‘ತಾನು ಕಪ್ಪಗಿದ್ದೇನೆಂದು ಅಮ್ಮನಿಗೆ ಕೇಳರಿಮೆಯಿದೆ’..ಬಿಗ್ ಬಾಸ್ ಮನೆಯಲ್ಲಿ ತಾಯಿಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾನ್ಯ ಅಯ್ಯರ್..!!

ಹೊರಗಡೆ ಪ್ರಪಂಚದಲ್ಲಿ ಎಲ್ಲರೊಂದಿಗೆ ಎಲ್ಲರೂ ಬೆರೆಯುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಬೇಕೆಂದರೆ ಇತರ ಸ್ಪರ್ಧಿಗಳೊಂದಿಗೆ ಬೆರೆಯಬೇಕು. ಮೊಬೈಲ್, ಟಿವಿಗಳ ಬಳಕೆ ಇರುವುದಿಲ್ಲ. ಕುಟುಂಬದವರು, ಸ್ನೇಹಿತರು ಯಾರೊಂದಿಗೂ ಸಂಪರ್ಕವಿಲ್ಲದಿರುವಾಗ ಬಿಗ್ ಬಾಸ್ ಮನೆಯ ಸದಸ್ಯರೇ ಸಂಬಂಧಿಕರು, ಸ್ನೇಹಿತರು ಎಲ್ಲವೂ ಆಗುತ್ತಾರೆ.

ಬಿಗ್ ಬಾಸ್ ಮನೆಯ ಕೆಲವೊಂದು ಆಟಗಳು, ಏರ್ಪಡಿಸುವ ಕೆಲವು ಕಾರ್ಯಕ್ರಮಗಳು ಮನೆಯ ಸ್ಪರ್ಧಿಗಳ ಕಹಿ ಘಟನೆಗಳನ್ನು ಹೇಳಿಕೊಳ್ಳುವ, ಸಿಹಿ ಸನ್ನಿವೇಶಗಳನ್ನು ಹಂಚಿಕೊಳ್ಳುವ ವೇದಿಕೆಯನ್ನು ಸೃಷ್ಟಿಸುತ್ತದೆ. ಎಷ್ಟೊಂದು ಸ್ಪರ್ಧಿಗಳು ತಮ್ಮೊಳಗಿನ ಬೇಸರವನ್ನು ಹೇಳಿಕೊಂಡು ಮನವನ್ನು ನಿರಾಳ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 9 ಅಲ್ಲಿ ಕನ್ನಡದ ಪುಟ್ಟಗೌರಿ ಎಂದೆ ಖ್ಯಾತಿಯಾಗಿರುವ ಸಾನ್ಯ ಅವರು ಓಟಿಟಿಯಿಂದ ಅನುಭವ ಪಡೆದು ಬಂದು ಸ್ಪರ್ದಿ ಆಗಿರುವುದು ನಮಗೆಲ್ಲ ತಿಳಿದೇ ಇದೆ. ತಮ್ಮ ಮುದ್ದಾದ ನಗು, ರೂಪೇಶ್ ಜೊತೆಗಿನಾ ತಮಾಷೆಯ ಕೂಗಾಟಗಳಿಂದ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಸಾನ್ಯ ಅಯ್ಯರ್ ತಮ್ಮ ಪ್ರೀತಿಯ ತಾಯಿಯ ಬಗ್ಗೆ ಮಾತನಾಡಿದ್ದಾರೆ.

ಸಾನ್ಯ ಅಯ್ಯರ್ ಅವರ ತಾಯಿಯ ಹೆಸರು ದೀಪಾ ಅಯ್ಯರ್. ಇವರು ಕೂಡ ಕಲಾವಿದರು. ಚಿತ್ರಗಳಲ್ಲಿ, ದೂರದರ್ಶನದಲ್ಲಿ ಪ್ರಸಾರವಾಗುವ ದಾರವಾಹಿಗಳಲ್ಲಿ ಕಾಣಿಸಿಕೊಂಡಿರುವ ಇವರು ನಿರ್ಮಾಪಕರು ಹೌದು. ದೀಪ ಅಯ್ಯರ್ ಅವರು ಕಲರ್ಸ್ ಕನ್ನಡ ವಾಹಿನಿಯ ‘ಲಕ್ಷಣ’ ದಾರವಾಹಿಯಲ್ಲಿ ಆರತಿ ಪಾತ್ರಕ್ಕಾಗಿ ಬಣ್ಣ ಹಚ್ಚುತಿದ್ದಾರೆ.

ಕನ್ನಡ ರಾಜ್ಯೋತ್ಸವದಂದು ಬಿಗ್ ಬಾಸ್ ಸೀಸನ್ ೯ ರ ಸ್ಪರ್ಧಿಗಳು ಕರ್ನಾಟಕದ ಹಲವು ಜಿಲ್ಲೆಗಳ ವಿಶೇಷತೆಯನ್ನು ಸಾರುವ ಹಾಡನ್ನು ಹಾಡಿ ನಂತರ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿ ಕುಣಿದು ಕುಪ್ಪಳಿಸಿದ್ದಾರೆ. ಅದೇ ದಿನ ಸಾನ್ಯ ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ.

“ನಾನು ಒಂದು ಮಟ್ಟದಲ್ಲಿ ಕನ್ನಡವನ್ನು ಬರೆಯುತ್ತೇನೆ, ಮಾತನಾಡುತ್ತೇನೆ ಎಂದರೆ ಅದಕ್ಕೆ ಕಾರಣ ನನ್ನ ತಾಯಿ. ಆಕೆಯೊಂದಿಗೆ ನಾನು ಅತಿ ಹೆಚ್ಚು ಜಗಳ ಮಾಡಿರೋದು; ಕೋಪ ಮಾಡಿಕೊಂಡಿರುವುದು. ಆದರೆ ಮೊದಲು ಹೋಗಿ ಅಮ್ಮನ ಬಳಿ ಕ್ಷಮೆ ಕೇಳುವುದು ನಾನೇ….’ಕಪ್ಪಗಿದ್ದೀನಿ ಅಂತ ಅಮ್ಮನಿಗೆ ಕೀಳರಿಮೆಯಿದೆ’, ಚೂರು ಬೆಳ್ಳಗೆ ಇದ್ದಿದ್ದರೆ ತನ್ನ ಸಣ್ಣ ವಯಸ್ಸಿನಲ್ಲಿಯೇ ಹೀರೋಯಿನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಿತ್ತು ಎಂಬ ಆಸೆ ಇತ್ತು. ಅವರು ನನಗಿಂತ ಬೆಳ್ಳಗೆ ಇದ್ದಿದ್ದರು; ಸಡನ್ ಆಗಿ ಅದೇನೊ ಪಿಗ್ಮೆಂಟೇಷನ್ ಆಗಿ ಕಪ್ಪಗಾದರು. ಅದೊಂದು ಕೀಳರಿಮೆ ನನ್ನ ತಾಯಿಯಲ್ಲಿ ಎಂದಿಗೂ ಇದೆ. ಆದರೆ ಅವರು ಹೀಗಿರೋದಕ್ಕೆ ಅವರಿಗೆ ‘ಲಕ್ಷಣ’ ಧಾರವಾಹಿಯಲ್ಲಿ ಆರತಿ ಪಾತ್ರ ದೊರಕಿರುವುದು. ಅಲ್ಲದೆ ಆ ಧಾರವಾಹಿಯಲ್ಲಿ ಸೂಪರ್ ಅಮ್ಮ ಎನಿಸಿಕೊಂಡಿರುವುದು. ಐ ಲವ್ ಯು ಸೋ ಮಚ್ ಅಮ್ಮಾ” ಎಂದು ಭಾವುಕರಾಗಿ ಸಾನ್ಯ ಅಯ್ಯರ್ ಮಾತನಾಡಿದ್ದಾರೆ.

Leave a Comment

error: Content is protected !!