ಮದುವೆ ಆಗುವ ಮೊದಲ ಗಂಡ ಸಾ ಯ್ತಾನೆ ಅಂತ ಜ್ಯೋತಿಷಿ ಮೊದಲೇ ಹೇಳಿದ್ದನ್ನು ಕೇಳಿ ಪ್ರಿಯಕರನಿಗೆ ಈಕೆ ಮಾಡಿದ್ದೇನು ಗೊತ್ತಾ! ಶಾಕಿಂಗ್..

ಮೊದಲ ಗಂಡ ಮರಣವನ್ನು ಹೊಂದುತ್ತಾನೆ ಎಂಬ ಜ್ಯೋತಿಷಿ ಹೇಳಿದ ಮಾತನ್ನು ಕೇಳಿ ಗ್ರೀಷ್ಮ ಎನ್ನುವ ಹುಡುಗಿ ಮಾಡಿರುವ ಕಾರ್ಯ ಈಗ ನಿಜಕ್ಕೂ ಕೂಡ ಎಲ್ಲರಿಗೂ ಹೌಹಾರುವಂತೆ ಮಾಡಿದೆ. ಗ್ರೀಷ್ಮ ಹಾಗೂ ಶರೋನ್ ರಾಜ್ ಇಬ್ಬರೂ ಕೂಡ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ಕೆಲವು ಕಾರಣಗಳಿಂದಾಗಿ ಮನಸ್ತಾಪವೂ ಕೂಡ ಇತ್ತೀಚಿನ ದಿನಗಳಲ್ಲಿ ಕಂಡುಬಂದಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಇವರಿಬ್ಬರ ಮನಸ್ತಾಪ ಇನ್ನೂ ಹೆಚ್ಚಾಗಿ ಗ್ರೀಷ್ಮ ಬ್ರೇಕಪ್ ಮಾಡಿಕೊಳ್ಳೋಣ ಎಂಬುದಾಗಿ ಕೂಡ ಪ್ರಿಯಕರನ ಬಳಿ ಕೇಳಿಕೊಂಡಾಗ ಆತ ನಿರಾಕರಿಸಿದ್ದ.

ನಂತರ ಜ್ಯೋತಿಷ್ಯ ಕೂಡ ಗ್ರೀಷ್ಮಾ ಅವರಿಗೆ ಆಕೆ ಮದುವೆಯಾಗುವ ಮೊದಲ ಗಂಡ ಮರಣವನ್ನು ಹೊಂದುತ್ತಾನೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದರು. ಇದಕ್ಕಾಗಿ ಅಕ್ಟೋಬರ್ 24ರಂದು ಶರೋನ್ ರಾಜ್ ನನ್ನು ಮನೆಗೆ ಕರೆಸಿ ಕಷಾಯದಲ್ಲಿ ಕೀಟನಾಶಕವನ್ನು ಹಾಕಿದ್ದಳು. ಆತ ಅಲ್ಲಿ ಕೂಡ ಸಾಕಷ್ಟು ಬಾರಿ ವಾಂತಿಯನ್ನು ಮಾಡಿಕೊಂಡಿದ್ದ, ಆದರೆ ಆತ ಕೂಡಲೇ ಅಲ್ಲಿಂದ ಹೊರಡುತ್ತಾನೆ.

ಇದನ್ನು ಗಮನಿಸಿದ ಆತನ ಸಹೋದರ ಕೂಡ ಗ್ರೀಷ್ಮಾಳಿಗೆ ಕರೆ ಮಾಡಿ ಏನಾಗಿದೆ ಎಂಬುದಾಗಿ ಕೇಳಿದಾಗಲೂ ಕೂಡ ಆಕೆ ನನಗೇನು ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಳು. ಒಂದು ವೇಳೆ ಆ ಸಂದರ್ಭದಲ್ಲಿ ಏನು ನಡೆಯಿತು ಎಂಬುದನ್ನು ಹೇಳಿದ್ದರೂ ಕೂಡ ಆತನನ್ನು ಬದುಕಿಸಬಹುದಾಗಿತ್ತು. ಅಕ್ಟೋಬರ್ 25ರಂದು ಚಿಕಿತ್ಸೆ ಫಲಕಾರಿಯಾಗದೆ ಶರೋನ್ ರಾಜ್ ಇಹಲೋಕವನ್ನು ತ್ಯಜಿಸಿದ್ದಾನೆ.

ಆತನ ಪೋಷಕರು ಹಾಗೂ ಮನೆಯವರೆಲ್ಲರೂ ಕೂಡ ನಮ್ಮ ಮಗನ ಮರಣಕ್ಕೆ ಕಾರಣ ಗ್ರೀಷ್ಮಾಳೆ ಎಂಬುದಾಗಿ ಪೊಲೀಸ್ ದೂರನ್ನು ನೀಡಿದ್ದಾರೆ. ಪೊಲೀಸರು ಕೂಡ ಈಗಾಗಲೇ ಆಕೆಯನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮರಣ ಹೊಂದುವ ಮುನ್ನವೂ ಕೂಡ ಆ ಹುಡುಗ ನನಗೆ ಯಾರ ಮೇಲೂ ಕೂಡ ಅನುಮಾನ ಇಲ್ಲ ಎಂಬುದಾಗಿ ಹೇಳಿಕೆ ನೀಡಿ ಮರಣ ಹೊಂದಿದ್ದಾನೆ ಎಂಬುದಾಗಿ ಕೂಡ ಈ ನಡುವೆ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!