೂ ಸಹ ಅದೇ ಊಟವನ್ನು ನೀಡಲಾಗುತ್ತದೆ. ಮನೆ ಊಟಕ್ಕೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿತ್ತು.

ಇನ್ನು ಇದೀಗ ಸಿದ್ಧರೂಢ ಎಂಬ ಚಿತ್ರದುರ್ಗದ ಅಭಿಮಾನಿ ಒಬ್ಬರನ್ನು ನಟ ದರ್ಶನ್‌ ಅವರು ಭೇಟಿ ಮಾಡಿದ್ದು. ಈ ವೇಳೆ ಅವರ ಮೂಲಕ ದರ್ಶನ್‌ ರೇಣುಕಾಸ್ವಾಮಿ ಕುಟುಂಬಕ್ಕೆ ವಿಶೇಷ ಸಂದೇಶ ಒಂದನ್ನು ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆ ಪ್ರಕರಣ ಒಂದರಲ್ಲಿ ಚಿತ್ರದುರ್ಗ ಮೂಲದ ಸಿದ್ಧಾರೂಢ ಎಂಬುವವರು ಜೈಲು ಸೇರಿದ್ದರು. ಬಳ್ಳಾರಿ ಜೈಲು, ಚಿತ್ರದುರ್ಗದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಇದೀಗ ಸನ್ನಡತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದ್ದು, ಈ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಸಿದ್ಧಾರೂಢ, ದರ್ಶನ್ ಅವರನ್ನು ಭೇಟಿಯಾಗಬೇಕು ಎಂದು ಕೇಳಿಕೊಂಡಿದ್ದರಂತೆ.

ಇನ್ನು, ನಾನು ದರ್ಶನ್‌ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ಒಂದು ಬಾರಿ ಭೇಟಿ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರಂತೆ. ಬಳಿಕ ಅವರ ಒತ್ತಾಯಕ್ಕೆ ಮಣಿದ ಜೈಲಿನ ಅಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ನೀಡಿದ್ದು, ಒಟ್ಟು 12 ನಿಮಿಷಗಳ ಕಾಲ ದರ್ಶನ್ ಅವರನ್ನು ಭೇಟಿಯಾಗಿ ಸಿದ್ಧಾರೂಢ ಅವರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಭೇಟಿ ಬಳಿಕ ಮಾತನಾಡಿದ ಸಿದ್ಧರೂಢ ಅವರು, ದರ್ಶನ್‌ ಕಣ್ಣಲ್ಲಿ ಪಶ್ಚಾತ್ತಾಪ ನೋಡಿದೆ. ನಾನು ದರ್ಶನ್ ಅವರ ಅಭಿಮಾನಿ ಅಂತಾ ಇದನ್ನು ಹೇಳುತ್ತಿಲ್ಲ. ನಿಜವಾಗಲೂ ದರ್ಶನ್ ಅವರು ಜೈಲಿನಲ್ಲಿ ಪ್ರತಿಕ್ಷಣವೂ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ದರ್ಶನ್ ಅವರ ಮುಖ, ಕಣ್ಣಲ್ಲಿ ಪಶ್ಚಾತ್ತಾಪವೇ ಕಾಣುತ್ತಿದೆ. ಪ್ರತಿ ಕ್ಷಣವೂ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಕ್ಷಮೆಯಾಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ದರ್ಶನ್‌ ಅವರು ದೇವರು ಅವಕಾಶ ಕೊಟ್ಟರೆ, ರೇಣುಕಾಸ್ವಾಮಿ ಸ್ವಾಮಿ ಕುಟುಂಬದವರ ಎಲ್ಲರ ಕಾಲಿಗೆ ಬೀಳುತ್ತೇನೆ ಅಂತಾ ಹೇಳಿದ್ದಾರೆ ಎಂದು ಸಿದ್ಧರೂಢ ಹೇಳಿದ್ದಾರೆ.

ಇನ್ನು ನಟ ದರ್ಶನ್‌ ಜೈಲೂಟದ ಬಗ್ಗೆ ಮಾತನಾಡಿದ ಅವರು, ಜೈಲಿನ ಊಟ ತಿನ್ನಲು ಅಣ್ಣನಿಗೆ ತುಂಬಾ ಕಷ್ಟ. ಅಲ್ಲಿ, ನೀಡುವ ಊಟಕ್ಕೆ ಅವರು ಹೊಂದಿಕೊಳ್ಳುವುದು ತುಂಬಾ ಕಷ್ಟ ಅಂತಲೂ ಹೇಳಿದ್ದಾರೆ. ಕೊನೆಗೂ ದರ್ಶನ್ ಅವರಿಗೆ ಅವರ ತಪ್ಪಿನ ಅರಿವಾಗಿದೆ. ತಪ್ಪು ಮಾಡಿದ್ದು ನಿಜವಾದರೆ ಖಂಡಿತ ಅವರಿಗೆ ಶಿಕ್ಷೆ ಆಗುತ್ತದೆ.

Readmore:

Sandeep Kumar. B

Leave a Comment