Yuvarajkumar: ಯುವರಾಜ್ ಕುಮಾರ್ ಗೆ ಬಾಡಿಗಾರ್ಡ್ ಆಗ್ತೀರಾ ಎಂದು ಕೇಳಿದ್ದಕ್ಕೆ ಅಪ್ಪು ಬಾಡಿಗಾರ್ಡ್ ನೀಡಿದ ಉತ್ತರ ಏನು ಗೊತ್ತಾ? ನೀವೂ ಕೂಡ ಶಾ’ ಕ್ ಆಗ್ತೀರಾ!

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಬಾಡಿಗಾರ್ಡ್ ಆಗಿದ್ದವರು ಚಲಪತಿ(Chalapathi Bodyguard). ತಮ್ಮ ಒಡೆಯ ಎಲ್ಲೇ ಇದ್ದರೂ ಕೂಡ ಅವರ ರಕ್ಷಣೆಗಾಗಿ ಅವರ ಬೆನ್ನ ಹಿಂದೆ ನಿಲ್ಲುತ್ತಿದ್ದವರು ಚಲಪತಿ. ಆದರೆ ಪುನೀತ್ ರಾಜಕುಮಾರ್(Puneeth Rajkumar) ಅವರ ಮರಣದ ನಂತರ ದೊಡ್ಡಮನೆಯಿಂದ ಚಲಪತಿ ಹೊರ ನಡೆದಿದ್ದರು.

ಇನ್ನು ಇತ್ತೀಚಿಗಷ್ಟೇ ಯುವರಾಜಕುಮಾರ್(Yuvarajkumar) ಅವರ ಯುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಎದುರು ಕಾಣಿಸಿಕೊಂಡಿದ್ದ ಚಲಪತಿ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಂದಿಗೂ ಕೂಡ ದೊಡ್ಮನೆಗೆ ಹೋಗಿ ಬರುವಂತಹ ಸಲಿಗೆಯನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದವರು ಅವರಿಗೆ ಒಂದು ಪ್ರಶ್ನೆಯನ್ನು ಎಸೆಯುತ್ತಾರೆ.

ಅದೇನೆಂದರೆ ಮುಂದಿನ ದಿನಗಳಲ್ಲಿ ಯುವರಾಜ್ ಕುಮಾರ್ ಅವರು ಒಂದು ವೇಳೆ ಚಲಪತಿ ಮತ್ತೆ ಬಂದು ನನಗೆ ಬಾಡಿಗಾರ್ಡ್ ಆಗಿ ಇರು ಎಂಬುದಾಗಿ ಹೇಳಿದರೆ ನೀವು ಒಪ್ಪಿಕೊಳ್ಳುತ್ತೀರಾ ಎಂಬುದಾಗಿ ಸಂದರ್ಶಕರು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಚಲಪತಿ(Chalapathi) ನೀಡಿದ ಉತ್ತರ ಇಲ್ಲ ಎಂದಾಗಿತ್ತು ಆದರೆ ಅದಕ್ಕೆ ಅವರು ನೀಡಿರುವ ಕಾರಣ ಮಾತ್ರ ಅದ್ಭುತವಾಗಿತ್ತು. ಅಷ್ಟಕ್ಕೂ ಇಲ್ಲ ಎನ್ನುವುದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಅಲ್ಲಿ ಹೋದರೆ ಖಂಡಿತವಾಗಿ ಮತ್ತೆ ಯಜಮಾನರ ನೆನಪು ಬರುತ್ತದೆ ಯಜಮಾನರು ಇಲ್ಲದ ಜಾಗದಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಇನ್ನು ಮುಂದೆ ಅಲ್ಲಿಗೆ ಕೆಲಸದ ನಿಮಿತ್ತವಾಗಿ ನಾನು ಹೋಗುವುದಿಲ್ಲ ಎಂಬುದಾಗಿ ಚಲಪತಿ ಸ್ಪಸ್ಟಿಕರಿಸಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಯುವರಾಜಕುಮಾರ್(Yuvarajkumar) ಅವರ ಜೊತೆಗೆ ಕೆಲಸ ಮಾಡಲು ಹಲವಾರು ಯುವ ಪ್ರತಿಭೆಗಳು ಕೂಡ ಕಾಯುತ್ತಿದ್ದು ಅವರಿಗೂ ಕೂಡ ಅವಕಾಶ ಸಿಗಲಿ ಎಂಬುದಾಗಿ ಈ ಸಂದರ್ಭದಲ್ಲಿ ಚಲಪತಿ ಹಾರೈಸಿದ್ದಾರೆ.

Leave a Comment

error: Content is protected !!