Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ನಟಿಸಿರುವಂತಹ ಕ್ರಾಂತಿ(Kranti) ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸಿದ ಬೆನ್ನಲ್ಲೇ ದರ್ಶನ್ ಅವರು ಅಭಿಮಾನಿಗಳ ಮೇಲಿನ ಪ್ರೀತಿಯಿಂದ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿಸ್ ಎನ್ನುವುದಾಗಿ ಹಚ್ಚು ಹಾಕಿಸಿಕೊಂಡು ಅಭಿಮಾನಿಗಳ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ. ಇದು ಈಗಾಗಲೇ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದೆಲ್ಲೆಡೆ ವೈರಲ್ ಆಗುತ್ತಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಈ ಕಾರ್ಯದ ಕುರಿತಂತೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಿದ್ದು ಆಗದವರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಇದು ಬಾಲಿಶತನ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಅದೇನೇ ಇರಲಿ ಈ ರೀತಿ ಮಾಡಲು ಒಬ್ಬ ಸೆಲೆಬ್ರಿಟಿ ನಿಜಕ್ಕೂ ಕೂಡ ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿಯನ್ನು ಹಾಗೂ ಈ ಕಾರ್ಯವನ್ನು ಮಾಡಲು ಧೈರ್ಯವನ್ನು ಹೊಂದಿರಬೇಕು. ಆದರೆ ಈ ಧೈರ್ಯ ಇದೆ ಮೊದಲಲ್ಲ ಇದಕ್ಕೂ ಮುನ್ನ ಕನ್ನಡದ ಸ್ಟಾರ್ ನಟನೊಬ್ಬ ಈ ರೀತಿ ಮಾಡಿಕೊಂಡಿದ್ದರು.
ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಬ್ಲಾಕ್ ಕೋಬ್ರಾ ದುನಿಯಾ ವಿಜಯ್(Duniya Vijay) ಅವರ ಬಗ್ಗೆ. ನಟ ದುನಿಯಾ ವಿಜಯ್ ಅವರು ತಮ್ಮ ಅಭಿಮಾನಿಗಳ ಹಾಗೂ ತಾವು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ತಾಯಿಯ ನೆನಪಿಗಾಗಿ 2016ರಲ್ಲೇ ಅವ್ವ ಅಭಿಮಾನಿ ಎನ್ನುವ ಹಚ್ಚೆಯನ್ನು ಹಾಕಿಸಿಕೊಂಡಿದ್ದರು. ಇದು ಈಗ ಬೆಳಕಿಗೆ ಬರುತ್ತಿರುವಂತಹ ವಿಚಾರವಾಗಿದೆ.
ಇನ್ನು ಜೇಮ್ಸ್ ಚಿತ್ರಿಕರಣದ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾಗಿರುವ ಕಿಶೋರ್ ಪತಿಕೊಂಡವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ನನ್ನ ಎದೆಯ ಮೇಲೆ ಅಭಿಮಾನಿಗಳೇ ದೇವರು ಎನ್ನುವ ಹಚ್ಚೆಯನ್ನು ಹಾಕಿಸಿಕೊಳ್ಳಬೇಕು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಒಟ್ಟಾರೆಯಾಗಿ ಹಚ್ಚೆಯ ವಿಚಾರ ಎರಡು ಮೂರು ದಿನಗಳಿಂದ ಸ್ಯಾಂಡಲ್ವುಡ್ ನಲ್ಲಿ ದೊಡ್ಡಮಟ್ಟದಲ್ಲಿ ಓಡಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತಹ ಹಳೆಯ ವಿಚಾರಗಳು ಒಂದೊಂದೇ ಹೊರಬರುತ್ತವೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.