Tanisha Kuppanda: ನಟ ದರ್ಶನ ಪರ ಬ್ಯಾಟ್ ಬಿಸಿದ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ

By Sandeep Kumar. B

Published on:

tanisha kuppanda

Tanisha Kuppanda React about Darshan Case: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪರ ವಿರೋಧ ಮಾಡುತ್ತಿದ್ದಾರೆ. ಇನ್ನೂ ದರ್ಶನ್ (Darshan) ವಿಚಾರಕ್ಕೆ ಸಂಬಂಧಿಸಿದಂತೆ ತನಿಷಾ ಕುಪ್ಪಂಡ (Tanisha Kuppanda) ಕೂಡ ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ.

ನಟ ದರ್ಶನ್ ಅವರು ನನಗೆ ತುಂಬಾ ಸ್ಪೂರ್ತಿಯಾಗಿದ್ದರು. ಈ ಪ್ರಕರಣದಲ್ಲಿ ದರ್ಶನ್ ಇರುವುದು ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗಿದೆ. ನಮ್ಮ ಸುತ್ತ ಮುತ್ತಲು ಸಾವಿರಾರು ಕೆಟ್ಟ ಸಂಗತಿಗಳು ನಡೆಯುತ್ತಿರುತ್ತದೆ, ಆದ್ರೆ ಅದರಲ್ಲಿ ನಾವು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಾಗಿ ನಟಿ ತನಿಷಾ ಕುಪ್ಪಂಡ ಹೇಳಿದ್ದಾರೆ.

ಇನ್ನೂ ರೇಣುಕಾ ಸ್ವಾಮಿ ಕುರಿತು ಮಾತನಾಡಿದ ತನಿಷಾ ಈ ಘಟನೆ ಬಗ್ಗೆ ರೇಣುಕಾಸ್ವಾಮಿ ಅವರ ಪತ್ನಿ ನನ್ನನ್ನು ಕೇಳಿದರು. ಹುಟ್ಟುವ ಮಗು ನನ್ನ ತಂದೆ ಎಲ್ಲಿ ಅಂತ ಕೇಳಿದ್ರೆ ಏನ್ ಹೇಳಬೇಕು? ಅಂತ ಕೆಟ್ಟ ಮನಸ್ಥಿತಿಯವನ ಮುಖ ನೋಡದೆ ಬೇಡ ಎಂಬುದಾಗಿ ಕಟುವಾಗಿ ಪ್ರತಿಕ್ರಿಯಿಸಿದರು

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನಿಷಾ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾರೆ ರೇಣುಕಾ ಸ್ವಾಮಿ ರೀತಿಯ ಕೆಟ್ಟ ಮನಸ್ಥಿತಿಯುಳ್ಳವರು ನನಗು ಸಹ ಅಂತಹ ಮೆಸೇಜ್ ಗಳನ್ನೂ ಕಳುಹಿಸುತ್ತಾರೆ ಆದ್ರೆ ಇದರ ವಿರುದ್ಧ ದೂರು ಕಳಿಸಿದರು ನ್ಯಾಯ ಸಿಗಲಿಲ್ಲ ಎಂಬುದಾಗಿ ತನಿಷಾ ಹೇಳಿದ್ದಾರೆ. ಅದೇನೇ ಇರಲಿ ಸದ್ಯಕ್ಕೆ ಈ ಪ್ರಕರಣ ನ್ಯಾಯಾಲದಲ್ಲಿ ನಡೆಯುತ್ತಿದೆ, ಕಾನೂನು ಎಲ್ಲರಿಗೂ ಒಂದೇ, ಎರಡು ಕುಟುಂಬಕ್ಕೂ ನ್ಯಾಯ ಸಿಗಲಿ, ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Read More:

Sandeep Kumar. B

Leave a Comment