ಪುನೀತ್ ಅವರಂತೆ ಮತ್ತೊಬ್ಬ ಸ್ಟಾರ್ ನಟನ ಸಾ ವು! ಜಿಮ್ನಲ್ಲೇ ಕುಸಿದು ಬಿದ್ದ ನಟ…ಮನಕಲುಕುವ ದೃಶ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ…

‘ಜನನ ಉಚಿತ ಮರಣ ಖಚಿತ’ ಎಂಬ ಮಾತಿನಂತೆ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಸಾವಿದೆ. ಯಾರು ಇಲ್ಲಿ ಶಾಶ್ವತವಾಗಿ ಬದುಕಲು ಸಾಧ್ಯವಿಲ್ಲ. ಸಾವು ಯಾವಾಗ? ಯಾರನ್ನು ತೆಗೆದುಕೊಂಡು ಹೋಗುತ್ತದೆ? ಎಂಬುದು ಮಾತ್ರ ಯಾರಿಗೂ ತಿಳಿಯದ ವಿಚಾರ. ನೂರು ವರುಷಗಳ ಕಾಲ ಬಾಳುವವರು ಅಲ್ಪ ಮಂದಿ.

ಕರ್ನಾಟಕದ ಹೆಮ್ಮೆಯ ಪುತ್ರ ಪುನೀತ್ ರಾಜಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಕಾಲಿಕ ಮರಣ ಹೊಂದಿರುವುದು ಸಿನಿ ಪ್ರಿಯರಿಗೆ ಇಂದಿಗೂ ನೋವನ್ನು ಕೊಡುತ್ತಿದೆ. ಆರೋಗ್ಯಕರವಾಗಿಯೇ ಇದ್ದ ಪುನೀತ್ ರಾಜಕುಮಾರ್ ಅವರ ಹೃದಯಘಾತವು ಎಲ್ಲರ ಹೃದಯವನ್ನು ಘಾಸಿಗೊಳಿಸಿದೆ. ಅವರಂತೆ ಇನ್ನೊಬ್ಬ ಸ್ಟಾರ್ ನಟನ ಸಾವು ಸಂಭವಿಸಿದೆ. ಎಂದಿನಂತೆ ಜಿಮ್ ನಲ್ಲಿ ವರ್ಕೌಟ್ ಮಾಡ್ತಾ ಇದ್ದಾರಂತೆ. ಇದ್ದಕ್ಕಿದ್ದಂತೆ ಎಲ್ಲರೂ ನೋಡುತ್ತಿರುವಾಗಲೇ ಜಿಮ್ ನಲ್ಲಿ ಕುಸಿದು ಬಿದ್ದರಂತೆ. ಆಯಾಸದಿಂದ ಹೀಗಾಗಿರಬಹುದು ಎಂದು ಅಕ್ಕ ಪಕ್ಕದವರು ಅಂದುಕೊಂಡರಂತೆ, ಆದರೆ ಅದಾಗಲೇ ಆ ಸ್ಟಾರ್ ನಟ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಮುಂಬೈನಲ್ಲಿ ಸಿದ್ದಾಂತವರು ನಿಧನರಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅಭಿಮಾನಿಗಳು ದುಃಖಿತರಾಗಿದ್ದಾರೆ. ಸಿದ್ಧಾಂತ್ ವೀರ ಸೂರ್ಯವಂಶಿ ದೂರದರ್ಶನದಲ್ಲಿ ಹೆಸರುಗಳಿಸಿರುವ ಇವರನ್ನು ಆನಂದ್ ಸೂರ್ಯವಂಶಿ ಎಂದೂ ಕರೆಯುತ್ತಾರೆ. 15 ಡಿಸೆಂಬರ್ 1975 ರಂದು ಜನಿಸಿರುವ ಇವರಿಗೆ 46 ವರ್ಷವಾಗಿತ್ತು. ಕೃಷ್ಣ ಅರ್ಜುನ್, ಕಸೌತಿ ಜಿಂದಗಿ ಕಿ, ಜಮೀನ್ ಸೆ ಆಸಮಾನ್ ತಕ್, ಗೃಹಸ್ತಿ ಸೇರಿದಂತೆ ದೂರದರ್ಶನದ ಹಲವಾರು ಧಾರವಾಹಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಜಿದ್ದಿ ದಿಲ್ ಮಾನೆ ನ, ಕಂಟ್ರೋಲ್ ರೂಂ ಪ್ರಾಜೆಕ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಭೂಲೋಕವನ್ನು ತ್ಯಜಿಸಿ ಕಾಣದ ಲೋಕಕ್ಕೆ ಹೆಜ್ಜೆಯನ್ನು ಇಟ್ಟಿದ್ದಾರೆ.

ಸಿದ್ಧಾಂತವರು ಇರಾ ಅವರ ಜೊತೆ ವಿವಾಹವಾಗಿ ವಿಚ್ಛೇದನದ ಬಳಿಕ ಅಲೇಶಿಯಾ ಎಂಬ ಹುಡುಗಿಯನ್ನು ವಿವಾಹವಾಗುತ್ತಾರೆ. ಆಕೆಗೂ ಅದು ಎರಡನೇ ಮದುವೆಯಾಗಿತ್ತು. ಮಡದಿ ಮಕ್ಕಳನ್ನು ಬಿಟ್ಟು ಸಿದ್ಧಾಂತ ಇಹಲೋಕವನ್ನು ತ್ಯಜಿಸಿದ್ದಾರೆ.

ಚಿತ್ರರಂಗದ ಕಲಾವಿದರು, ಕಿರುತೆರೆಯ ನಟ ನಟಿಯರು ಸೇರಿದಂತೆ ಅಭಿಮಾನಿಗಳು ಕೂಡ ಸಿದ್ದಾಂತವರ ಸಾವಿಗೆ ದುಃಖ ವ್ಯಕ್ತಪಡಿಸುತ್ತಿದ್ದಾರೆ. ‘ಆರೋಗ್ಯವಾಗಿದ್ದರು; ಯಾವುದೇ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಸಿದ್ಧಾಂತವರಿಗೆ ಹೃದಯಘಾತವಾಗಿರುವುದು ನೋವಾಗುತ್ತಿದೆ’ ಎಂದು ಹೇಳುತ್ತಿದ್ದಾರೆ. ಚಿರ ನಿದ್ರೆಗೆ ಜಾರಿದ ಸಿದ್ಧಾಂತವರ ಆತ್ಮಕ್ಕೆ ನೆಮ್ಮದಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.

Leave a Comment

error: Content is protected !!