Aishwarya Rajinikanth: ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ರಜನಿಕಾಂತ್ ಪುತ್ರಿ. ಕದ್ದಿದ್ದು ಯಾರಂತೆ ಗೊತ್ತಾ?

Rajinikanth ಬೆಂಗಳೂರು ಮೂಲದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್(Rajinikanth) ಅವರು ವಯಸ್ಸು 70 ಆಗಿದ್ದರೂ ಕೂಡ ಎಂದಿಗೂ 35ರ ಹರೆಯದ ನಟನಂತೆ ಎನರ್ಜಿಟಿಕ್ ಆಗಿ ನಟಿಸುತ್ತಿರುವುದು ನಿಜಕ್ಕೂ ಕೂಡ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿ ನೀಡುವಂತದ್ದು. ಇನ್ನು ಅವರ ಮಗಳಾಗಿರುವ ಐಶ್ವರ್ಯ ರಜನಿಕಾಂತ್(Aishwarya Rajinikanth) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಅವರ ಪತಿಯಾಗಿರುವ ನಟ ಧನುಷ್(Dhanush) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ.

ಇದು ರಜನಿಕಾಂತ್ ಅವರಿಗೂ ಕೂಡ ಸಾಕಷ್ಟು ಬೇಸರವನ್ನು ಮೂಡಿಸಿದ್ದು ಇವರಿಬ್ಬರೂ ಒಂದಾಗಲಿ ಎನ್ನುವುದಾಗಿ ಹಲವಾರು ಪ್ರಯತ್ನಗಳನ್ನು ಕೂಡ ನಡೆಸಿದರು ಎನ್ನುವುದಾಗಿ ತಿಳಿದುಬಂದಿದೆ. ಅದೇನೇ ಇರಲಿ ಎಲ್ಲರೂ ಕೂಡ ಈಗ ಈ ಕುಟುಂಬದಿಂದ ಕೇಳಿ ಬರುತ್ತಿರುವ ಸುದ್ದಿ ಬೇರೇನೇ ಆಗಿದೆ. ಹೌದು ಮಿತ್ರರೇ ಇತ್ತೀಚಿಗಷ್ಟೇ ರಜನಿಕಾಂತ್(Rajinikanth) ಪುತ್ರಿಯಾಗಿರುವ ಐಶ್ವರ್ಯ ಅವರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದು ಇದಕ್ಕೆ ಕಾರಣ ಅವರ ಮನೆಯಲ್ಲಿರುವ ಚಿನ್ನಾಭರಣ ಕಳವಾಗಿದೆಯಂತೆ.

ಅರೆ ಇದೇನು ಸೆಲೆಬ್ರಿಟಿಗಳ ಮನೆಯಲ್ಲಿ ಕೂಡ ಅವರ ಅಮೂಲ್ಯ ವಸ್ತುಗಳಿಗೆ ರಕ್ಷಣೆ ಇಲ್ವಾ ಎನ್ನುವುದಾಗಿ ನೀವು ಕೇಳಬಹುದು ಆದರೆ ಕದ್ದಿರುವ ಖದೀಮರು ಯಾರು ಅಂತ ಗೊತ್ತಾದ್ರೆ ನೀವು ಕೂಡ ಆಶ್ಚರ್ಯ ಪಡ್ತಿರಾ. ಹೌದು ಮಿತ್ರರೇ ಐಶ್ವರ್ಯ ರಜನಿಕಾಂತ್(Aishwarya Rajinikanth) ಅವರ ರೂಮಿನಲ್ಲಿರುವ ಲಾಕರ್ ಬೀಗ ಗೊತ್ತಿರುವವರೇ ಇದನ್ನು ಕದ್ದಿದ್ದಾರೆ. ಹೀಗೆಂದ ಮಾತ್ರಕ್ಕೆ ಮನೆಯ ಕುಟುಂಬದ ಸದಸ್ಯರ ಬಗ್ಗೆ ನೀವು ಅನುಮಾನ ಪಡಬೇಡಿ.

ಹೌದು ಈ ಚಿನ್ನಾಭರಣಗಳನ್ನು ಹಾಗೂ ವಜ್ರಭರಣಗಳನ್ನು ಕದ್ದಿರುವುದು ಬೇರೆ ಯಾರು ಅಲ್ಲ ಐಶ್ವರ್ಯ ಅವರ ಮನೆಯ ಕೆಲಸದಾಕೆ ಆಗಿರುವ ಐಶ್ವರ್ಯ ಹಾಗೂ ಕಾರ್ ಡ್ರೈವರ್ ಆಗಿರುವ ವೆಂಕಟೇಶ್ ಎಂಬುದಾಗಿ ತಿಳಿದು ಬಂದಿದ್ದು ಪೊಲೀಸರೇ ಇವರನ್ನು ಹಿಡಿದಿದ್ದಾರೆ. ಈ ಚಿನ್ನಾಭರಣಗಳಿಂದ ಮಾರಿದ ಹಣದಿಂದ ಈಶ್ವರಿ ಈಗಾಗಲೇ ಹೊಸ ಮನೆಯನ್ನು ಕೂಡ ಕಟ್ಟಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. 18 ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿದ್ದರು ಕೂಡ ಈ ರೀತಿ ಮಾಡಿರುವುದು ನಿಜಕ್ಕೂ ಕೂಡ ಆಶ್ಚರ್ಯವನ್ನು ತರಿಸಿದೆ.

Leave a Comment

error: Content is protected !!