ಹತ್ತು ವರ್ಷಕ್ಕೂ ಮುನ್ನ ಅಪ್ಪು 46 ನೇ ವಯಸ್ಸಿನಲ್ಲಿಯೇ ಹೇಳಿದ ಮಾತು ನಿಜ ಆಯಿತು ಅಪ್ಪು ಹೇಳಿದ್ದೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚಾಗಿ ಸಾಮಾಜಿಕ ಕ್ಷೇತ್ರದಲ್ಲಿ ಯಾರಿಗೂ ತಿಳಿಯದಂತೆ ಮಾಡಿರುವ ಸಹಾಯಗಳೆ ಇಂದು ಜನರು ಎಲ್ಲರೂ ಅವರನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜೆ ಮಾಡುವಂತೆ ಮಾಡುತ್ತಿರುವುದು. ನಮ್ಮೆಲ್ಲರ ನೆಚ್ಚಿನ ಅಪ್ಪು ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಾಗಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ತಮ್ಮ ಸಿನಿಮಾದಲ್ಲಿ ಕೂಡ ಆಗಾಗ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವಂತಹ ಕೆಲಸ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದರು. ಅವರ ಕೊನೆಯ ಮೂರು ಸಿನಿಮಾಗಳನ್ನು ನೋಡಿದರೆ ಯುವರತ್ನ ಸಿನಿಮಾದ ಮೂಲಕ ಶೈಕ್ಷಣಿಕ ಜೀವನ ಹಾಗೂ ಯುವಕರಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯಗಳ ಕುರಿತಂತೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಕೂಡ ಅದೇ ರೀತಿಯ ವಿಚಾರಗಳನ್ನು ಸಮಾಜಕ್ಕೆ ತಿಳಿ ಹೇಳುವಂತೆ ಮಾಡಿದ್ದಾರೆ ಹಾಗೂ ಗಂಧದಗುಡಿ ಸಿನಿಮಾದ ಮೂಲಕ ಕರ್ನಾಟಕ ರಾಜ್ಯದ ಪ್ರಾಕೃತಿಕ ಸೌಂದರ್ಯದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಹಲವಾರು ಕಾರ್ಯಕ್ರಮಗಳಲ್ಲಿ ಹಾಗೂ ಯೋಜನೆಗಳಿಗೆ ರಾಯಭಾರಿಯಾಗಿ ಯಾವುದೇ ಒಂದು ರೂಪಾಯಿಯನ್ನು ಕೂಡ ಸಂಭಾವನೆಯಾಗಿ ಪಡೆದುಕೊಳ್ಳಲು ಕೆಲಸವನ್ನು ಮಾಡಿ ಅದರ ಕುರಿತಂತೆ ಜನರಿಗೆ ತಲುಪುವಂತೆ ಮಾಡಿರುವ ಪುನೀತ್ ರಾಜಕುಮಾರ್ ಅವರು ನಿಜಕ್ಕೂ ಕೂಡ ಈ ಯುಗದ ಬಂಗಾರದ ಮನುಷ್ಯ ಎಂದರೆ ತಪ್ಪಾಗಲಾರದು. ಇನ್ನು ಮರಣ ಹೊಂದುವ ಹತ್ತು ವರ್ಷ ಮುನ್ನ ಅಂದರೆ ತಾವು 36 ವರ್ಷ ವಯಸ್ಸಿನವರಿರಬೇಕಾದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೇಳಿದಂತೆ ಮರಣದ ಸಂದರ್ಭದಲ್ಲಿ ಕೂಡ ನಡೆದುಕೊಂಡಿದ್ದಾರೆ ಎಂಬುದು ಈಗ ತಿಳಿದು ಬಂದಿದೆ.

https://youtu.be/k6j7pltVFp8

ಹೌದು ಮಿತ್ರರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹತ್ತು ವರ್ಷದ ಹಿಂದೆ ಕುಮಾರ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಬೇರೆಯವರ ಬಾಳಿಗೆ ಬೆಳಕಾಗಿ ಎಂಬುದಾಗಿ ಸಂದೇಶವನ್ನು ನೀಡಿ ತಾನು ಕೂಡ ಮರಣದ ಸಂದರ್ಭದಲ್ಲಿ ನೇತ್ರದಾನವನ್ನು ಮಾಡುತ್ತೇನೆ ಎಂಬುದಾಗಿ ಹೇಳಿದ್ದರು. ಅದೇ ರೀತಿ ಮರಣ ನಂತರ ನೇತ್ರದಾನವನ್ನು ಮಾಡುವ ಮೂಲಕ ತುಂಬಾ ಜನರ ಬಾಳಿನಲ್ಲಿ ಅಂಧಕಾರ ತೊಲಗಿ ಬೆಳಕು ಬರುವಂತೆ ಮಾಡಿದ್ದಾರೆ ಅದು ನಿಜಕ್ಕೂ ಕೂಡ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯ ಎಂಬುದು ಗಮನಾರ್ಹ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!