ರಾಣಿ ತರಹ ನೋಡ್ಕೋತಿನಿ ಅಂತ ಹೇಳಿದ ಪ್ರಿಯಕರನ ನನ್ನು ನಂಬಿ ಹೋದ ಸುಂದರ ಯುವತಿ ನಾಲ್ಕೇ ತಿಂಗಳಿನಲ್ಲಿ ಶಿವನ ಪಾದ ಸೇರಿ ಕೊಡಳು

ಪ್ರೀತಿಸಿದವರನ್ನು ಮದುವೆಯಾದರೆ ಬದುಕು ಚಂದವಾಗಿರುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಾರೆ. ಆದರೆ ಮೈಸೂರು ಮೂಲದ ನಿಹಾರಿಕ ಎನ್ನುವ ಹೆಣ್ಣು ಮಗಳು ಪ್ರೀತಿಸಿದವನನ್ನು ಮದುವೆಯಾಗಿ ನಾಲ್ಕೇ ತಿಂಗಳಿಗೆ ತಾನೆ ತನ್ನ ಕೈಯಾರೆ ತನ್ನ ಜೀವನವನ್ನು ಮುಗಿಸಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ. ಕಾರ್ತಿಕ್ ಎನ್ನುವನನ್ನು ಪ್ರೀತಿಸಿ ಮದುವೆಯಾಗಿ ಮದುವೆಯಾದ ನಂತರ ಟೀಚಿಂಗ್ ಕೆಲಸ ಮಾಡಿಕೊಂಡು ಸುಖವಾಗಿದ್ದಳು.

ಇನ್ನು ಎಂಜಿನಿಯರಿಂಗ್ ಮಾಡಿದ್ದ ಕಾರ್ತಿಕ್ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಇದೇ ಶನಿವಾರ ಪುಟ್ಟೇನಹಳ್ಳಿಯ ಮನೆಯಲ್ಲಿ ನಿಹಾರಿಕಾ ಹಗ್ಗದ ಕುಣಿಕೆಗೆ ತನ್ನ ಜೀವವನ್ನೇ ಪೂರ್ತಿಯಾಗಿ ಕಳೆದುಕೊಂಡಿದ್ದಳು. ಇದೇ ವರ್ಷದ ಜೂನ್ ತಿಂಗಳಿನಲ್ಲಿ ನಿಹಾರಿಕ ಹಾಗೂ ಕಾರ್ತಿಕ್ ಜೋಡಿ ಮದುವೆಯಾಗಿದ್ದರು. ಇವರಿಬ್ಬರ ನಡುವೆ ಜಗಳ ಹಸೆಮಣೆ ಏರಿದ ದಿನದಿಂದಲೂ ಕೂಡ ಪ್ರಾರಂಭವಾಗಿತ್ತಂತೆ.

ಆರಂಭದಿಂದಲೂ ಕೂಡ ನಿಹಾರಿಕ ಮೇಲೆ ಪ್ರತಿಯೊಂದು ವಿಚಾರಕ್ಕೆ ಅನುಮಾನ ಪಟ್ಟು ಆಕೆಯ ಮೇಲೆ ದನಕ್ಕೆ ಹೊ’ಡೆದಂತೆ ಹೊಡೆಯುತ್ತಿದ್ದನಂತೆ. ತನ್ನ ಗಂಡನ ವಿಚಿತ್ರ ಮನೋಭಾವದಿಂದ ನಿಹಾರಿಕ ಸಂಪೂರ್ಣವಾಗಿ ರೋಸಿ ಹೋಗಿದ್ದಳು. ಕಾರ್ತಿಕ್ ನೀಡುವ ಈ ಉಪಟಳದ ಬಗ್ಗೆ ತನ್ನ ತಂದೆ ತಾಯಿಗೆ ಕೂಡ ನಿಹಾರಿಕಾ ಈ ಮೊದಲೇ ಹೇಳಿದ್ದಳು. ಇನ್ನು ಇತ್ತೀಚಿಗಷ್ಟೇ, ಸ್ಕೂಲಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಡಲು ಪ್ರಾರಂಭಿಸಿದಾಗ ಸ್ಕೂಲು ಬೇಡ ಏನು ಬೇಡ ಅಲ್ಲಿನ ವ್ಯಕ್ತಿಗಳ ಜೊತೆಗೆ ನಿನ್ನ ಬೇಡದ ಸಂಬಂಧವು ಬೇಡ ಎಂಬುದಾಗಿ ಹೇಳಿದ್ದು ನಿಹಾರಿಕಾಳಿಗೆ ಮಾನಸಿಕವಾಗಿ ಸಾಕಷ್ಟು ದುಃಖವನ್ನು ತರಿಸಿತ್ತು.

ಇದೇ ಕಾರಣಕ್ಕಾಗಿ ಆಕೆ ತನ್ನ ಮನೆಯಲ್ಲಿ ತಾನು ತನ್ನ ಜೀವವನ್ನು ಕಳೆದುಕೊಂಡಿದ್ದಾಳೆ ಎಂಬುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ನಿಜಕ್ಕೂ ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ತನ್ನ ಜೀವನವನ್ನು ಮುಗಿಸಿಕೊಂಡಿರುವ ಆಕೆ ತನ್ನ ಗಂಡನಿಂದಾಗಿ ಯಾವ ರೀತಿಯಲ್ಲಿ ಮಾನಸಿಕವಾಗಿ ಕಷ್ಟವನ್ನು ಪಡುತ್ತಿದ್ದಳು ಎಂಬುದನ್ನು ನೀವು ಅರ್ಥೈಸಿಕೊಳ್ಳಬಹುದಾಗಿದೆ.

Leave a Comment

error: Content is protected !!