Amulya: ಮತ್ತೊಂದು ಗುಡ್ ನ್ಯೂಸ್ ಕೊಡ್ತಿದ್ದಾರಂತೆ ನಟಿ ಅಮೂಲ್ಯ. ನಿಜಾನಾ ಗಾಳಿ ಸುದ್ದಿನ ನೀವೇ ನೋಡಿ.

Amulya ನಟಿ ಅಮೂಲ್ಯ ಅವರು ಚಿಕ್ಕಂದಿನಿಂದಲೂ ಕೂಡ ದರ್ಶನ್(Darshan) ಹಾಗೂ ಸುದೀಪ್(Sudeep) ಅವರಂತಹ ದಿಗ್ಗಜ ನಟರ ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡು ಬಂದವರು. ಹೀಗಾಗಿ ಚಿತ್ರರಂಗ ಎನ್ನುವುದು ಅವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಅತ್ಯಂತ ಹತ್ತಿರವಾಗಿತ್ತು. ಇನ್ನು ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅಮೂಲ್ಯ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕೂಡ ಪಾದರ್ಪಣೆ ಮಾಡುತ್ತಾರೆ.

ಹೌದು ಗೆಳೆಯರೇ ನಟಿ ಅಮೂಲ್ಯ ಅವರು ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ನಾಯಕನಟಿಯಾಗಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಪಾದರ್ಪಣೆ ಮಾಡುವುದು ಮಾತ್ರವಲ್ಲದೆ ಆ ಸಿನಿಮಾ ಸೂಪರ್ ಹಿಟ್ ಕೂಡ ಆಗುತ್ತದೆ.

ಇನ್ನು ಅಮೂಲ್ಯ(Amulya) ಅವರು ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಟಾಪ್ ನಲ್ಲಿ ಇದ್ದಾಗಲೇ ಜಗದೀಶ್ ರವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಚಿತ್ರರಂಗದಿಂದ ಸಂಪೂರ್ಣವಾಗಿ ಹೊರ ಹೋಗುತ್ತಾರೆ. ಸಾಕಷ್ಟು ಸಮಯಗಳಿಂದ ಚಿತ್ರರಂಗದಿಂದ ದೂರವಿದ್ದ ಅಮೂಲ್ಯ ಇಂದು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುತ್ತಿದ್ದಾರೆ.

ಹೌದು ಗೆಳೆಯರೇ ಅಮೂಲ್ಯ(Darshan) ಅವರು ಮೂಲೆಗಳ ಪ್ರಕಾರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರುಪಾದರ್ಪಣೆ ಮಾಡಲಿದ್ದು ಈ ಬಾರಿ ದರ್ಶನ್ ರವರ ಮುಂದಿನ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವಂತಹ ಸುದ್ದಿ ಇದ್ದು ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Leave a Comment

error: Content is protected !!