Kannada Films ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಕೇವಲ ಸ್ಟಾರ್ ನಟರು ನಟಿಸಿದರೆ ಮಾತ್ರ ಸಿನಿಮಾ ಸೂಪರ್ ಹಿಟ್ ಆಗುತ್ತಿತ್ತು ಎಂಬ ಮಾತಿತ್ತು. ಆದರೆ ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ. ಸಿನಿಮಾದ ಕಥೆಯ ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಸೂಪರ್ ಹಿಟ್ ಅಲ್ಲ ಪ್ಯಾನ್ ಇಂಡಿಯಾ ಸೂಪರ್ ಹಿಟ್ ಆಗುತ್ತದೆ ಎಂಬುದಕ್ಕೆ ನಮ್ಮಲ್ಲಿ ಈಗ ಹಲವಾರು ಉದಾಹರಣೆಗಳಿವೆ.
ಇನ್ನು ಕಂಟೆಂಟ್ ಇರುವಂತಹ ಸಿನಿಮಾ ಮಾಡುವಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Stat Puneeth Rajkumar) ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಮುಂಚೂಣಿ ಸ್ಥಾನದಲ್ಲಿ ಇದ್ದರೆ ತಪ್ಪಾಗಲಾರದು. ಹೊಸಬರಿಗೆ ಪ್ರೋತ್ಸಾಹ ನೀಡುವುದರಲ್ಲಿ ಕೂಡ ಈ ಇಬ್ಬರು ಸ್ಟಾರ್ ನಟರು ಸದಾ ಮುಂದಿರುತ್ತಿದ್ದರು.
ಇನ್ನು ಇವರಿಬ್ಬರೂ ಮಾಡಬೇಕಾಗಿದ್ದ ಸಿನಿಮಾವನ್ನು ಈಗ ಮತ್ತೊಬ್ಬ ಕನ್ನಡದ ಸ್ಟಾರ್ ನಟರು ಮಾಡಬೇಕಾಗಿದೆ. ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿ ಬರಬೇಕಾಗಿದ್ದ ಸಪ್ತಸಾಗರದಾಚೆ ಎಲ್ಲೋ(Saptha Sagardaache Ello) ಸಿನಿಮಾ ಮೊದಲಿಗೆ ಪುನೀತ್ ರಾಜಕುಮಾರ್(Puneeth Rajkumar) ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗಾಗಿ ಸಿದ್ಧಪಡಿಸಿದ್ಧರಂತೆ. ಆದರೆ ಇದರಲ್ಲಿ ಅವರ ಅಭಿಮಾನಿಗಳು ಅಪೇಕ್ಷಿಸುವಂತಹ ಕಮರ್ಷಿಯಲ್ ಎಲಿಮೆಂಟ್ ಕಡಿಮೆ ಇದ್ದ ಕಾರಣದಿಂದಾಗಿ ಅವರಿಬ್ಬರೂ ಈ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲವಂತೆ ಹಾಗೂ ಆ ಸಂದರ್ಭದಲ್ಲಿ ಈ ಸಿನಿಮಾವನ್ನು ನಿರ್ಮಿಸುವ ನಿರ್ಮಾಪಕರು ಕೂಡ ಇರಲಿಲ್ಲ.
ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗೂ ಮುಂಚೆ ಈ ಕಥೆಯನ್ನು ಸಿದ್ಧಪಡಿಸಿದ್ದ ಹೇಮಂತ್ ರಾವ್ ಈಗ ಇದೇ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಅವರಿಗೆ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಸಿನಿಮಾದಿಂದ ಬಿಡುಗಡೆ ಆಗಿರುವ ಪೋಸ್ಟರ್ ಹಾಗೂ ಟೀಸರ್ ಗಳು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿವೆ. ಆದಷ್ಟು ಶೀಘ್ರದಲ್ಲಿಯೇ ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ನಿರೀಕ್ಷಿಗಳು ಆಕಾಶವನ್ನು ಮುಟ್ಟಿವೆ.