ಸ್ನೇಹಿತರೆ ಅವರಿಬ್ಬರೂ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆಯಾಗಿ ಕೇವಲ ಎಂಟು ತಿಂಗಳುಗಳು ಕಳೆದಿದ್ದವು. ಮನೆಯಲ್ಲಿ ಮುದ್ದಾದ ಮಡದಿ ಇದ್ರೂ ಕೂಡ ಹೆಂಡತಿಯನ್ನು ತವರು ಮನೆಗೆ ಕಳುಹಿಸಿ ತನ್ನ ಪ್ರೇಯಸಿ ಜೊತೆಗೆ ಸುತ್ತಾಟ ನಡೆಸುತ್ತಿರುವ ಫೋಟೋವನ್ನು ತನ ಹೆಂಡತಿಗೆ ಕಳುಹಿಸಿದ್ದಾನೆ ಈ ಪುಣ್ಯಾತ್ಮ. ಇದನ್ನು ನೋಡಿರುವ ಹೆಂಡತಿ ಮಾಡಿಕೊಂಡಿರುವ ಕೃತ್ಯ ನೋಡಿದ್ರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಎಂಟು ತಿಂಗಳ ಹಿಂದಷ್ಟೇ ಚಿಕ್ಕ ಬಳ್ಳಾಪುರದ ಕದಿರೇನಹಳ್ಳಿಯ ಭಾರ್ಗವ ಹಾಗೂ ಮೋನಿಕಾ ಇಬ್ಬರು ಕೂಡ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ದಿನ ಕಳೆದಂತೆ ಇವರಿಬ್ಬರ ನಡುವೆ ಮನಸ್ತಾಪ ಪ್ರಾರಂಭವಾಯಿತಂತೆ. ಇದೇ ಕಾರಣದಿಂದ ವಿಜಯದಶಮಿ ಹಬ್ಬದಂದು ಆಕೆಯನ್ನು ಆಕೆಯ ತವರು ಮನೆಗೆ ಬಿಟ್ಟು ಬಂದ ಭಾರ್ಗವು ಮತ್ತೆ ಅವಳನ್ನು ವಾಪಾಸ್ ಮನೆಗೆ ಕರೆತರಲಿಲ್ಲ. ಇದರಿಂದಾಗಿ ಅನುಮಾನ ಪಟ್ಟ ಮೋನಿಕಾ ಮತ್ತೆ ವಾಪಸ್ ಕರೆದುಕೊಂಡು ಹೋಗಲು ಕೇಳಿದಾಗ ವಾಟ್ಸಪ್ ನಲ್ಲಿ ಆತ ಬೇರೆ ಹುಡುಗಿಯ ಜೊತೆಗೆ ಲಲ್ಲೆ ಹೊಡೆಯುತ್ತಿದ್ದ ಫೋಟೋಗಳನ್ನು ಕಳಿಸಿದ್ದಾನೆ. ಇದರಿಂದ ಹತಾಶಳಾದ ಮೋನಿಕಾ ತನ್ನ ಪ್ರಾಣವನ್ನು ತನ್ನ ಕೈಯಾರೆ ತಾನೆ ಕಳೆದುಕೊಂಡಿದ್ದಾಳೆ.
ಹೌದು ಗೆಳೆಯರೇ, ಭಾರ್ಗವ ತಾನು ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದು ಆಕೆ ನನ್ನನ್ನು ಕೂಡ ಪ್ರೀತಿಸುತ್ತಿದ್ದಾಳೆ, ಇಬ್ಬರು ಸೇರಿ ಪ್ರವಾಸಕ್ಕೆ ಹೋಗಿದ್ದೇವೆ ಎಂಬುದಾಗಿ ಹೇಳಿ ಅಲ್ಲಿಗೆ ಹೋಗಿದ್ದ ಫೋಟೋಗಳನ್ನು ತನ್ನ ಹೆಂಡತಿಗೆ ಕಳಿಸಿದ್ದಾನೆ. ಇದನ್ನು ನೋಡಿ ಸಂಪೂರ್ಣವಾಗಿ ಕುಸಿದು ಹೋದ ಮೋನಿಕಾ ತನ್ನ ಮರಣಕ್ಕೆ ನನ್ನ ಗಂಡ ಭಾರ್ಗವ್ ನೇ ಕಾರಣ ಎಂಬುದಾಗಿ ಹೇಳಿ ಬರೆದಿಟ್ಟು ತನ್ನ ಜೀವವನ್ನು ಕಳೆದುಕೊಂಡಿದ್ದಾಳೆ.
ಮಧ್ಯಮ ಕುಟುಂಬದಲ್ಲಿ ಜನಿಸಿದ ಮೋನಿಕಾ ಸೇರಿ ಆಕೆಯ ಹೆತ್ತವರಿಗೆ ಮೂರು ಹೆಣ್ಣು ಮಕ್ಕಳಿದ್ದರು. ಚೆನ್ನಾಗಿ ಓದಿಸಿ ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಮದುವೆ ಮಾಡಿಸಿಕೊಟ್ಟೆವಾ ಆದರೆ ನಮ್ಮ ಮಗಳು ನಮ್ಮ ಅಳಿಯನಿಂದಾಗಿ ಜೀವನವನ್ನು ಕಳೆದುಕೊಳ್ಳುವಂತೆ ಎಂಬುದಾಗಿ ಈಗ ಹೆತ್ತವರು ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಅತಿ ಶೀಘ್ರದಲ್ಲಿ ತನಿಖೆ ನಡೆದು ಭಾರ್ಗವ್ ಕಂಬಿಯ ಹಿಂದೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.