ಡಿ ಕೆ ರವಿ ಸತ್ತಾಗ ಹಣ ಸಹಾಯ ಮಾಡಿದ್ದು ಪುನೀತ್ ರಾಜಕುಮಾರ್ ಒಬ್ಬರೇ ಎಂದು ಪುನೀತ್ ಸ್ಮಾರಕದ ಮುಂದೆ ಅಳಲನ್ನು ತೋಡಿಕೊಂಡ ಡಿಕೆ ರವಿ ತಾಯಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಾಡಿರುವ ಸಿನಿಮಾ ಕೆಲಸಗಳ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದೇ ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಮಾಡಿರುವಂತಹ ಸಮಾಜ ಸೇವೆಗಳು ಹಾಗೂ ಬಡವರಿಗೆ ಮಾಡಿರುವ ಸಹಾಯಗಳು ನಿಜಕ್ಕೂ ಕೂಡ ಈಗ ಒಂದೊಂದಾಗಿ ಹೊರ ಬರುತ್ತಿವೆ.

ಅವರು ಯಾವ ಮಟ್ಟಿಗೆ ಕರ್ನಾಟಕ ರಾಜ್ಯದಲ್ಲಿ ಸೇರಿದಂತೆ ಹೊರಗಡೆ ಕೂಡ ಅಭಿಮಾನಿಗಳನ್ನು ಹಾಗೂ ಹಿತೈಷಿಗಳನ್ನು ಸಂಪಾದಿಸಿದ್ದಾರೆ ಎಂದರೆ ಅವರ ಕೊನೆಯ ದರ್ಶನಕ್ಕೆ ಬಂದ 25 ಲಕ್ಷಕ್ಕೂ ಮೀರಿದ ಜನರ ಸಂಖ್ಯೆಯೇ ನಿಮಗೆ ಜೀವಂತ ಉದಾಹರಣೆಯಾಗಿದೆ ಎಂದು ಹೇಳಬಹುದಾಗಿದೆ. ಎಲ್ಲೂ ಕೂಡ ತಾನೊಬ್ಬ ನಟ ಸ್ಟಾರ್ ಎನ್ನುವ ಅಹಂ ತೋರಿದವರಲ್ಲ ನಮ್ಮ ನೆಚ್ಚಿನ ಅಪ್ಪು.

ನಿಮಗೆಲ್ಲರಿಗೂ ನೆನಪಿರಬಹುದು ಡಿಕೆ ರವಿ ಅವರ ಜೀವನವನ್ನು ಇಟ್ಟುಕೊಂಡು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಮ್ಮೆ ಮೈತ್ರಿ ಎನ್ನುವ ಸಿನಿಮಾವನ್ನು ಕೂಡ ಮಾಡಿದ್ದರು ಅದರಲ್ಲಿ ಅವರು ನಾಯಕ ನಟನಾಗಿ ಕಾಣಿಸಿಕೊಂಡು ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ಜಿಲ್ಲಾಧಿಕಾರಿಯಾಗಿ ತಿದ್ದುವ ಪ್ರಯತ್ನವನ್ನು ಮಾಡಿರುವ ಕಥೆಯದಾಗಿತ್ತು. ಇನ್ನು ಡಿಕೆ ರವಿ ಅವರು ಕೂಡ ಮರಣ ಹೊಂದಿದ ಸಂದರ್ಭದಲ್ಲಿ ಅವರ ತಂದೆ ತಾಯಿಗೆ ಮಾಡಿರುವಂತಹ ಸಹಾಯವನ್ನು ಈಗ ಡಿಕೆ ರವಿ ಅವರ ತಾಯಿ ಅಪ್ಪು ಅವರ ಸಮಾಧಿ ಮುಂದೆ ಬಂದು ನಿಂತು ಹೇಳಿಕೊಳ್ಳುತ್ತಿದ್ದಾರೆ.

ಹೌದು ಡಿಕೆ ರವಿ ಅವರು ತೀರಿಕೊಂಡಿದ್ದಾಗ ಡಿಕೆ ರವಿ ಅವರ ತಂದೆ ತಾಯಿಯನ್ನು ಕರೆದುಕೊಂಡು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿದ್ದಗಂಗಾ ಮಠಕ್ಕೆ ಹೋಗಿ ನಿಮಗೆ ನಿಮ್ಮ ಮಗ ಇಲ್ಲ ಎಂಬುದಾಗಿ ಬೇಸರ ಮಾಡಿಕೊಳ್ಳಬೇಡಿ ಇನ್ನು ಮುಂದೆ ನಾನು ನಿಮ್ಮ ಮಗನಂತೆ ನಿಂತು ನೋಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿ ಐವತ್ತು ಸಾವಿರ ರೂಪಾಯಿ ಚೆಕ್ ನೀಡಿ ಮುಂದೆ ಯಾವುದೇ ಸಹಾಯ ಬೇಕು ಎಂಬುದಾಗಿ ಅನಿಸಿದರೆ ಕೂಡ ಕೂಡಲೇ ನನಗೆ ಹೇಳಿ ನಾನೇ ಬಂದು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿದರಂತೆ. ಇದಕ್ಕೆ ಅಲ್ವಾ ಹೇಳೋದು ಅಪ್ಪು ಗ್ರೇಟ್ ಅಂತ.

Leave a Comment

error: Content is protected !!