ಕಾಂತರಾ ಸಿನಿಮಾವನ್ನು ನೋಡಿ ಅವಮಾನ ಮಾಡಿದವರಿಗೆ ಎಚ್ಚರಿಕೆ ನೀಡಿದ ರಿಷಬ್ ಶೆಟ್ಟಿ!

ಕಾಂತರಾ ಸಿನಿಮಾ ಕರ್ನಾಟಕ ಹಾಗೂ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ ತನ್ನ ಮೊದಲ ವಾರಾಂತ್ಯವನ್ನು ಮುಗಿಸಿಕೊಂಡಿದೆ. ಎಲ್ಲಾ ಕಡೆಗಳಲ್ಲೂ ಕೂಡ ಪ್ರೇಕ್ಷಕರಿಂದ ಅತ್ಯದ್ಭುತ ಪ್ರತಿಕ್ರಿಯೆಗಳು ದೊರಕುತ್ತಿವೆ. ಪ್ರೇಕ್ಷಕರ ರೆಸ್ಪಾನ್ಸ್ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಕೂಡ ಪ್ರತಿಧ್ವನಿಸುತ್ತದೆ. ಒಂದೊಳ್ಳೆ ಸಿನಿಮಾ ನೀಡಿದ ಖುಷಿಯಲ್ಲಿ ಚಿತ್ರ ತಂಡ ಇದ್ದರೆ ಅದನ್ನು ನೋಡಿದ ಖುಷಿಯಲ್ಲಿ ಪ್ರೇಕ್ಷಕರು ಇದ್ದಾರೆ.

ಇದೇ ಸಂದರ್ಭದಲ್ಲಿ ಕೆಲವು ಪ್ರೇಕ್ಷಕರು ಸಿನಿಮಾದಲ್ಲಿ ಇರುವ ದೈವರಾದನೆಯ ನಕಲು ಹಾಕುತ್ತಾ ಸೋಶಿಯಲ್ ಮೀಡಿಯಾ ಗಳಲ್ಲಿ ಪೋಸ್ಟ್ ಮಾಡುತ್ತಾ ಆ ಭೂತಾರಾಧನೆಯ ಸಂಸ್ಕೃತಿಗೆ ಪರೋಕ್ಷವಾಗಿ ಟೀಕೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು. ಇದು ಈಗ ಚಿತ್ರತಂಡದ ಗಮನಕ್ಕೆ ಬಂದಿದ್ದು ರಿಷಬ್ ಶೆಟ್ಟಿ ಅವರು ನಿನ್ನೆ ಬಂದಾಗ ಇದರ ಕುರಿತುಂತೆ ಅಸಮಾಧಾನದಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಆ ಸಂಸ್ಕೃತಿಯನ್ನು ನಂಬಿರುವವರ ಭಾವನೆಗೆ ನೀವು ಧಕ್ಕೆ ಮಾಡುತ್ತಿದ್ದೀರಿ ದಯವಿಟ್ಟು ನೀವು ಹೀಗೆ ಮಾಡುವುದಕ್ಕೆ ಹೋಗಬೇಡಿ ಅವರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ನಾವು ಅನಾದಿಕಾಲದಿಂದಲೂ ಕೂಡ ಈ ಸಂಸ್ಕೃತಿಯನ್ನು ನಂಬಿಕೊಂಡು ಆಚರಿಸಿಕೊಂಡು ಬಂದವರು. ಇದನ್ನು ತಮಾಷೆಯ ರೀತಿಯಲ್ಲಿ ನೋಡಬೇಡಿ ಆ ಆಚರಣೆಗೆ ಅದರದ್ದೇ ಆದ ಮಹತ್ವವಿದೆ ಎಂಬುದಾಗಿ ರಿಶಭ್ ಶೆಟ್ಟಿ ಹೇಳುವ ಮೂಲಕ ಯಾರು ಕೂಡ ನಾನು ಹೀಗೆ ಹೇಳಿದೆ ಎಂದು ಬೇಜಾರು ಮಾಡಿಕೊಳ್ಳಬೇಡಿ ಎಂಬುದನ್ನು ಕೂಡ ಕೊನೆಯಲ್ಲಿ ಸೇರಿಸಿದ್ದಾರೆ.

ಇನ್ನು ಈಗಾಗಲೇ ಕಾಂತಾರ ಸಿನಿಮಾ ಎನ್ನುವುದು ಪ್ರತಿಯೊಂದು ಭಾಗಗಳಲ್ಲಿ ಕೂಡ ಪಾಸಿಟಿವ್ ರೆಸ್ಪಾನ್ಸ್ ಅನ್ನು ಪಡೆಯುತ್ತಿದೆ. ಸಿನಿಮಾ ಅತೀ ಶೀಘ್ರದಲ್ಲೇ ಬಾಕ್ಸ್ ಆಫೀಸ್ ನಲ್ಲಿ ಐವತ್ತು ಕೋಟಿ ರೂಪಾಯಿ ಗಳಿಸಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಸಿನಿಮಾ ನೋಡಿದ ನಂತರ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!