Chanakya Neethi ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣವಾಗಿರುವಂತಹ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಕೇವಲ ಅಂದಿನ ಕಾಲಕ್ಕೆ ಸರಿಹೊಂದುವಂತೆ ಅರ್ಥಶಾಸ್ತ್ರ ಹಾಗೂ ರಾಜ ನೀತಿ ಶಾಸ್ತ್ರ ಮಾತ್ರವಲ್ಲದೆ ಇಂದಿನ ಜನಜೀವನ ವ್ಯವಸ್ಥೆಗೆ ಪ್ರಸ್ತುತ ಎನಿಸುವಂತಹ ಜೀವನದ ಯಶಸ್ವಿ ದಾರಿಗಳನ್ನು ಕೂಡ ತಮ್ಮ ಬರಹಗಳ ಮೂಲಕ ಬರೆದಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಒಬ್ಬ ಹುಡುಗ ಹುಡುಗಿಯನ್ನು ಮದುವೆಗೆ ಆಯ್ಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ತಿಳಿದುಕೊಳ್ಳಬೇಕು ಎನ್ನುವುದನ್ನು ಕೂಡ ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಡೆಯುವಂತಹ ಮದುವೆಗಳು ನಿಮಗೆಲ್ಲ ತಿಳಿದೇ ಇದೆ. ಅರೆಂಜ್ ಮ್ಯಾರೇಜ್ ಗಳು ಒಬ್ಬರು ಇನ್ನೊಬ್ಬರು ತಿಳಿಯದೆ ನೇರವಾಗಿ ಮದುವೆಯಾಗಿ ನಂತರ ಕಷ್ಟ ಪಡಬೇಕಾಗುತ್ತದೆ. ಇನ್ನು ಲವ್ ಮ್ಯಾರೇಜ್ ಗಳ ವಿಚಾರಕ್ಕೆ ಬಂದ್ರೆ ಪ್ರೀತಿ ಎಷ್ಟೇ ಇದ್ದರೂ ಕೂಡ ಮದುವೆಯಾದ ಮೇಲೆ ಯಾವ ಗಳಿಗೆಯಲ್ಲಿ ಕೂಡ ಸಂಬಂಧಗಳು ಬದಲಾಗಬಹುದು.
ಮದುವೆ ಆಗೋದಕ್ಕಿಂತ ಮುಂಚೆ ನೀವು ಕುಟುಂಬದ ಜೊತೆಗೆ ವಾಸಿಸುತ್ತಿದ್ದಾರೆ ಆ ಹುಡುಗಿ ಕುಟುಂಬ ಮೌಲ್ಯಗಳನ್ನು ಎಷ್ಟು ಚೆನ್ನಾಗಿ ಹೊಂದಿದ್ದಾಳೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಬಗ್ಗೆ ದಿನಕ್ಕೆ ಸಾಕಷ್ಟು ಬಾರಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾಳೆ ಎಂದರೆ ಆಕೆ ನಿಮ್ಮ ಮೇಲೆ ಸಾಕಷ್ಟು ಕಾಳಜಿಯನ್ನು ಹೊಂದಿದ್ದಾಳೆ ಎಂಬುದಾಗಿ ಅರ್ಥವಾಗಿದೆ.
ಒಂದು ವೇಳೆ ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಗೆ ನಿಂತು ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದರೆ ಅಂತವರನ್ನು ಜೀವನದಲ್ಲಿ ಯಾವತ್ತೂ ಕೂಡ ಕೈ ಬಿಡಬೇಡಿ. ಕೊನೆಯದಾಗಿ ನಿಮ್ಮ ಜೀವನದಲ್ಲಿ ಅತ್ಯಂತ ಚಿಕ್ಕ ಪುಟ್ಟ ಸಂತೋಷದ ಕ್ಷಣಗಳನ್ನು ಕೂಡ ಅವರು ಆನಂದಿಸುತ್ತಿದ್ದರೆ ಅಂತವರು ನಿಮ್ಮ ಜೀವನಕ್ಕಾಗಿ ಹುಟ್ಟಿ ಬಂದವರು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂಬುದಾಗಿ ಚಾಣಕ್ಯ ನೀತಿ ಶಾಸ್ತ್ರ ಹೇಳುತ್ತದೆ.