ಆತ್ಮೀಯ ಗೆಳೆಯ ಅಂತಾನೂ ನೋಡದೆ ಎಲ್ಲರ ಮುಂದೆ ಅರುಣ್ ಸಾಗರ್ ಗೆ ಪಾಠ ಕಲಿಸಿದ ಕಿಚ್ಚ ಸುದೀಪ್

ಬಿಗ್ ಬಾಸ್ ಈಗಾಗಲೇ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು ಮೊದಲ ವಾರದ ಎಲಿಮಿನೇಷನ್ ಹಂತ ಕೂಡ ಹತ್ತಿರ ಬಂದಿದೆ. ಇನ್ನು ವೀಕೆಂಡ್ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮವು ಕೂಡ ಈಗಾಗಲೇ ಬಂದಿದ್ದು ಕಿಚ್ಚ ಸುದೀಪ್ ಅವರು ಅರುಣ್ ಸಾಗರ್ ಅವರ ಕುರಿತಂತೆ ಶನಿವಾರದ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಇದು ಈಗ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ನಿಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾದ ಆಚೆಗೂ ಕೂಡ ಅರುಣ್ ಸಾಗರ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಗೆಳೆಯ. ಇನ್ನು ಬಿಗ್ ಬಾಸ್ ಅನ್ನು ಗಮನಿಸುವುದಾದರೆ ಮೊದಲ ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ಅರುಣ್ ಸಾಗರ್ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿಯ ಬಿಗ್ ಬಾಸ್ ನಲ್ಲಿ ಮತ್ತೆ ಮರು ಅವಕಾಶವನ್ನು ಪಡೆದುಕೊಂಡಿದ್ದು ಈ ಬಾರಿ ಗೆಲ್ಲುವ ಫೇವರಿಟ್ ಸ್ಪರ್ಧಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಆದರೆ ವೀಕೆಂಡ್ ಸಂಚಿಕೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೋಪಗೊಳ್ಳುವಂತಹ ಒಂದು ಕಾರ್ಯವನ್ನು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ಮಾಡಿದ್ದಾರೆ.

ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನಾಕಾರದ ಚೌಕದ ಒಳಗೆ ಬಾಲ್ ಗಳನ್ನು ಪಿರಮಿಡ್ ಆಕಾರದಲ್ಲಿ ಇಡುವಂತಹ ಟಾಸ್ಕ್ ಅನ್ನು ನೀಡಲಾಗಿತ್ತು. ಆಗ ಈ ಸಂದರ್ಭದಲ್ಲಿ ನವಾಜ್ ಅವರಿಗೆ ಜೋಡಿಯಾಗಿದ್ದು ಅರುಣ್ ಸಾಗರ್. ಈ ಟಾಸ್ಕನ್ನು ಅರುಣ್ ಸಾಗರ್ ಹಾಗೂ ನವಾಜ್ ಜೋಡಿಗಳಿಗೆ ಮಾಡಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಟಾಸ್ಕ್ ಪೂರೈಸುವ ಬದಲು ತಮಾಷೆಯಾಗಿ ಕಾಲಹರಣ ಮಾಡುತ್ತಾ ಅರುಣ್ ಸಾಗರ್ ನಿಲ್ಲುತ್ತಾರೆ. ಇದಕ್ಕಾಗಿಯೇ ಮನೆಯಲ್ಲಿ ಕೆಲವು ಸದಸ್ಯರು ಕಳಪೆ ಪಟ್ಟವನ್ನು ಕೂಡ ಅವರಿಗೆ ನೀಡುತ್ತಾರೆ.

ಈ ಸಂದರ್ಭದಲ್ಲಿ ಅರುಣ್ ಸಾಗರ್ ಮನೆಯ ಬೇರೆ ಸ್ಪರ್ಧಿಗಳ ವಿರುದ್ಧ ಕೋಪಗೊಳ್ಳುತ್ತಾರೆ. ಇದಕ್ಕೆ ಪ್ರತಿಕ್ರಿಸುತ್ತಾ ಕಿಚ್ಚ ಸುದೀಪ್ ಅವರು ನಾಯಕ ಆಗುವ ಸ್ಥಳದಲ್ಲಿ ಜೋಕರ್ ಆಗಬೇಡಿ ಹಾಗೂ ಜೋಕರ್ ಆಗುವ ಸ್ಥಳದಲ್ಲಿ ನಾಯಕ ಆಗಬೇಡಿ ಎಂಬುದಾಗಿ ಹೇಳುತ್ತಾರೆ. ನೀವು ಕೂಡ ಈ ಸಂಚಿಕೆಯನ್ನು ನೋಡಿದ್ದರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!