Anchor Anushree ಇದುವರೆಗೂ ಆಂಕರ್ ಅನುಶ್ರೀ ಒಮ್ಮೆಯೂ ಕೂಡ ಡಿ ಬಾಸ್ ಅವರನ್ನು Interview ಮಾಡಿಲ್ಲ ಯಾಕೆ? ಕೊನೆಗೂ ಬಹಿರಂಗವಾಯ್ತು ರಹಸ್ಯ.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರ ಸಿನಿಮಾಗಳು ಬಿಡುಗಡೆ ಆಗಬೇಕಾದರೆ ಆ ಸಿನಿಮಾಗಳಿಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಬೇಕಾಗಿರುತ್ತದೆ. ಆದರೆ ತಮ್ಮ ಸಿನಿಮಾಗಳಿಗೆ ಪ್ರಚಾರ ಇಲ್ಲದಿದ್ದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೊಸ ಬಾಷ್ಯವನ್ನೇ ಬರೆಯುವಂತಹ ತಾಕತ್ತಿರುವ ಕನ್ನಡದ ಕೆಲವೇ ಕೆಲವು ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಈ ಬಾರಿ ಕ್ರಾಂತಿ ಸಿನಿಮಾಗೆ ಕನ್ನಡ ಚಿತ್ರರಂಗದ ಪ್ರತಿಯೊಂದು ಮಾಧ್ಯಮಗಳು ಕೂಡ ಬಹಿಷ್ಕಾರವನ್ನು ಹಾಕಿದ್ದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಇದಕ್ಕೆ ಸೆಡ್ಡು ಹೊಡೆಯುವಂತೆ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಮೋಷನ್ ಮಾಡುವ ಮೂಲಕ ಚಿತ್ರಕ್ಕೆ ಒಳ್ಳೆಯ ಪ್ರಚಾರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಕನ್ನಡದ ಬಹುತೇಕ ಎಲ್ಲಾ ದೊಡ್ಡ ದೊಡ್ಡ ಯುಟ್ಯೂಬ್ ಚಾನೆಲ್ ಗಳು ದರ್ಶನ್ ಅವರ ಸಂದರ್ಶನವನ್ನು ಮಾಡಿವೆ ಆದರೆ ಆಂಕರ್ ಅನುಶ್ರೀ(Anchor Anushree) ಅವರ ಚಾನಲ್ನಲ್ಲಿ ಮಾತ್ರ ಡಿ ಬಾಸ್(Dboss) ಕುರಿತಂತೆ ಒಂದೇ ಒಂದು ಕಾರ್ಯಕ್ರಮವು ಕೂಡ ನಡೆದಿಲ್ಲ.

ಹೌದು ಮಿತ್ರರೇ ಕನ್ನಡದ ಅತ್ಯಂತ ದೊಡ್ಡ ಯುಟ್ಯೂಬ್ ಚಾನೆಲ್ ಗಳಲ್ಲಿ ನಿರೂಪಕಿ ಅನುಶ್ರೀ(Anushree) ಅವರ ಯುಟ್ಯೂಬ್ ಚಾನೆಲ್ ಕೂಡ ಒಂದಾಗಿದೆ. ಆದರೆ ದರ್ಶನ ಅವರ ಕುರಿತಂತೆ ಅಥವಾ ಕ್ರಾಂತಿ(Kranti) ಸಿನಿಮಾದ ಕುರಿತಂತೆ ಒಂದೇ ಒಂದು ಸಂದರ್ಶನವನ್ನು ಅವರು ಮಾಡಿರಲಿಲ್ಲ. ಅಪ್ಪು(Appu) ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಮಿತಿಮೀರಿದ ಕಿತ್ತಾಟ ಇದಕ್ಕೆ ಪರಿಣಾಮಕಾರಿಯಾಗಿರಬಹುದು ಎಂಬುದಾಗಿ ಕೆಲವರು ಅನುಮಾನಿಸಿದ್ದಾರೆ. ಮೂಲತಃ ಅನುಶ್ರೀ ಅವರು ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರ ಅಭಿಮಾನಿಯೇ ಆಗಿದ್ದಾರೆ.

ಇತ್ತೀಚೆಗಷ್ಟೇ ನಡೆದಂತಹ ಕನಕಪುರ ಉತ್ಸವದಲ್ಲಿ ಕೂಡ ಅನುಶ್ರೀ(Anushree) ಅವರೇ ಆಂಕರ್ ಆಗಿದ್ದರು. ಈ ಸಂದರ್ಭದಲ್ಲಿ ವಿನಾಕಾರಣ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್(Dboss) ಎಂಬುದಾಗಿ ಕೂಗಿ ಅರಾಚಾಡುತ್ತಿದ್ದರು. ಆಗ ಅನುಶ್ರೀ ಅವರು ಯಾರದ್ದೇ ಅಭಿಮಾನಿಗಳಿರಬಹುದು ಆದರೆ ಬೇರೆಯವರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂಬುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸೃಜನ್ ಲೋಕೇಶ್(Srujan Lokesh) ಕೂಡ ನನ್ನ ಗೆಳೆಯನ ಇಂಟರ್ವ್ಯೂ ಯಾರು ಮಾಡುವುದು ಬೇಡ ನಾನೇ ಮಾಡುತ್ತೇನೆ ಎಂಬುದಾಗಿ ಕೂಡ ಹೇಳಿ ಎಲ್ಲರೂ ಗಮನವನ್ನು ಸೆಳೆದರು.

Leave a Comment

error: Content is protected !!