ಅಮೂಲ್ಯ ಮಕ್ಕಳ ನಾಮಕರಣದಲ್ಲಿ ಶ್ವೇತ ವರ್ಣದ ಅಂಬಾರಿಯನ್ನು ಉಡುಗೊರೆಯಾಗಿ ನೀಡಿದ ಶಿವಣ್ಣ. ತಯಾರಿಕೆಗಾದ ಒಟ್ಟು ಖರ್ಚೆಷ್ಟು??

ಬಣ್ಣ ಬಣ್ಣದ ಹೂಗಳಿಂದ, ಜಗಮಗ ಎನ್ನುವ ಪ್ರಕಾಶವಾದ ಬೆಳಕಿನಿಂದ ಅಲಂಕೃತಗೊಂಡ ವೇದಿಕೆ; ವೇದಿಕೆಯ ಎದುರು ಒಂದರ ಪಕ್ಕ ಒಂದರಂತೆ ಜೋಡಿಸಲಾದ ನೂರಾರು ಸಂಖ್ಯೆಯಲ್ಲಿ ಆಸನ; ರಂಗು ರಂಗಿನ ಬಟ್ಟೆ ತೊಟ್ಟು ಪತ್ನಿ ಸಮೇತವಾಗಿ ಬಂದ ಗೋಲ್ಡನ್ ಸ್ಟಾರ್ ಗಣೇಶ್; ಬಿಜಿಯಾಗಿದ್ದರು ಬಿಡುವು ಮಾಡಿಕೊಂಡು ಬಂದ ಹ್ಯಾಟ್ರಿಕ್ ಹೀರೋ ಶಿವಣ್ಣ; ನಗುನಗುತ್ತಲೆ ಎಂಟ್ರಿಕೊಟ್ಟ ದರ್ಶನ್; ‘ಮಳೆ’ಯಂತೆ ಬಂದ ಲವ್ಲಿ ಸ್ಟಾರ್ ಪ್ರೇಮ್..

ಇದು ಯಾವ ಕಾರ್ಯಕ್ರಮವೆಂದು ಬಾಯ ಮೇಲೆ ಬೆರಳಿಟ್ಟು ಯೋಚಿಸುತ್ತಿದ್ದೀರಾ?? ಇದು ಕನ್ನಡದ ಹಲವಾರು ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಅಮೂಲ್ಯ ಅವರ ಮಕ್ಕಳ ನಾಮಕರಣದ ಹಬ್ಬ. ಚೆಲುವಿನ ಚಿತ್ತಾರದ ಮೂಲಕ ಪಡ್ಡೆ ಹುಡುಗರ ಚಿತ್ತವನ್ನು ಸೇರಿ ನಿದ್ದೆಗೆಡಿಸಿದ್ದ ಮುದ್ದು ಮೊಗದ ನಟಿ ಅಮೂಲ್ಯ ಅವರು 2017ನೇ ಇಸ್ವಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಎರಡು ಮುದ್ದು ಮಕ್ಕಳ ತಂದೆ ತಾಯಿಯಾಗಿ ಅಮೂಲ್ಯ ಹಾಗೂ ಅವರ ಪತಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವ ಹೆಸರು ಸೂಕ್ತ ಎಂದು ತಿಳಿಯಲು ಗುರೂಜಿಗಳ ದರ್ಶನ ಮಾಡಿ, ಆಶೀರ್ವಾದ ಪಡೆದು ಬಂದಿರುವ ವಿಷಯ ಅದಾಗಲೇ ಸುದ್ದಿಯಾಗಿತ್ತು. ಅಭಿಮಾನಿಗಳೆಲ್ಲರೂ ಯಾವ ಹೆಸರನ್ನು ಇಡಬಹುದು ಎಂದು ಯೋಚಿಸುತ್ತಿದ್ದರು. ತಮ್ಮ ಪುಟ್ಟ ಕಂದಮ್ಮಗಳಿಗೆ ಆದರ್ವ ಮತ್ತು ಅಥರ್ವ ಎಂಬ ಹೆಸರುಗಳನ್ನಿಡಲಾಗಿದೆ.

ಶಿವಣ್ಣ ಅವರು ಸಭೆ ಸಮಾರಂಭಗಳಲ್ಲಿ, ಚಿತ್ರೀಕರಣದ ವೇಳೆಯಲ್ಲಿ ಅಮೂಲ್ಯ ಅವರನ್ನು ತಂಗಿ ಎಂದೇ ಕರೆಯುತ್ತಿದ್ದರು. ನಾಮಕರಣದ ಸಂದರ್ಭದಲ್ಲಿ ಅಣ್ಣನಾಗಿ ತಂಗಿಯ ಮಕ್ಕಳನ್ನು ಮುದ್ದಾಡಲು ಶಿವರಾಜ್ ಕುಮಾರ್ ಆಗಮಿಸಿದ್ದರು. ಅಮೂಲ್ಯ ಹಾಗೂ ಅವರ ಪತಿಯನ್ನು ಪ್ರೀತಿಯಿಂದ ಮಾತನಾಡಿಸಿ, ಮಕ್ಕಳನ್ನು ಎತ್ತಿ ಮುದ್ದಾಡಿ ಜೋಡಿ ಬಂಗಾರದ ಬಳೆಗಳನ್ನು ಶಿವಣ್ಣ ಪುಟಾಣಿಗಳಿಗೆ ತೊಡಿಸಿದರು.

ಕಾರ್ಯಕ್ರಮದಲ್ಲಿ ಶ್ವೇತ ವರ್ಣದ ಅಂಬಾರಿಯು ನೆರೆದ ಎಲ್ಲಾ ಜನರ ಕಣ್ಣುಗಳನ್ನು ತನ್ನಮೇಲಿರಿಸಿಕೊಂಡಿತ್ತು. ಅಂಬಾರಿಯನ್ನು ಪುಟ್ಟ ಮಕ್ಕಳಿಗಾಗಿ ಉಡುಗೊರೆಯಾಗಿ ನೀಡಿದ ಕನ್ನಡ ಚಿತ್ರರಂಗದ ನೆಚ್ಚಿನ ನಟ ಬೇರಾರು ಅಲ್ಲ ಶಿವಣ್ಣ ಎಲ್ಲರ ಗಮನವನ್ನು ಸೆಳೆದ ಆ ಅಂಬಾರಿಗಾಗಿ ಮಾಡಲಾದ ಖರ್ಚು ಬರೋಬ್ಬರಿ 2.5 ಲಕ್ಷ ರೂಪಾಯಿಗಳು. ಶಿವಣ್ಣ ನೀಡಿದ ಅಂಬಾರಿಯ ಮೂಲಕ, ನಟಿ ಅಮೂಲ್ಯ ಅವರ ಮಕ್ಕಳ ನಾಮಕರಣದ ವೇದಿಕೆಯು ಇನ್ನಷ್ಟು ರಂಗು ಹೆಚ್ಚಿಸಿಕೊಂಡಿತು ಎಂದರೆ ತಪ್ಪಾಗಲಾರದು.

Leave a Comment

error: Content is protected !!