ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಪ್ರಜಾಕೀಯದ ವಿಚಾರವಾಗಿ ಹೆಚ್ಚಾಗಿ ಗಮನವಹಿಸಿ ಚಿತ್ರರಂಗದಿಂದ ಕೊಂಚಮಟ್ಟಿಗೆ ಅಂತರವನ್ನು ಕಂಡುಕೊಂಡಿದ್ದರು ಆದರೆ ಈಗ ಮತ್ತೆ ಕಬ್ಜಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ರೀ ಎಂಟ್ರಿ ನೀಡುತ್ತಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕಬ್ಜಾ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿ ಪ್ರತಿಯೊಂದು ಭಾಷೆಯ ಸಿನಿಮಾ ಪ್ರೇಕ್ಷಕರು ಹಾಗೂ ಪರಿಣಿತರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನು ಯುಐ ಎನ್ನುವ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ತಾವೇ ನಟ ಹಾಗೂ ನಿರ್ದೇಶಕನಾಗಿ ಮಾಡುತ್ತಿದ್ದಾರೆ. ನಿರ್ದೇಶನದ ವಿಚಾರಕ್ಕೆ ಬಂದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಎಲ್ಲರಿಗಿಂತ ಟಾಪ್ ಎನ್ನುವುದು ಎಲ್ಲರಿಗೂ ಗೊತ್ತು. ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ಅನ್ನು ತೊಟ್ಟಿರುವ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ಮೂಲಕ ಮೋಡಿ ಮಾಡುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ.
ಆದರೆ ಈಗ ಇದೇ ಸಿನಿಮಾದ ಫೈಟ್ ದೃಶ್ಯದ ಚಿತ್ರೀಕರಣವನ್ನು ಮಾಡುತ್ತಿರುವ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಉಸಿರಾಟದ ತೊಂದರೆ ಸಂಭವಿಸಿ ಈಗ ಅವರನ್ನು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಈ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವುದು ಎಷ್ಟರಮಟ್ಟಿಗೆ ತೀವ್ರವಾಗಿದೆ ಎಂಬುದು ಈಗ ಉಪೇಂದ್ರ ಅವರೇ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸ್ವತಹ ಉಪೇಂದ್ರ ಅವರೇ ಮಾಧ್ಯಮಗಳ ಮುಂದೆ ನಿಂತು ಇದೀಯ ಮಾತನಾಡಿದ್ದಾರೆ. ಉಪೇಂದ್ರ ಅವರಿಗೆ ಸ್ವಲ್ಪ ಕೆಮ್ಮು ಇದ್ದ ಕಾರಣ ಡಸ್ಟ್ ಅಲರ್ಜಿಯಾಗಿ ಆಸ್ಪತ್ರೆಯಲ್ಲಿ ಟಾಕಾಲಾಗಿದ್ದರು ಆದರೆ ಮಾಧ್ಯಮಗಳು ಇದನ್ನ ಉಸಿರಾಟದ ತೊಂದರೆ ಹಾಗಿ ಹೀಗೆ ಗಂಭೀರ ಅದು ಇದು ಅಂತ ಸುಳ್ಳು ಸುದ್ದಿ ಹಬ್ಬಿಸಿರುವುದು ಉಪೇಂದ್ರ ಅವರಿಗೆ ಬೇಸರ ಕಂಚಿನ ಅವರು ನಗಾಡುತ್ತಾ ಕಾಮಿಡಿ ಮಾಡಿ ನಾನು ಕೆಮ್ಮಿದರು ಸಹ ಈ ರೀತಿಯ ನ್ಯೂಸ್ಗಳು ಹಾಕುತ್ತೀರಲ್ಲ ಎಂದು ತಮಾಷೆ ಮಾಡಿದ್ದಾರೆ.