ಬಂಡೆಮಠದ ಸ್ವಾಮೀಜಿಯ ಪ್ರಕರಣಕ್ಕೆ ಹೊಸ ಟ್ವಿಸ್ಟ್!. ಹೊರ ಬಿತ್ತು ಸ್ವಾಮೀಜಿಯ ವಿಡಿಯೋ ಕಾಲ್ ಸುದ್ದಿ

ಇತ್ತೀಚಿಗಷ್ಟೇ ಬಂಡೆ ಮಠದ ಬಸವಲಿಂಗ ಸ್ವಾಮೀಜಿಗಳು ಮರಣ ಹೊಂದಿರುವ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದೆ ಯಾಕೆಂದರೆ ಅವರದು ಸಹಜ ಮರಣವಲ್ಲ ಬದಲಾಗಿ ಅವರು ತಮ್ಮ ಜೀವವನ್ನು ತಾವೇ ತೆಗೆದುಕೊಂಡಿರುವುದು. ಇನ್ನು ಸದ್ಯಕ್ಕೆ ಪ್ರಸ್ತುತವಾಗಿ ಓಡಾಡುತ್ತಿರುವ ಸುದ್ದಿಯ ಪ್ರಕಾರ ಸ್ವಾಮೀಜಿಗಳು ಯಾವುದೋ ಮಹಿಳೆಯ ಜೊತೆಗೆ ಬೇಡದ ವಿಡಿಯೋ ಕಾಲ್ ಮಾಡಿದ್ದರು ಎಂಬುದಾಗಿ ಕೂಡ ತಿಳಿದುಬರುತ್ತದೆ.

ದಿನಕಳೆದಂತೆ ಬಂಡೆಮಠದ ಸ್ವಾಮೀಜಿಗಳ ಮರಣದ ಸುತ್ತಮುತ್ತ ಹಲವಾರು ಸತ್ಯಾಂಶಗಳು ಹಾಗೂ ಘಟನೆಗಳು ಹೊರ ಬರುತ್ತಲೇ ಇವೆ. ಕೇವಲ ಎಷ್ಟು ಮಾತ್ರವಲ್ಲದೆ ಮರಣದ ನಂತರ ತನಿಖೆ ನಡೆಸಿದ ಕೂಡಲೇ ಅವರು ಮರಣ ಹೊಂದುವುದಕ್ಕಿಂತ ಮುಂಚೆ ಬರೆದಿಟ್ಟಿರುವ ಎರಡು ಪುಟದ ಪತ್ರವೂ ಕೂಡ ಈಗಾಗಲೇ ಪೊಲೀಸರಿಗೆ ದೊರಕಿದೆ. ಇದರ ಕುರಿತಂತೆ ಈಗಾಗಲೇ ಪೊಲೀಸರು ಕೂಡ ಯಾವುದೋ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಹಲವಾರು ಅನುಮಾನಗಳಿಗೆ ಕೂಡ ಈ ನಡೆ ಎಡೆ ಮಾಡಿಕೊಟ್ಟಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಈ ಪ್ರಕರಣವನ್ನು ಇನ್ನಷ್ಟು ತನಿಖೆ ಮಾಡುತ್ತಾ ಹೋಗುತ್ತಿದ್ದಂತೆ ಶ್ರೀಗಳು ಮರಣಹೊಂದುವ ಅರ್ಧ ಗಂಟೆಗೂ ಮುನ್ನ ಅದೇ ದಿನ ಇಬ್ಬರು ವ್ಯಕ್ತಿಗಳು ಅವರನ್ನು ಭೇಟಿಯಾಗುವುದಕ್ಕೆ ಬಂದಿದ್ದರು ಹಾಗೂ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯಗಳ ಕಾಲ ಶ್ರೀಗಳ ಜೊತೆಗೆ ಆ ಇಬ್ಬರು ಆಗಂತುಕರು ಮಾತನಾಡಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಅವರಿಬ್ಬರೂ ಶ್ರೀಗಳ ಜೊತೆಗೆ ಮಾತನಾಡಿ ಹೋದ ನಂತರ ಸಂಪೂರ್ಣವಾಗಿ ಇವರು ವಿಚಲಿತರಾಗಿದ್ದರು ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಆ ವ್ಯಕ್ತಿಗಳು ಶ್ರೀಗಳಿಗೆ ಯಾವುದೋ ಕಾರಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ಈ ರೀತಿ ಮಾಡಿಕೊಳ್ಳುವ ಹಾಗೆ ಮಾಡಿದ್ದಾರೆ ಎಂಬ ಸುದ್ದಿಗಳು ಕೂಡ ಓಡಾಡುತ್ತಿವೆ.

ಈಗ ಮತ್ತೊಂದು ವಿಚಾರದ ಪ್ರಕಾರ ಸ್ವಾಮೀಜಿಗಳೇ ಬರೆದಿರುವ ಕೊನೆಯ ಪಾತ್ರದಲ್ಲಿ ಒಬ್ಬ ಮಹಿಳೆಯ ವಿಚಾರವನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಆಕೆ ಜೊತೆಗೆ ಸ್ವಾಮೀಜಿಗಳು ಮಾಡಿರುವ ವಿಡಿಯೋ ಕಾಲ್ ವಿಡಿಯೋವನ್ನು ಇಟ್ಟುಕೊಂಡು ಸ್ವಾಮೀಜಿಗಳನ್ನು ಹನಿ ಡ್ರಾಪ್ ಮಾಡಲಾಗಿದೆ ಎಂಬುದಾಗಿ ಕೂಡ ಬಲವಾದ ಮಾಹಿತಿಗಳು ಸಿಗುತ್ತಿವೆ. ಆ ಮಹಿಳೆಯೊಂದಿಗೆ ಸ್ವಾಮೀಜಿಗಳು ಬರೋಬ್ಬರಿ ಆರು ತಿಂಗಳಿಂದ ಪರಿಚಿತರಾಗಿದ್ದು ಚಾಟಿಂಗ್ ಸೇರಿದಂತೆ ಇನ್ನಿತರ ವಿಚಾರಗಳನ್ನು ಮಾಡುತ್ತಿದ್ದರು ಹೀಗಾಗಿಯೇ ಆ ಮಹಿಳೆಯನ್ನು ಬಳಸಿಕೊಂಡು ಸ್ವಾಮೀಜಿಯನ್ನು ಸಿಲುಕಿಸಿರಬಹುದು ಎಂಬುದಾಗಿ ಕೂಡ ಶಾಖೆ ವ್ಯಕ್ತವಾಗುತ್ತಿದ್ದು ಮುಂದಿನ ದಿನಗಳಲ್ಲಿ ತನಿಖೆ ಯಾವ ರೀತಿಯಲ್ಲಿ ಸಾಗುತ್ತದೆ ಅದರ ಮೇಲೆ ನಿಜಕ್ಕೂ ಏನು ನಡೆದಿದೆ ಎಂಬ ಸತ್ಯಾಂಶ ಹೊರಬರಲಿದೆ.

Leave a Comment

error: Content is protected !!