Raghuveer: ಖ್ಯಾತ ದಿವಂಗತ ನಟ ರಘುವೀರ್ ಅವರ ಸಮಾಧಿಯ ಈಗಿನ ಪರಿಸ್ಥಿತಿ ನೋಡಿದ್ರೆ ನೀವು ಕೂಡ ಕಣ್ಣೀರು ಹಾಕ್ತಿರಾ. ಇಷ್ಟೇ ಜೀವನ.

Raghuveer ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಬೆರಳೆಣಿಕೆಯಷ್ಟು ವರ್ಷಗಳೇ ಆದರೂ ಕೂಡ ತಾವು ಇದ್ದಷ್ಟು ದಿನ ಚಿತ್ರರಂಗದಲ್ಲಿ ಉತ್ತಮ ನಾಯಕ ಎಂಬುದಾಗಿ ಹೆಸರನ್ನು ಪಡೆದವರು ನಟ ರಘುವೀರ್(Raghuveer). ಇವರ ತಂದೆ ಬೆಂಗಳೂರು ಕಂಡಂತಹ ಆಗರ್ಭ ಶ್ರೀಮಂತ ಕಾಂಟ್ರಾಕ್ಟರ್ ಗಳಲ್ಲಿ ಒಬ್ಬರಾಗಿದ್ದರು ಕೂಡ ಅವರ ಇಂದಿನ ಸಮಾಧಿಯ ಸ್ಥಿತಿ ನೋಡಿದರೆ ಖಂಡಿತವಾಗಿ ನೀವು ಕೂಡ ಕಣ್ಣೀರು ಹಾಕ್ತಿರಾ.

ಹೌದು ಗೆಳೆಯರೇ ಆಗರ್ಭ ಶ್ರೀಮಂತನ ಮಗನಾಗಿದ್ದರೂ ಕೂಡ ನಟ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅವರ ಮಾತನ್ನು ಕೇಳಿ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಲು ಸಿದ್ಧರಾಗಿ ಪಾದರ್ಪಣೆ ಮಾಡುತ್ತಾರೆ. ಮೊದಲ ಸಿನಿಮಾ ಫಿಲಂ ಆಯ್ತು ಆದರೂ ಬಿಡದೆ ಎರಡನೇ ಸಿನಿಮಾ ಚೈತ್ರದ ಪ್ರೇಮಾಂಜಲಿ(Chaithrada Premanjali) ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ತಂದೆಯವರೇ ಎರಡು ಸಿನಿಮಗಳಿಗೂ ಕೂಡ ಬಂಡವಾಳವನ್ನು ಹೊಡಿರುತ್ತಾರೆ.

Raghuveer Kannada Actor

ಅದಾದ ನಂತರ ಶೃಂಗಾರ ಕಾವ್ಯ(Shrungara Kavya) ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತದೆ‌. ಆದರೆ ಇದೇ ಸಂದರ್ಭದಲ್ಲಿ ರಘುವೀರ್ ಅವರಿಗೆ ಎಲ್ಲವನ್ನು ಕೊಟ್ಟಂತಹ ಅವನ ತಂದೆಯ ಮಾತನ್ನು ಮೀರಿ ರಂಗಾರ ಕಾವ್ಯ ಸಿನಿಮಾದ ನಾಯಕ ನಟಿ ಆಗಿರುವ ಸಿಂಧುಶ್ರೀ(Sindhushree) ಅವರನ್ನು ಮದುವೆಯಾಗುತ್ತಾರೆ. ಅಲ್ಲಿಂದಲೇ ಅವರ ಗ್ರಹಚಾರ ಪ್ರಾರಂಭವಾಗಿ ಮನೆಯಿಂದ ಹೊರ ಬರಬೇಕಾಗುತ್ತದೆ ಹಾಗೂ ನಂತರ ಅವರ ಪತ್ನಿ ಕೂಡ ಮರಣವನ್ನು ಹೊಂದುತ್ತಾರೆ. ಅಲೆದಾಡುತ್ತಿದ್ದ ಇವರನ್ನು ಮತ್ತೆ ತಂದೆ ಮನೆಗೆ ಕರೆದುಕೊಂಡು ಬಂದು ತಮ್ಮ ಹೆಂಡತಿಯ ತಮ್ಮನ ಮಗಳಿಗೆ ಕೊಟ್ಟು ಮದುವೆ ಮಾಡುತ್ತಾರೆ.

ಆದರೆ ಅಷ್ಟರಲ್ಲಾಗಲೇ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದ ರಘುವೀರ್(Raghuveer) ಕೆಲವೇ ವರ್ಷಗಳಲ್ಲಿ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ಸೇರಿಸಿದ ಕೂಡಲೇ ಮರಣ ಹೊಂದುತ್ತಾರೆ. ಇನ್ನು ಇವರ ಸಮಾಧಿಯ ಕುರಿತಂತೆ ಮಾತನಾಡುವುದಾದರೆ ಆಗರ್ಭ ಶ್ರೀಮಂತರಾಗಿದ್ದರೂ ಕೂಡ ಇವರ ಸಮಾಧಿ ಇರುವುದು ವಿಲ್ಸನ್ ಗಾರ್ಡನ್(Wilson Garden) ನ ಬಿಬಿಎಂಪಿಯ ಸಾರ್ವಜನಿಕ ಸ್ಮಶಾನದಲ್ಲಿ. ಅಲ್ಲಿ ಅವರ ಸಮಾಧಿಗೆ ವರ್ಷಕ್ಕೊಮ್ಮೆಯಾದರೂ ಹೂ ಹಾಕುವವರು ಕೂಡ ಗತಿ ಇಲ್ಲ. ಎಲ್ಲಾ ಕಷ್ಟ ಪಟ್ಟರು ಹಣ ಇದ್ದರೂ ಕೂಡ ಕೊನೆಗೆ ಯಾರೂ ಇರುವುದಿಲ್ಲ ಯಾರು ಕೂಡ ನೆನಪಿಸಿಕೊಳ್ಳುವುದಿಲ್ಲ ಎಂಬುದನ್ನು ಈ ಘಟನೆಯ ಮೂಲಕ ನಾವು ಅರಿತುಕೊಳ್ಳಬಹುದಾಗಿದೆ.

Leave a Comment

error: Content is protected !!