ನಿರ್ಮಲಾನಂದ ಸ್ವಾಮೀಜಿಯೊಂದಿಗೆ BGS ಉತ್ಸವದಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್ ಯಶ್

BGS Utsav in Rocking Star Yash: ಸ್ನೇಹಿತರೆ, ರಾಕಿಂಗ್ ಸ್ಟಾರ್ ಯಶ್ ಅವರು ಪ್ರಶಾಂತ್ ನೀಲ್ ಅವರ ಜೊತೆಗೆ ಕೆಜಿಎಫ್ ಭಾಗ ಎರಡನ್ನು ಮಾಡಿದ ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹತ್ತಿರ ಹತ್ತಿರ ಒಂದುವರೆ ವರ್ಷಗಳು ಕಳೆಯುತ್ತಾ ಬಂದರು ಕೂಡ ಯಾವ ಯಾವ ಡೈರೆಕ್ಟರ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಯಾವ ಭಾಷೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಯಾವುದರ ಸಣ್ಣ ಸುಳಿವನ್ನು ಯಶ್(Yash) ಅವರಾಗಲಿ ಅಥವಾ ಅವರ ಮುಂದಿನ ಚಿತ್ರತಂಡದವರಾಗಲಿ ಬಿಟ್ಟು ಕೊಟ್ಟಿಲ್ಲ.

ದಿನೇ ದಿನೇ ಕುತೂಹಲವನ್ನು ಹೆಚ್ಚಿಸುತ್ತಿರುವಂತಹ ರಾಕಿಂಗ್ ಸ್ಟಾರ್ ಯಶ್(Yash) ಅವರು ಬಾಲಗಂಗಾಧರ ಸ್ವಾಮಿ ಮಠದ (Balagangadhara Swamy Mutt) ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆ ಸಂದರ್ಭದಲ್ಲಿ ತಮ್ಮ ಚಿತ್ರದ ಅಪ್ಡೇಟ್ ಒಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಹಾಗಾದ್ರೆ ಯಶ್ ಯಾರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ? ಅಭಿಮಾನಿಗಳಿಗೆ ನೀಡಿದ ಅಪ್ಡೇಟ್ ಆದರೂ ಏನು? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಬಿಜಿಎಸ್ ಮಠದ ಗುರುಗಳಾಗಿರುವ ನಿರ್ಮಲಾನಂದ ಸ್ವಾಮೀಜಿ (Nirmalananda Swamiji) ಅವರು ಖುದ್ದಾಗಿ ಯಶ್ ಅವರನ್ನು ತಮ್ಮ ಉತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಅದರಂತೆ ತಮ್ಮ ಶೂಟಿಂಗ್ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಸ್ವಾಮೀಜಿಯ ಆಹ್ವಾನಕ್ಕೆ ಗೌರವ ಕೊಟ್ಟು ಪೂಜಾ ಕೆಲಸಗಳಲ್ಲಿ ಯಶ್(Yash) ಅವರು ಭಾಗಿಯಾದರು. ಈ ಕೆಲ ಸುಂದರ ಫೋಟೋಗಳು ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುವುದು ಒಂದೆಡೆಯಾದರೆ ತಮ್ಮ ಮುಂದಿನ ಚಿತ್ರದ ಅಪ್ಡೇಟ್ ಒಂದನ್ನು ಕಾರ್ಯಕ್ರಮದಲ್ಲಿ ನೀಡುವುದು ವಿಶೇಷವಾಗಿ ಕಂಡುಬಂದಿದೆ.

“ನಿಮ್ಮ ಕಾಯುವುದಕ್ಕೆ ನನಗೂ ಅರ್ಥವಾಗುತ್ತದೆ, ಆದರೆ ನಾನು ಸುಮ್ಮನೆ ಕೂತಿಲ್ಲ ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವನ್ನೇ ಮಾಡುತ್ತೇನೆ. ನಾನು ಯಾವತ್ತು ನನ್ನ ಸಿನಿಮಾ ಅನೌನ್ಸ್ ಮಾಡುತ್ತೇನೆ ಎಂದು ಹೇಳಿಲ್ಲ. ಹಾಗಿದ್ದರೂ ಪ್ರತಿ ಹಬ್ಬ ಬಂದಾಗ ಹುಟ್ಟುಹಬ್ಬ ಬಂದಾಗ ಯಶ್ ಸಿನಿಮಾ ಘೋಷಣೆ ಮಾಡುತ್ತಾರೆ ಎಂದು ಸುದ್ದಿ ಹಾಕುತ್ತಾರೆ.

ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ ಎಲ್ಲಾ ಊಟ ರೆಡಿಯಾದ ಮೇಲೆ ಬಡಿಸಿದರೆ ಚೆನ್ನ ಅರ್ಧಂಬರ್ಧ ಮಾಡಿ ಊಟಕ್ಕೆ ಕರೆದರೆ ಸರಿ ಹೋಗಲ್ಲ ನೀವೆಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೇನೆ ದಯವಿಟ್ಟು ಕಾಯಿರಿ” ಎಂದು ಕೇಳಿಕೊಂಡಿದ್ದಾರೆ. ಯಶ್ರವರ ಈ ಮಾತುಗಳು ಅವರ ಮುಂದಿನ ಸಿನಿಮಾ ಪೌರಾಣಿಕ ಅಥವಾ ದೇಶಪ್ರೇಮಿಯ ಕಥೆಯನ್ನು ಹೊಂದಿರಬಹುದು ಎಂಬ ಊಹೆಗೆ ದಾರಿ ಮಾಡಿಕೊಟ್ಟಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!