Anchor Anushree ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ನಟಿ ಶುಭಪುಂಜ ರವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾಗಿ ಹೋಗಿದ್ದರು. ನಂತರ ಅವರು ಗುರುತಿಸಿಕೊಂಡಿದ್ದೆ ಬಿಗ್ ಬಾಸ್(Biggboss) ಕಾರ್ಯಕ್ರಮದ ಮೂಲಕ. ಈ ಕಾರ್ಯಕ್ರಮದ ಮೂಲಕ ಅವರ ಮೇಲಿದ್ದ ಎಲ್ಲಾ ತಪ್ಪು ಕಲ್ಪನೆಗಳು, ಜನರಿಂದ ಮಾಯವಾದವು ಎಂದರು ತಪ್ಪಾಗಲಾರದು.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ(Sumanth Mahabala) ಅವರನ್ನು ಮದುವೆಯಾಗುವ ಮೂಲಕ ನಟಿ ಶುಭಪುಂಜ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಇತ್ತೀಚಿಗಷ್ಟೇ ಆಂಕರ್ ಅನುಶ್ರೀ ಅವರ ಯುಟ್ಯೂಬ್ ಚಾನೆಲ್ ಗೆ ಸಂದರ್ಶನಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ಕೆಲವೊಂದು ಸ್ವಾರಸ್ಯಕರ ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು ಇದರ ಬಗ್ಗೆ ನೀವು ಓದಲೇ ಬೇಕಾಗಿದೆ ಹೀಗಾಗಿ ಕೊನೆವರೆಗೂ ತಪ್ಪದೆ ಓದಿ.
ಪ್ರೇಮಿಗಳ ದಿನಾಚರಣೆಯ ವಿಶೇಷ ಸಂಚಿಕೆಯಲ್ಲಿ ಶುಭಪುಂಜ(Shubha Poonja) ಹಾಗೂ ಅವರ ಪತಿ ಸುಮಂತ್ ಇಬ್ಬರೂ ಕೂಡ ಅತಿಥಿಗಳಾಗಿ ಆಂಕರ್ ಅನುಶ್ರೀ ಅವರ ಚಾನಲ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ಹಳೆಯ ಮಾತುಗಳನ್ನು ನೆನಪಿಸಿಕೊಂಡ ಗೆಳತಿಯ ರಾಗಿರುವ ಶುಭಪುಂಜ ಹಾಗೂ ಆಂಕರ್ ಅನುಶ್ರೀ ಅವರು, ಒಂದು ದಿನ ಶುಭಪುಂಜ ಅವರ ಮನೆಗೆ ಅನುಶ್ರೀ ಅವರು ಬಂದಾಗ ಸಾಕಷ್ಟು ಹೊಟ್ಟೆ ಹಸುವಿನಿಂದ ಬೇಗ ಊಟ ಹಾಕು ಎಂದು ಹೇಳಿದಾಗ ಅಲ್ಲೇ ಇದ್ದ ಚಿಕನ್ ಅನ್ನು ಹೇಳದೆ ಕೇಳದೆ ಅನುಶ್ರೀ ಅವರು ತಿಂದು ಬಿಟ್ಟಿದ್ದರಂತೆ.
ನಂತರ ಅದರಲ್ಲಿ ಉಪ್ಪು ಇರದಿದ್ದನ್ನು ನೋಡಿ ಉಪ್ಪು ಕೊಡು ಎಂದು ಶುಭ ಪೂಂಜಾ ರವರಲ್ಲಿ ಅನುಶ್ರೀ(Anchor Anushree) ಅವರು ಕೇಳಿದಾಗ ಅದು ನಾಯಿಗೆ ಇಟ್ಟ ಚಿಕನ್ ಎಂಬುದಾಗಿ ಹೇಳಿದ್ದರಂತೆ. ಇಂತಹ ಘಟನೆಗಳನ್ನು ಸ್ನೇಹಿತೆಯರಾಗಿರುವ ಶುಭ ಪೂಂಜ ಹಾಗೂ ಅನುಶ್ರೀ ಅವರು ಸಂದರ್ಶನ ಸಂದರ್ಭದಲ್ಲಿ ನೆನಪಿಸಿಕೊಂಡು ಕಳೆದು ಹೋದ ಘಟನೆಯ ಮೆಲುಕನ್ನು ಹಾಕಿದ್ದಾರೆ. ನಟಿ ಅನುಶ್ರೀ ಹಾಗೂ ಶುಭಪುಂಜ ಅವರ ಗೆಳೆತನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.