Hariprya Vasistasimha: ಕನ್ನಡ ಚಿತ್ರರಂಗದ ಇತ್ತೀಚಿನ ಸಖತ್ ಸುದ್ದಿಯಲ್ಲಿರುವ ಜೋಡಿಗಳು ಎಂದರೆ ಅದು ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು. ಇಬ್ಬರೂ ಕೂಡ ಯಾರಿಗೂ ತಿಳಿಯದಂತೆ ಸೈಲೆಂಟ್(Silent) ಆಗಿಯೇ ನಿಶ್ಚಿತಾರ್ಥವನ್ನು(Engagement) ಮುಗಿಸಿಕೊಂಡು ಈಗ ಮದುವೆ ಆಗುವುದಕ್ಕೆ ಕೂಡ ಸಜ್ಜಾಗಿ ನಿಂತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಜೋಡಿಗಳು ಪ್ರೀತಿಸಿ ಮದುವೆ ಆಗಿರುವ ಉದಾಹರಣೆಗಳಿವೆ. ಅದಕ್ಕೆ ಈಗ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ (Hariprya Vasistasimha) ಅವರು ಕೂಡ ಸೇರುತ್ತಿದ್ದಾರೆ.
ಇವರು ದುಬೈನಲ್ಲಿ ಕೈ ಕೈ ಹಿಡಿದುಕೊಂಡು ಶಾಪಿಂಗ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral) ಆದ ನಂತರವಷ್ಟೇ ಇವರಿಬ್ಬರು ಡೇಟಿಂಗ್(Dating) ಮಾಡುತ್ತಿದ್ದಾರೆ ಹಾಗೂ ಮದುವೆ ಆಗುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂಬುದಾಗಿ ಎಲ್ಲರಿಗೂ ತಿಳಿದು ಬಂದಿತ್ತು. ಇನ್ನು ಇವರಿಬ್ಬರೂ ಹೇಗೆ ಸಡನ್ನಾಗಿ ಪ್ರೀತಿ ಮಾಡಲು ಪ್ರಾರಂಭಿಸಿದರು ಎನ್ನುವ ವಿಚಾರದ ಕುರಿತಂತೆ ಕೂಡ ಹಲವಾರು ಕಹಾನಿಗಳು ಕೇಳಿ ಬರುತ್ತಿವೆ. ಅದರಲ್ಲೂ ಪ್ರಮುಖವಾಗಿ ಕೇಳಿ ಬರುತ್ತಿರುವುದು ನಾಯಿಮರಿ ಗಿಫ್ಟ್ ನೀಡಿರುವ ಬಗ್ಗೆ.
ನಾಯಿಮರಿಯನ್ನು ಹರಿಪ್ರಿಯಾ ಅವರಿಗೆ ಗಿಫ್ಟ್(Gift) ನೀಡಿ ವಶಿಷ್ಠ ಸಿಂಹ ಅವರು ಪಟಾಯಿಸಿಕೊಂಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಶಿಷ್ಠ ಅವರನ್ನು ರೇಗಿಸುತ್ತಿದ್ದಾರೆ. ಅವರಿಗೆಲ್ಲ ಈಗ ವಸಿಷ್ಟ ಸಿಂಹ ಅವರು ನೀಡಿರುವ ಪ್ರತಿಕ್ರಿಯೆ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಕೇವಲ ನಾಯಿಮರಿ ನೀಡಿ ಪಟಾಯಿಸಿಕೊಂಡಿದ್ದಾರೆ ಎಂದು ಹೇಳುವವರಿಗೆ ನಾನು ಹೇಳುತ್ತಿರುವುದು ಸಾಕಷ್ಟು ಕಷ್ಟಪಟ್ಟಿದ್ದೇನೆ. ಅದನ್ನು ಯಾರೂ ಕೂಡ ಕೇಳಲು ಹೋಗುವುದಿಲ್ಲ ಎಂಬುದಾಗಿ ತಮಾಷೆಯಿಂದಲೇ ವಶಿಷ್ಟ ಸಿಂಹ ಉತ್ತರವನ್ನು ನೀಡಿದ್ದಾರೆ.
ಇದನ್ನೂ ಓದಿ..ಕ್ರಾಂತಿ ಸಿನಿಮಾಗಾಗಿ ದರ್ಶನ್ ರಚಿತ ರವಿಚಂದ್ರನ್ ಎಷ್ಟೆಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಗೊತ್ತಾ?
ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಿಂದಲೂ ಕೂಡ ಹರಿಪ್ರಿಯ ಅವರನ್ನು ಕಂಡರೆ ನನಗೆ ಗೌರವ ಹಾಗೂ ಸ್ನೇಹ ಭಾವ ಇತ್ತು. ನಂತರ ಅವರಿಗೆ ನಾಯಿಮರಿಯನ್ನು ಗಿಫ್ಟ್ ಆಗಿ ನೀಡಿದ ನಂತರ ನಮ್ಮಿಬ್ಬರ ನಡುವೆ ಸ್ನೇಹ ಭಾವದ ಜೊತೆಗೆ ಪ್ರೀತಿಯು ಕೂಡ ಕೊಂಚ ಮೂಡಿ ನಂತರ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡು ಈಗ ಮದುವೆಯಾಗಲು ಸಿದ್ಧವಾಗಿ ನಿಂತಿದ್ದೇವೆ ಎಂಬುದಾಗಿ ವಶಿಷ್ಟ ಸಿಂಹ ಸಂಕ್ಷಿಪ್ತವಾಗಿ ತಮ್ಮ ಪ್ರೇಮಕಹಾನಿಯನ್ನು ಸಂದರ್ಶಕರಿಗೆ(Interviewer) ವಿವರವಾಗಿ ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಲು ಸಿದ್ಧವಾಗಿ ನಿಂತಿರುವ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಜೋಡಿಯ ಕುರಿತಂತೆ ನೀವೇನು ಹೇಳುತ್ತೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.