ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದವನಿಗೆ ಖಡಕ್ ಕೊಟ್ಟ ರ್ನಿಂಗ್ ಬುಲೆಟ್ ಪ್ರಕಾಶ್ ಮಗ ಹೇಳಿದ್ದೇನು?

Bullet prakash son about darshan : ಇಡೀ ಕನ್ನಡ ಚಿತ್ರರಂಗಕ್ಕೆ ಚಿತ್ರರಂಗವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆಯ ವಿರುದ್ಧ ಕೆಂಡಮಂಡಲವಾಗಿ ಕೂತಿದೆ ಎಂದರು ತಪ್ಪಾಗಲಾರದು. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಈಗ ನಿಜ ಸ್ವರೂಪವನ್ನು ಪಡೆದುಕೊಂಡು ಎಲೆಯನ್ನು ಮೀರಿ ಒಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿ ನಿಂತಿದೆ.

ಹೊಸಪೇಟೆಯ ಕ್ರಾಂತಿಯ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಅಪ್ಪು ಅಭಿಮಾನಿಗಳು ಚಪ್ಪಲಿ ಎಸೆತವನ್ನು ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಎಲ್ಲಾ ಕಡೆ ಇದೇ ವಿಚಾರದ ವಿರುದ್ಧವಾಗಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.

ಹೌದು ಮಿತ್ರರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಒಬ್ಬ ಮೇರು ನಟರಲ್ಲಿ ಒಬ್ಬರಾಗಿದ್ದು ಅವರ ವಿರುದ್ಧ ಈ ರೀತಿಯ ಪಿತೂರಿ ಹಾಗೂ ಷಡ್ಯಂತರಗಳು ನಡೆದಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗಕ್ಕೆ ತಲೆತಗ್ಗಿಸಬೇಕಾದ ಪರಿಸ್ಥಿತಿಯನ್ನು ತಂದೊದಗಿಸಿದೆ. ಇನ್ನು ಇದರ ವಿರುದ್ಧ ಸ್ವತಹ ದೊಡ್ಮನೆಯ ಹಿರಿಯ ಮಗ ಆಗಿರುವ ಶಿವಣ್ಣ ಅವರ ವಿಡಿಯೋ ಮಾಡಿ ಈ ಕೃತ್ಯವನ್ನು ಮಾಡಿದವರ ವಿರುದ್ಧ ತಮ್ಮ ಅಸಮಾಧಾನವನ್ನು ತೋರ್ಪಡಿಸಿದ್ದಾರೆ.

ಇನ್ನು ಚಿತ್ರರಂಗದ ತರುಣ್ ಸುಧೀರ್, ಧನ್ವೀರ್, ಸುಮಲತಾ ಅಂಬರೀಶ್, ಹೀಗೆ ಬಹುತೇಕ ಎಲ್ಲಾ ಕಲಾವಿದರು ಕೂಡ ದರ್ಶನ್ ರವರ ವಿರುದ್ಧ ನಡೆದಿರುವ ಈ ಕೃತ್ಯದ ವಿರುದ್ಧ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದಕ್ಕೆ ಬುಲೆಟ್ ಪ್ರಕಾಶ್ ಅವರ ಮಗ ಆಗಿರುವ ರಕ್ಷಕ್ ಕೂಡ ಸೇರ್ಪಡೆಯಾಗಿದ್ದಾರೆ. ರಕ್ಷಕ್ ಏನನ್ನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Bullet prakash son about darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ನಡೆದಿರುವ ಈ ಘಟನೆಯನ್ನು ನೋಡಿ ನನಗೂ ಕೂಡ ತುಂಬಾ ಬೇಸರವಾಯಿತು. ಅವರು ಬಂಡೆ ಇದ್ದಹಾಗೆ ಇಂತದ್ದು ಅವರಿಗೆ ಏನು ತಾಗುವುದಿಲ್ಲ ಅವರು ಮುನ್ನಡೆಯುತ್ತಾರೆ ಆದರೆ ಕರ್ಮ ಎನ್ನುವುದು ಭೂಮರಾಂಗ್ ಇದ್ದಹಾಗೆ ಅದು ನಿಮಗೂ ಕೂಡ ಬರುತ್ತದೆ ಎಂಬುದಾಗಿ ಬುಲೆಟ್ ಪ್ರಕಾಶ್ ಅವರ ಪುತ್ರ ಆಗಿರುವ ರಕ್ಷಕ್ ವಿಡಿಯೋದಲ್ಲಿ ಹೇಳಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!