ಮದುವೆ ಆದ ಮೇಲೆ ಕೂಡ ಸ್ನೇಹಿತೆಯ ಜೋತೆ ಗಂಡನ ಬೇಡದ ಸಂಬಂಧವನ್ನು ನೋಡಿ ಬೆಸತ್ತು ಪತ್ನಿ ಶ್ವೇತಾ ಮಾಡಿದ್ದೇನು ಗೊತ್ತಾ?

ದಾಂಪತ್ಯ ಜೀವನ ಎನ್ನುವುದು ಗಂಡ ಹೆಂಡತಿಯ ನಡುವೆ ಎಲ್ಲವೂ ಸರಿ ಇದ್ದಾಗ ಮಾತ್ರ ಚೆನ್ನಾಗಿ ಕಾಣಿಸಿಕೊಳ್ಳುತ್ತದೆ ಅದರಲ್ಲಿಯೂ ವಿಶೇಷವಾಗಿ ಪರಸ್ಪರ ನಡುವೆ ನಂಬಿಕೆ ಹಾಗೂ ವಿಶ್ವಾಸಿಗಳು ಎನ್ನುವುದು ಪ್ರೀತಿಗಿಂತ ಹೆಚ್ಚಾಗಿರಬೇಕು. ಆದರೆ ಇಲ್ಲೊಂದು ದಂಪತಿಗಳ ಜೀವನದಲ್ಲಿ ನಡೆದಿರುವ ಘಟನೆ ನಿಜಕ್ಕೂ ಕೂಡ ಎಲ್ಲರಿಗೂ ಆಶ್ಚರ್ಯ ತರುವಂತಿದೆ. ಹೌದು ಗೆಳೆಯರೇ ಬೆಂಗಳೂರಿನ ರಾಮಮೂರ್ತಿ ನಗರದ 27 ವರ್ಷದ ಶ್ವೇತ ಎನ್ನುವಾಕೆ ಐಬಿಎಮ್ ನಲ್ಲಿ ಉದ್ಯೋಗಿಯಾಗಿದ್ದಳು.

ಇಷ್ಟೊಂದು ವಿದ್ಯಾವಂತೆ ಹಾಗೂ ಉತ್ತಮ ಉದ್ಯೋಗವನ್ನು ಹೊಂದಿರುವ ಮಾಡರ್ನ್ ಝಮಾನದ ಹೆಣ್ಣು ಮಗಳಾಗಿರುವ ಶ್ವೇತ ಗಂಡನ ಬೇಡದ ಸಂಬಂಧದ ಬಗ್ಗೆ ತಿಳಿದು ಬಂದಾಗ ಇದೇ ನವೆಂಬರ್ 10ರಂದು ತನ್ನ ಜೀವನವನ್ನು ತನ್ನ ಕೈಯಾರೆ ತಾನೆ ಮುಗಿಸಿಕೊಂಡಿದ್ದಳು. ಈ ಘಟನೆಯ ಸಂಪೂರ್ಣ ವಿವರ ದಿನ ಕಳೆದಂತೆ ಈಗ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಿದೆ. ಶ್ವೇತಾಳ ಕುಟುಂಬಸ್ಥರು ಈಗ ಆಕೆಯ ಗಂಡ ಅಭಿಷೇಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಅಭಿಷೇಕ್ ಹಾಗೂ ಶ್ವೇತಾ ಇಬ್ಬರ ಮದುವೆ ಕೂಡ 11 ತಿಂಗಳ ಹಿಂದಷ್ಟೇ ನಡೆದಿತ್ತು ಅಂದರೆ ಮದುವೆಯಾಗಿ ಕೇವಲ ಇನ್ನೂ ಒಂದು ವರ್ಷ ಕೂಡ ಕಳೆದಿರಲಿಲ್ಲ. ಅಭಿಷೇಕ್ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಶ್ವೇತ ಐಬಿಎಮ್ ಕಂಪನಿಯಲ್ಲಿ ಉದ್ಯೋಗವನ್ನು ಮಾಡುತ್ತಿದ್ದರು. ಮದುವೆಗೂ ಮುಂಚೆನೇ ಅಭಿಷೇಕ್ ಬೇರೆ ಹುಡುಗಿಯ ಜೊತೆಗೆ ಸಂಬಂಧವನ್ನು ಹೊಂದಿದ್ದರು ಎಂಬುದಾಗಿ ತಿಳಿದು ಬಂದು ಶ್ವೇತ ಮದುವೆಯ ಹೊಸದರಲ್ಲಿಯೇ ಅಭಿಷೇಕ್ ಜೊತೆ ಈ ವಿಚಾರವಾಗಿ ಜಗಳವನ್ನು ಮಾಡುತ್ತಿದ್ದಳು.

Ramamurthy nagara shwetha case

ನಂತರ ಕುಟುಂಬಸ್ಥರ ರಾಜಿ ಪಂಚಾಯಿತಿ ನಂತರ ಇಬ್ಬರ ನಡುವೆ ಕೂಡ ಶಾಂತಿ ಸಂದನ ನಡೆದು ಇಬ್ಬರ ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗಿತ್ತು ಆದರೆ ಅಭಿಷೇಕ್ ಮತ್ತೆ ತನ್ನ ಹಳೆ ಚಾಳಿಯನ್ನು ಈ ಸಮಯದಲ್ಲಿ ಪುನರಾವರ್ತಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ತಾಳಲಾರದೆ ಬೇಸತ್ತು ಶ್ವೇತ ತನ್ನ ಜೀವನವನ್ನು ತಾನೇ ನೇ’ಣು ಹಾಕಿಕೊಳ್ಳುವ ಮೂಲಕ ಮುಗಿಸಿಕೊಂಡಿದ್ದಾಳೆ ಎಂಬುದಾಗಿ ರಾಮಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ಸಾರಾಂಶದಲ್ಲಿ ದೂರು ದಾಖಲಾಗಿದೆ.

Leave a Comment

error: Content is protected !!