ರೋಡ್ ರೋಡಲ್ಲಿ ಪೈಂಟ್ ಬಳಿಯುತ್ತಿದ್ದ ಕಾಕ್ರೋಚ್ ಸುಧಿಯನ್ನ ಹೀರೋ ಮಾಡ್ತೀನಿ ಅಂತ ಹೇಳಿದ್ದ ಅಪ್ಪು

ಮಾರ್ಚ್ 6 1982 ರಲ್ಲಿ ಜನಿಸಿದ ಸುಧಿ ಕಾಕ್ರೋಚ್ ಇವರಿಗೀಗ 40 ವರ್ಷ. ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ KEN ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ, ವಿಜ್ವಲ್ ಆರ್ಟ್ಸ್ ಅನ್ನು ಓದಿ ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು.ಶ್ರೀ ಆರ್ಟ್ಸ್ನ ಮೂಲಕ ವಾಲ್ ಪೇಂಟಿಂಗ್, ಇಂಟೀರಿಯರ್ ಡೆಕೋರೇಷನ್, ವಿಂಡೋ ಆರ್ಟ್ ಹೇಗೆ ವಿವಿಧ ಕಾರ್ಯಗಳನ್ನು ಮಾಡಿ ಕಲಾಕಾರನಾಗಿ ಗುರುತಿಸಿಕೊಂಡರು.

2012ರಲ್ಲಿ ಅಲೆಮಾರಿ ಚಿತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಇವರು ಟಗರು ಚಿತ್ರದಲ್ಲಿ ಕಾಕ್ರೋಚ್ ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದರಿಂದ ಸುಧಿ ಅವರಿಗೆ ಕಾಕ್ರೋಚ್ ಎಂಬುದೇ ನಿಕ್ ನೇಮ್ ಆಯ್ತು.ಪಾಪ್ಕಾರ್ನ್ ಮಂಕಿ ಟೈಗರ್, ಸಲಗ, ರಾಬರ್ಟ್, ಐರಾವತ, ಜಟ್ಟ, ಕಡ್ಡಿಪುಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಿ ಕಾಕ್ರೋಚ್ ಅವರು ಪುನೀತ್ ರಾಜಕುಮಾರ್ ಅವರೊಂದಿಗೆ ಮೈತ್ರಿ, ದೊಡ್ಮನೆ ಹುಡುಗ, ಯುವರತ್ನ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಸುಧೀ ಕಾಕ್ರೋಚ್ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ ವಿಡಿಯೋ ತುಂಬಾ ವೈರಲ್ ಆಗ್ತಿದೆ. ಸಂದರ್ಶನಕಾರರು “ನೀವು ಶಿವಣ್ಣ, ದುನಿಯಾ ವಿಜಯ್ ಸೇರಿದಂತೆ ಹಲವು ನಟರ ಜೊತೆ ಕೆಲಸ ಮಾಡಿದ್ದೀರಿ. ಅಂತಯೇ ಪುನೀತ್ ರಾಜಕುಮಾರ್ ಅವರ ಜೊತೆಯಲ್ಲಿಯೂ ಕೆಲಸ ಮಾಡಿದ್ದೀರಿ. ನಾನು ಕೇಳಿದ ಹಾಗೆ ಪುನೀತ್ ರಾಜಕುಮಾರ್ ಅವರು ತಮ್ಮ ಜೊತೆಗಾರರಿಗೆ ಏನಾದರೂ ಒಳ್ಳೆಯದನ್ನು ನೀಡಿರುತ್ತಾರೆ; ಅಪ್ಪು ಅವರಿಂದ ನಿಮಗೆ ಖುಷಿಯಾಗುವಂತಹ ಏನಾದರೂ ದೊರಕಿದೆಯೇ?” ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ಪ್ರತಿಯಾಗಿ ಉತ್ತರ ನೀಡಿದ ಸುಧಿ ಕಾಕ್ರೋಚ್ ಅವರು “ನಾನು ಮೆಚ್ಚಿಸಿಕೊಳ್ಳುವುದಕ್ಕಾಗಿ ಹೇಳುತ್ತಿಲ್ಲ; ಪುನೀತ್ ಸರ್ ಅವರ ಒಳ್ಳೆಯದನ್ನು ತಿಳಿಸುವುದಕ್ಕಾಗಿ ಹೇಳುತ್ತಿದ್ದೇನೆ. ಅಪ್ಪು ಸರ್ ನ ಆಪ್ತರಿಗೆಲ್ಲರಿಗೂ ಈ ವಿಚಾರ ತಿಳಿದಿದೆ. ಇಂದು ಅಪ್ಪು ಸರ್ ಇದ್ದಿದ್ರೆ ಅವರ ಪಿಆರ್‌ಕೆ ಪ್ರೊಡಕ್ಷನ್ ನಲ್ಲಿ, ಅಪ್ಪು ಅವರು ಪ್ರೊಡ್ಯೂಸರ್ ಆಗಿ ಮಾಡುವ ಚಿತ್ರಕ್ಕೆ ನಾನು ಹೀರೋ ಆಗ್ತಿದ್ದೆ”.

“ಆದರೆ ಈಗ ಅಪ್ಪು ಸರ್ ಇಲ್ಲದೆ ಬೇರೊಬ್ಬರು ಪ್ರೊಡ್ಯೂಸರ್ ಆಗಿ ಸಿನಿಮಾದ ಎಲ್ಲಾ ತಯಾರಿಗಳು ನಡೆದಿದೆ. ಭೀಮ ಚಿತ್ರವನ್ನು ಮುಗಿಸಿ ನಾನು ಅದೇ ಚಿತ್ರಕ್ಕಾಗಿ ಕೆಲಸ ಮಾಡುವೆ. ಅಪ್ಪು ಸರ್ ಎಲ್ಲಿ? ನಾನೆಲ್ಲಿ? ನನ್ನನ್ನು ಕರೆದು ಕೂರಿಸಿ ಮೂರು ಗಂಟೆಗಳ ಕಾಲ ನನ್ನ ಕಥೆಯನ್ನು ಕೇಳಿ, ಬೆನ್ನು ತಟ್ಟಿ ಒಪ್ಪಿದ್ದಾರೆ. ದೊಡ್ಮನೆ ಕುಟುಂಬದಲ್ಲೇ ಮೂರ್ನಾಲ್ಕು ಜನ ನಾಯಕರಾಗಿ ಅಭಿನಯಿಸುವಾಗ, ಬೀದಿಯಲ್ಲಿ ಪೇಂಟ್ ಬಳಿಯುವ ಹುಡುಗನಾದ ನನ್ನಂತವನಿಗೂ ಅವಕಾಶ ನೀಡಿರುವುದು ನನಗೆ ಅಪ್ಪು ಸರ್ ನಿಂದ ದೊರೆತ ಉಡುಗೊರೆ…

ಇದಕ್ಕಿಂತ ಹೆಚ್ಚಾಗಿ ನನಗೇನು ಬೇಕು? ಮೊದಲು ಬ್ರಷ್ ನಿಂದ ಪೇಂಟ್ ಮಾಡಿ ಬದುಕುತ್ತಿದ್ದೆ.. ಈಗ ಅಂತಹದ್ದೇ ಬ್ರೆಶ್ ನಿಂದ ಮುಖದ ಮೇಲೆ ಬಣ್ಣ ಬೀಳುತ್ತಿದೆ. ಅಪ್ಪು ಅವರು ನಮ್ಮೊಂದಿಗೆ ಇಲ್ಲವಲ್ಲ ಎಂಬುದೇ ಬೇಸರದ ಸಂಗತಿ” ಎನ್ನುತ್ತಾ ಭಾವುಕರಾಗಿ ಮಾತನಾಡಿದ್ದಾರೆ.

Leave a Comment

error: Content is protected !!