ದರ್ಶನ್ ಹಾಗೂ ಯಶ್ ನಡುವೆ ದುಷ್ಮನಿ ಇದೆ ಎನ್ನುವವರಿಗೆ ಮುಖಕ್ಕೆ ಹೊಡೆದಂತಿದೆ ನೋಡಿ ಈ ವಿಡಿಯೋ

ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕನ್ನಡ ಚಿತ್ರರಂಗದ ಜೋಡೆತ್ತುಗಳು ಎಂಬುದಾಗಿ ಕರೆಯಲಾಗುತ್ತದೆ. ಇಬ್ಬರೂ ಕೂಡ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ಸುಮಲತಾ ಅಂಬರೀಶ್ ಹಾಗೂ ಅವರ ಕುಟುಂಬವನ್ನು ದೊಡ್ಡ ಬೆಂಬಲವಾಗಿ ಹಿಂದೆ ನಿಂತು ರಕ್ಷಿಸಿದವರು ಎಂದರೆ ತಪ್ಪಾಗಲಾರದು. ಇಂದಿಗೂ ಕೂಡ ಸುಮಲತಾ ಅಂಬರೀಶ್ ಇವರಿಬ್ಬರನ್ನು ತಮ್ಮ ಮಕ್ಕಳ ಸ್ಥಾನದಲ್ಲಿಟ್ಟು ನೋಡಿಕೊಳ್ಳುತ್ತಾರೆ.

ಇನ್ನು ಕೆಲವು ವರ್ಷಗಳ ಹಿಂದೆ ಹೋದರೆ ಹಾಗೂ ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ನಿಜ ಜೀವನದಲ್ಲಿ ಯಶ್ ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ದುಷ್ಮನಿ ಇದೆ ಹೀಗಾಗಿ ಇದನ್ನೇ ನಟರ ನಡುವೆ ಕೂಡ ಇದೆ ಎಂಬುದಾಗಿ ಅವರ ಅಭಿಮಾನಿಗಳು ಕಲ್ಪಿಸಿಕೊಳ್ಳುತ್ತಾರೆ. ಅವರು ವೇದಿಕೆ ಮೇಲೆ ಎಷ್ಟೇ ಚೆನ್ನಾಗಿದ್ದರೂ ಕೂಡ ಅಭಿಮಾನಿಗಳು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವುದು ನಿಜಕ್ಕೂ ಕೂಡ ವಿಪರ್ಯಾಸವೇ ಸರಿ ಎಂದು ಹೇಳಬಹುದಾಗಿದೆ.

ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಬ್ಬರೂ ಕೂಡ ಹಲವಾರು ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಪರಸ್ಪರ ಭೇಟಿ ಆಗುತ್ತಲೇ ಇರುತ್ತಾರೆ. ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಬೇರೆ ಎಲ್ಲಾ ನಟರಿಗಿಂತ ಹೆಚ್ಚಾಗಿ ಆತ್ಮೀಯತೆಯನ್ನು ಹೊಂದಿದ್ದಾರೆ ಎಂದು ಹೇಳಿದರು ಕೂಡ ಅತಿಶಯೋಕ್ತಿ ಅನಿಸಲಾರದು.

ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಅವರು ಇಬ್ಬರೂ ಕೂಡ ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಗಮನಕ್ಕೆ ಬಂದಿತ್ತು ಹಾಗೂ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕೂಡ ಈಗಾಗಲೇ ವೈರಲ್ ಆಗಿದ್ದು ಇವರಿಬ್ಬರ ಸ್ನೇಹದ ಗಾಢತೆ ಎಷ್ಟಿದೆ ಎಂಬುದು ಇದರ ಮೂಲಕ ತಿಳಿದು ಬಂದಿದೆ.

ನೀವು ಯಾವಾಗಲೂ ಗಮನಿಸಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಶ್ ಅವರನ್ನು ನಮ್ಮ ಹೀರೋ ಎಂಬುದಾಗಿ ಕರೆಯುತ್ತಾರೆ. ಇನ್ನು ಯಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ದರ್ಶನ್ ಸರ್ ಎಂಬುದಾಗಿ ಕರೆಯುತ್ತಾರೆ. ಇವರಿಬ್ಬರ ನಡುವೆ ಸ್ನೇಹ ಸಂಬಂಧವಿದೆ ಅದನ್ನೇ ಅಭಿಮಾನಿಗಳು ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂಬುದು ಎಲ್ಲರೂ ನೆನಪಿಟ್ಟುಕೊಳ್ಳಿ ಎಂಬುದಾಗಿ ಹೇಳುತ್ತೇವೆ.

Leave a Comment

error: Content is protected !!