ಪತ್ನಿಯ ಮೇಲೆ ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ? ಯಪ್ಪಾ ಹಿಂಗು ಇರ್ತಾರ ಗುರು ಜನ!
ಸ್ನೇಹಿತರೆ ದಾಂಪತ್ಯ ಜೀವನ ಎನ್ನುವುದು ಕೇವಲ ಪ್ರೀತಿಯಲ್ಲಿ ಮಾತ್ರವಲ್ಲದೆ ಪರಸ್ಪರ ಸಂಗಾತಿಗಳ ನಡುವೆ ನಂಬಿಕೆ ಹಾಗೂ ವಿಶ್ವಾಸಿಗಳ ಮೇಲೆ ಅದು ದೀರ್ಘಕಾಲದ ವರೆಗೆ ತಾಜಾತನದಿಂದ ಕೂಡಿರುತ್ತದೆ. ನಂಬಿಕೆ ಹಾಗೂ ವಿಶ್ವಾಸ ಒಂದು ವೇಳೆ ಅಲ್ಲೋಲಕಲ್ಲೋಲ ಆದರೆ ಖಂಡಿತವಾಗಿ ಆ ದಾಂಪತ್ಯ ಜೀವನ ಎನ್ನುವುದು ಸಂಪೂರ್ಣವಾಗಿ ಹಳಿತಪ್ಪುತ್ತದೆ ಎಂದು ಹೇಳಬಹುದಾಗಿದೆ. ಮಂಗಳೂರಿನಲ್ಲಿ ನಡೆದಿರುವ ಒಂದು ಘಟನೆ ಕೂಡ ಇದಕ್ಕೆ ಒಂದು ಸಾಕ್ಷ್ಯವಾಗಿದೆ ಎಂದರೆ ತಪ್ಪಾಗಲಾರದು ಹಾಗಿದ್ದರೆ ಆ ಘಟನೆ ಏನೆಂಬುದನ್ನು ತಿಳಿಯೋಣ ಬನ್ನಿ.
ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಕೂಡ ಎಲ್ಲರೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ. 26 ವರ್ಷಗಳ ದಾಂಪತ್ಯ ಜೀವನ ಎನ್ನುವುದು ಇಬ್ಬರ ಅಸಹಜ ಮರಣದ ಜೊತೆಗೆ ಕೊನೆಯಾಗಿದೆ. ಗಂಡ ತನ್ನ ಹೆಂಡತಿಯನ್ನು ಅನುಮಾನದ ಮೇಲೆ ಮುಗಿಸಿ ತಾನು ಕೂಡ ನೇಣಿನೊಂದಿಗೆ ತನ್ನ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾನೆ. ಮರಣ ಹೊಂದಿದವರನ್ನು 46 ವರ್ಷದ ಶೋಭಾ ಹಾಗೂ 55 ವರ್ಷದ ಶಿವಾನಂದ ಎಂಬುದಾಗಿ ಗುರುತಿಸಲಾಗಿದೆ. ಇಬ್ಬರಿಗೂ ಕೂಡ ಎರಡು ಮಕ್ಕಳಿದ್ದರು.
ಮಗಳಿಗೆ ಈಗಾಗಲೇ ಮದುವೆ ಮಾಡಿಕೊಟ್ಟಿದ್ದರು ಹೀಗಾಗಿ ದಂಪತಿಗಳು ತಮ್ಮ ಮಗನ ಜೊತೆಗೆ ಮನೆಯಲ್ಲಿ ವಾಸವಿದ್ದರು. ಆವತ್ತು ಎಂದರೆ ಅಕ್ಟೋಬರ್ 27ರ ಅಂದರೆ ನಿನ್ನೆ ಮಗ ಕೆಲಸಕ್ಕೆ ಹೋದ ನಂತರ ಗಂಡ ಹಾಗು ಹೆಂಡ ನಡುವೆ ಜಗಳ ಪ್ರಾರಂಭವಾಗಿದೆ. ಆದರೆ ಇವರಿಬ್ಬರ ನಡುವಿನ ಈ ಜಗಳ ಯಾವ ಮಟ್ಟಕ್ಕೆ ತಾರಕಕ್ಕೇರುತ್ತದೆ ಎಂಬುದರ ಅರಿವು ಯಾರಿಗೂ ಕೂಡ ಇರಲಿಲ್ಲ.
ಹೌದು ಮಿತ್ರರೇ ಇವರಿಬ್ಬರ ನಡುವಿನ ಜಗಳ ದೊಡ್ಡ ಮಟ್ಟಕ್ಕೆ ತಲುಪಿ ಶಿವಾನಂದ ತನ್ನ ಹೆಂಡತಿ ಶೋಭಾಳನ್ನು ಕತ್ತಿನ ಮೇಲೆ ಹ’ಲ್ಲೆ ಮಾಡಿ ಮುಗಿಸುತ್ತಾನೆ. ನಂತರ ತನ್ನ ಸಂಬಂಧಿಕರಿಗೆ ಕರೆ ಮಾಡಿ ನಾನು ಕೂಡ ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತೇನೆ ಎಂಬುದಾಗಿ ಹೇಳಿ ಹೂವನ್ನು ತನ್ನಿ ಎಂಬುದಾಗಿ ಫೋನ್ ಇಟ್ಟು ಅಲ್ಲೇ ಹತ್ತಿರದಲ್ಲಿದ್ದ ಮರಕ್ಕೆ ನೇ’ಣು ಹಾಕಿಕೊಂಡು ತನ್ನ ಪ್ರಾಣ ಪಕ್ಷಿಯನ್ನು ಕೈ ಚೆಲ್ಲುತ್ತಾನೆ. ಮೊಮ್ಮಕ್ಕಳ ಜೊತೆಗೆ ಆಟವಾಡ ಬೇಕಾಗಿದ್ದ ವಯಸ್ಸಿನಲ್ಲಿ ಇಂತಹ ಅನುಮಾನಕ್ಕೆ ಸಿಲುಕಿ ಜಗಳವನ್ನು ಮಾಡಿಕೊಂಡು ಪ್ರಾಣವನ್ನು ಕಳೆದುಕೊಂಡಿರುವ ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.