Chalapathi: ಅಪ್ಪು ಬಾಡಿಗಾರ್ಡ್ ಚಲಪತಿ ಅವರು ಕೆಲಸ ಬಿಡ್ತೀನಿ ಅಂದಾಗ ಅಶ್ವಿನಿ ಅವರು ಏನ್ ಅಂದ್ರು ಗೊತ್ತಾ? ನಿಜಕ್ಕೂ ಇದು ದೊಡ್ಡಗುಣ.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದು ಅವರ ಬಳಿ ಸಾಕಷ್ಟು ವರ್ಷಗಳಿಂದ ಬಾಡಿಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಅಂತಹ ಚಲಪತಿ(Chalapathi Puneeth) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಕೆಲವೊಂದು ವಿಚಾರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಸಾಕಷ್ಟು ವರ್ಷಗಳಿಂದಲೂ ಕೂಡ ತಮ್ಮ ಒಡೆಯ ಆಗಿರುವ ಪುನೀತ್ ರಾಜಕುಮಾರ್(Puneeth Rajkumar) ಅವರ ಬಳಿ ಅವರ ಅಂಗರಕ್ಷಕನಾಗಿ ಚಲಪತಿಯವರು ಕೆಲಸ ಮಾಡುತ್ತಿದ್ದರು. ಆದರೆ ಅಪ್ಪು ಅವರ ಮರಣದ ನಂತರ ದೊಡ್ಡಮನೆಯನ್ನು ಬಿಟ್ಟು ಹೋಗುತ್ತಾರೆ ನಮ್ಮ ಚಲಪತಿ(Chalapathi) ಯವರು. ಇದಕ್ಕೆ ಇರುವಂತಹ ಕಾರಣವನ್ನು ಕೂಡ ಅವರೇ ಹೇಳಿಕೊಂಡಿದ್ದರು.

ಮನೆಗೆ ಹೋದಾಗಲೆಲ್ಲ ಅಥವಾ ಚಿತ್ರೀಕರಣದ ಸೆಟ್ಟುಗಳಿಗೆ ಹೋದಾಗಲೆಲ್ಲ ಅಪ್ಪು ಅವರದ್ದೇ ನೆನಪು ಬರುತ್ತದೆ ಇದಕ್ಕಾಗಿ ನಾನು ಕೆಲಸವನ್ನು ಬಿಟ್ಟಿದ್ದೇನೆ ನನ್ನ ಯಜಮಾನರ ನೆನಪು ನನ್ನ ಎದೆಯಲ್ಲಿ ಸದಾ ಕಾಲ ಇರಲಿ ಎಂಬುದಾಗಿ ಚಲಪತಿ ಹೇಳಿದ್ದರು. ಇದರ ಬಗ್ಗೆ ಮೊದಲ ಬಾರಿಗೆ ಅಶ್ವಿನಿ ಅವರ ಬಳಿ ಹೇಳಿದಾಗ ಅವರು ನೀಡಿದಂತಹ ಉತ್ತರ ಏನೆಂಬುದನ್ನು ತಿಳಿಯೋಣ ಬನ್ನಿ.

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಬಂದು ಕೆಲಸ ಬಿಡುವಂತಹ ವಿಚಾರವನ್ನು ಹೇಳಿದಾಗ ಅವರು ನಿಮಗೆ ಯಾವುದು ಸೂಕ್ತವೋ ಅದನ್ನೇ ಮಾಡಿ ಖಂಡಿತವಾಗಿ ನಮ್ಮ ಕುಟುಂಬದಿಂದ ನಿಮಗೆ ಸದಾ ಬೆಂಬಲ ಇರುತ್ತದೆ ಎಂಬುದಾಗಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಚಲಪತಿ ಅವರಿಗೆ ಹೇಳಿದರಂತೆ.

Leave a Comment

error: Content is protected !!