ಬಿಗ್ ನ್ಯೂಸ್: ಮತ್ತೆ ಒಂದಾಗಲಿದ್ದಾರೆ ಕಿಚ್ಚ ದಚ್ಚು! ಎಲ್ಲಿ ಯಾವಾಗ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಬಿಟ್ಟರೆ ಸ್ನೇಹಕ್ಕೆ ಸಿಂಬಲ್ ಆಗಿ ಕುಚಿಕುಗಳಾಗಿ ಇದ್ದರು. ಆದರೆ ನಂತರ ಇವರ ಸ್ನೇಹಕ್ಕೆ ಯಾರ ಕಣ್ಣು ಬಿತ್ತೇನು ಗೊತ್ತಿಲ್ಲ ಇಬ್ಬರೂ ಕೂಡ ದುಷ್ಮನ್ ಗಳಾಗುತ್ತಾರೆ. ಇದು ನಿಜಕ್ಕೂ ಕೂಡ ಅವರಿಬ್ಬರನ್ನು ಒಟ್ಟಾಗಿ ನೋಡಬೇಕೆಂಬುದಾಗಿ ಅಂದುಕೊಂಡಿದ್ದ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಮೂಡಿಸುತ್ತದೆ.

ಕೇವಲ ನಟರ ನಡುವಿನ ಮುನಿಸು ಮಾತ್ರವಲ್ಲದೆ ಅವರಿಬ್ಬರನ್ನು ಪ್ರೀತಿಸುವ ಅಭಿಮಾನಿಗಳ ನಡುವೆ ಕೂಡ ಪರಸ್ಪರ ನಟರ ವಿರುದ್ಧವಾಗಿ ಜಗಳಗಳು ಸೋಶಿಯಲ್ ಮೀಡಿಯಾದಲ್ಲಿ ಕೂಡ ನಡೆಯುತ್ತವೆ. ಇನ್ನು ಇವರಿಬ್ಬರೂ ಒಂದಾಗುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಆಸೆಯಿಂದ ಇದ್ದರೂ ಆದರೆ ಅಂತಹ ಹಲವಾರು ಮಹತ್ವದ ಸಮಯಗಳು ಬಂದರೂ ಕೂಡ ಇಬ್ಬರು ಒಬ್ಬರ ಮುಖವನ್ನೊಬ್ಬರು ನೋಡಲು ಮುಂದೆ ಬರಲಿಲ್ಲ. ಆದರೆ ಈಗ ಇಬ್ಬರೂ ಕೂಡ ಒಂದಾಗಬಹುದು ಎನ್ನುವ ಆಶಾ ಕಿರಣ ಉದಯವಾಗಿದೆ ಎಂದು ಹೇಳಬಹುದಾಗಿದೆ.

ಹೌದು ಮಿತ್ರರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಅಥವಾ ಡಾಕ್ಯುಮೆಂಟರಿ ಸಿನಿಮಾ ಆಗಿರುವ ಗಂಧದಗುಡಿ ಇದೆ ಅಕ್ಟೋಬರ್ 28ರಂದು ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ. ಇದೇ ಸಂದರ್ಭದಲ್ಲಿ ಗಂಧದಗುಡಿ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೆ ಅಕ್ಟೋಬರ್ 21ರಂದು ಬಿಡುಗಡೆಗು ಮುನ್ನ ಪೂರ್ವಭಾವಿಯಾಗಿ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ನಮ್ಮ ಭಾರತೀಯ ಚಿತ್ರರಂಗದ ಹಲವಾರು ಭಾಗಗಳ ಪ್ರಮುಖ ಕಲಾವಿದರು ಪ್ರಮುಖ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಹೆಸರು ಕೂಡ ಇದೆ. ಹೀಗಾಗಿ ಖಂಡಿತವಾಗಿ ಈ ವೇದಿಕೆಯ ಮೇಲೆ ಕಿಚ್ಚ ಹಾಗೂ ದಚ್ಚು ಇಬ್ಬರೂ ಕೂಡ ತಮ್ಮ ಗೆಳೆಯ ಅಪ್ಪುವಿಗಾಗಿ ಒಂದಾಗಲಿದ್ದಾರೆ ಎಂಬುದಾಗಿ ಕನ್ನಡ ಚಿತ್ರರಂಗದ ವಲಯಗಳಲ್ಲಿ ಮಾತುಕತೆ ಕೇಳಿ ಬರುತ್ತಿದೆ. ಇವರಿಬ್ಬರೂ ಮತ್ತೆ ಒಂದಾಗ್ತಾರೆ ಅಥವಾ ಮಾಮೂಲಿನಂತೆ ಒಬ್ಬರು ಬಂದು ಹೋದ ನಂತರ ಇನ್ನೊಬ್ಬರು ಬರ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!