ರಾಮಾಯಣ ಕಥೆ ಆಧಾರಿತ ಸಿನಿಮಾ ಮಾಡುತ್ತೇವೆ ಎಂಬುದಾಗಿ ಕೆಲವು ವರ್ಷಗಳ ಹಿಂದೆಯಷ್ಟೇ ತಾನಾಜಿ ಸಿನಿಮಾದ ನಿರ್ದೇಶಕ ಓಂ ರಾವತ್ ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಆದಿಪುರುಷ್ ಎನ್ನುವ ಹೆಸರನ್ನು ಕೂಡ ಇಟ್ಟು ಸಿನಿಮಾಗೆ ನಾಯಕನಾಗಿ ರೆಬೆಲ್ ಸ್ಟಾರ್ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ ಅದು ಕೂಡ ರಾಮನ ಪಾತ್ರದಲ್ಲಿ ಎಂಬುದಾಗಿ ಕೂಡ ತಿಳಿಸಿರುತ್ತಾರೆ.
ಎಲ್ಲರೂ ಕೂಡ ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನು ರಾಮನ ಪಾತ್ರದಲ್ಲಿ, ಕೃತಿ ಸನೋನ್ ಅವರನ್ನು ಸೀತೆಯ ಪಾತ್ರದಲ್ಲಿ ಹಾಗೂ ಸೈಫ್ ಅಲಿ ಖಾನ್ ಅವರನ್ನು ದಶಕಂಠ ರಾವಣನ ಪಾತ್ರದಲ್ಲಿ ಕಾಣಲು ಕಾತುರರಾಗಿದ್ದರು. ಆದರೆ ನಿನ್ನೆ ಬಿಡುಗಡೆಯಾದ ಆದಿಪುರುಷ ಸಿನಿಮಾದ ಟೀಸರ್ ನೋಡಿದವರಿಗೆ ಸಂಪೂರ್ಣವಾಗಿ ನಿರಾಶೆ ಕಾದಿತ್ತು ಎಂದರೆ ತಪ್ಪಾಗಲಾರದು. ಯಾಕೆಂದರೆ ಸಿನಿಮಾದ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಯಲ್ಲಿ ಒಂದು ಪರ್ಸೆಂಟ್ ಕೂಡ ಪೂರ್ತಿ ಆಗಲಿಲ್ಲ ಎಂಬುದು ತಿಳಿದು ಬಂದಿದೆ.
ಸಿನಿಮಾವನ್ನು ಸಂಪೂರ್ಣವಾಗಿ ಕಾರ್ಟೂನ್ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ಟೀಸರ್ ನೋಡಿದ ನಂತರ ನಿಮಗೆ ತಿಳಿದು ಬರುತ್ತದೆ. ಇನ್ನು ಸಿನಿಮಾದ ವಿಎಫ್ಎಕ್ಸ್ ಹಾಗೂ ಗ್ರಾಫಿಕ್ಸ್ ಅಂತೂ ತೀರಾ ಕಳಪೆ ಮಟ್ಟದ್ದಾಗಿದೆ. ರಾಮ ಹಾಗೂ ರಾವಣ ಪಾತ್ರಗಳಲ್ಲಿ ಕೂಡ ಹಲವಾರು ತಪ್ಪುಗಳನ್ನು ನಾವು ಯಾವುದೇ ಕಷ್ಟಪಡದೆ ಹುಡುಕಬಹುದಾಗಿದೆ. ಇನ್ನು ಸಿನಿಮಾದಲ್ಲಿ ಹೆಚ್ಚು ಕಲಾವಿದರು ನಟಿಸಿಲ್ಲ ಕೇವಲ ಕಾರ್ಟೂನ್ ಹಾಗೂ ಅನಿಮೇಷನ್ ಪಾತ್ರಗಳನ್ನು ಮಾತ್ರ ಇಡಲಾಗಿದೆ ಎಂಬುದು ಕೂಡ ಸಂಪೂರ್ಣವಾಗಿ ತಿಳಿದು ಬರುತ್ತಿದೆ.
ಯೂಟ್ಯೂಬ್ ನಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆ ಹಾಗೂ ಲಕ್ಷಾಂತರ ಲೈಕ್ಸ್ ಗಳು ಸಿಗಬಹುದು ಆದರೆ ಸಿನಿಮಾದ ಬಗ್ಗೆ ಪ್ರೇಕ್ಷಕರು ಸಂಪೂರ್ಣವಾಗಿ ಮುನಿಸಿಕೊಂಡಿದ್ದಾರೆ. ರಾಮಾಯಣ ಹಿನ್ನೆಲೆಯ ಕಥೆಯನ್ನು ತೆಗೆದುಕೊಂಡು ನೀವು ಆ ಪವಿತ್ರ ಕಥೆಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಿದ್ದೀರಿ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ನೀವು ಈ ಮೂಲಕ ಬಾಲಿವುಡ್ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಗ್ಯತೆಯನ್ನು ಹೊಂದಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.