ಮೈಸೂರ್ ದಸರಾದಲ್ಲಿ ಪುಟ್ಟ ರಾಜಕುಮಾರ ಅದ್ಯವೀರ್ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಕುಮಾರಿ ಕಾಣಿಸಿಕೊಂಡ ಸುಂದರ ಫೋಟೋಸ್!

Maharani Trishika Kumari Latest photos 2023: ಸ್ನೇಹಿತರೆ, ಕಳೆದ ಕೆಲವು ವರ್ಷಗಳಿಂದ ಸಾಂಕ್’ರಾಮಿಕ ರೋ-ಗದ ಕಾರಣ ದಸರಾ ಸಂಭ್ರಮವನ್ನು ಸರಳವಾಗಿ ಮಾಡಲಾಗಿತ್ತು. ಆದರೆ ಈ ಬಾರಿಯ ಬಹು ನಿರೀಕ್ಷಿತ ದಸರಾ ಸಂಭ್ರಮವು ಬಹಳ ವಿಜೃಂಭಣೆಯಿಂದ ಪೂರ್ಣಗೊಂಡಿದ್ದು ಜಂಬೂ ಸವಾರಿಗೆಂದು ಶಿಬಿರಗಳಿಂದ ಕರೆ ತಂದ ಆನೆಗಳೊಂದಿಗೆ ಫೋಟೋ ಸೆಶನ್(Photo session) ನಡೆಸಿ ಮತ್ತೆ ವಾಪಸ್ ತಮ್ಮ ತಮ್ಮ ಸ್ಥಳಗಳಿಗೆ ಕಳಸಿ ಕೊಡಲಾಗಿದೆ, ಇನ್ನು ಮೈಸೂರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರತಿ ರಸ್ತೆಗಳಿಗೂ ಹಾಕಲಾಗಿದಂತಹ ಲೈಟಿಂಗ್ಸ್ (Lightings) ಗಳನ್ನೆಲ್ಲ ತೆಗೆಯುವ ಕಾರ್ಯ ಕೂಡ ನಡೆಯುತ್ತಿದ್ದು,

ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದವರು ಹಾಗೂ ಹೊರದೇಶದವರು ಈ ಬಾರಿ ನಡೆದ ದಸರಾ ಮಹೋತ್ಸವದ ಕುರಿತು ಮಾತನಾಡುವಂತಾಗಿದ್ದಾರೆ. ಸಾಮಾಜಿಕ ಜಾಲತಾಣದ ತುಂಬೆಲ್ಲ ಮೈಸೂರು ದಸರಾ ವೈಭವದ ಫೋಟೋಗಳು ಹರಿದಾಡುತ್ತಿದ್ದು, ಅರಮನೆಯ ಕಿಟಕಿ ಬಳಿ ನಿಂದು ಯುವರಾಜಕುಮಾರ ಅದ್ಯವೀರ್ ಒಡೆಯರ್ (Adyaveer Wodeyar) ತಮ್ಮ ತಾಯಿ ಹಾಗೂ ಅಜ್ಜಿಯೊಂದಿಗೆ ದಸರಾ ಮಹೋತ್ಸವವನ್ನು ಕಣ್ತುಂಬಿ ಕೊಳ್ಳುತ್ತಿರುವ ಚಿತ್ರಣ ನೆಟ್ಟಿಗರನ್ನು ಆಕರ್ಷಿಸಿದೆ‌.

Maharani Trishika Kumari Latest photos 2023

ಹೌದು ಸ್ನೇಹಿತರೆ ಮೈಸೂರು ರಾಜ್ಯ ವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಜೂನ್ 27ನೇ ತಾರೀಕು 2016ರಂದು ತ್ರಿಷಿಕ ಕುಮಾರಿ ದೇವಿ ಯವರನ್ನು ಪ್ರೀತಿಸಿ ಬಹಳ ಅದ್ದೂರಿಯಾಗಿ ಅರಮನೆ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ವರ್ಷದ ಬಳಿಕ ತ್ರಿಷಿಕಾ ಕುಮಾರಿ ಗರ್ಭಿ-ಣಿಯಾದಂತಹ ವಿಚಾರ ರಾಜ ಮನೆತನಕ್ಕೆ ಹೆಚ್ಚಿನ ಸಂಭ್ರಮವನ್ನು ತಂದಿತ್ತು‌. ಶ್ರೀರಂಗಪಟ್ಟಣದ ರಾಜ ಶ್ರೀರಂಗನ ಹೆಂಡತಿ ಅಲಮೇಲಮ್ಮನ ಶಾಪದಿಂದಾಗಿ ಮೈಸೂರು ಒಡೆಯರ್ ವಂಶದ ಅರಸರಿಗೆ ಮಕ್ಕಳಾಗುವುದಿಲ್ಲ ಎಂಬ ಪ್ರತಿತಿಯಿತ್ತು,

ಆದರೆ ಯದುವೀರ್ ಮತ್ತು ತ್ರಿಷಿಕಾ ಕುಮಾರಿ ದಂಪತಿಗಳು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಶಾ.ಪ ವಿಮೋಚನೆಯಾಗಿರುವ ಸೂಚನೆಯನ್ನು ನೀಡಿದರು. ಹೀಗೆ ಮೊನ್ನೆಯಷ್ಟೇ ನಡೆದ ದಸರಾ ಸಂಭ್ರಮದಲ್ಲಿ ಹಳದಿ ಬಣ್ಣದ ಉಡುಪನ್ನು ಧರಿಸಿದ್ದ ಅಧ್ಯವೀರ್ ಚಾಮರಾಜ ಒಡೆಯರ್ ತಮ್ಮ ತಾಯಿ ಹಾಗೂ ಅಜ್ಜಿ ಪ್ರಮೋದ ದೇವಿ ಒಡೆಯರ್ (Pramoda Devi Wodeyar) ಅವರೊಂದಿಗೆ ಅರಮನೆಯ ಕಿಟಕಿ ಬಳಿ ನಿಂತು ತಮ್ಮ ತಂದೆ ನಡೆಸಿಕೊಂಡು ಹೋಗುತ್ತಿರುವಂತಹ ಪೂಜಾ ಕೆಲಸಗಳನ್ನೆಲ್ಲ ವೀಕ್ಷಿಸುತ್ತ ಸಂಭ್ರಮ ವ್ಯಕ್ತಪಡಿಸಿದ್ದಾರೆ ಆ ಸಂದರ್ಭದಲ್ಲಿ ತೆಗೆದಂತಹ ಕೆಲ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!