Darshan Thoogudeepa: ರಕ್ಷಿತ್ ಶೆಟ್ಟಿಗೆ ಎದುರಾಗಿ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನಿದು ಸುದ್ದಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಹಾಗೂ ಬಾಕ್ಸ್ ಆಫೀಸ್ ಸುಲ್ತಾನ ಎಂಬುದಾಗಿ ಕರೆಯಲಾಗುತ್ತದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾಡೋ ರೆಕಾರ್ಡ್ಗಳು ನಿಜಕ್ಕೂ ಕೂಡ ದೊಡ್ಡ ಮಟ್ಟದ್ದಾಗಿರುತ್ತವೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಸಿನಿಮಾ ಕಾಟೇರ(Kaatera) ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ ಎನ್ನುವುದಾಗಿ ಸುದ್ದಿ ಇದೆ. ಈ ಮೂಲಕ ಅವರು ರಕ್ಷಿತ್ ಶೆಟ್ಟಿ ಅವರ ಎದುರಿಗೆ ನಿಲ್ಲಲು ಹೋಗಿದ್ದಾರೆ ಎಂಬುದಾಗಿ ಗಾಂಧಿನಗರದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇದೇನಿದು ಸುದ್ದಿ ಎಂಬುದಾಗಿ ನೀವು ಕೇಳಬಹುದು ಬನ್ನಿ ನಿಮಗೆ ವಿವರಿಸುತ್ತೇವೆ.

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ(SSE 2) ಭಾಗ-2 ಸಿನಿಮಾ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದ್ದು ಈ ಮೂಲಕ ಕಾಟೇರ ಹಾಗೂ ಈ ಸಿನಿಮಾ ಎರಡು ಕೂಡ ಎದುರು ಬದುರಾಗಿ ನಿಲ್ಲಲಿವೆ ಎಂದು ಹೇಳಬಹುದಾಗಿದೆ. ಇದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತಷ್ಟೇ ಆದರೆ ಇದನ್ನೇ ನಿಜ ಎಂದು ಹೇಳಲು ಸಾಧ್ಯವಿಲ್ಲ.

ರಕ್ಷಿತ್ ಶೆಟ್ಟಿ(Rakshit Shetty) ಕೂಡ ಡಿ ಬಾಸ್ ಅವರನ್ನು ತುಂಬಾನೇ ಗೌರವಿಸ್ತಾರೆ ಇದು ಸಾಕಷ್ಟು ಸಮಯಗಳಲ್ಲಿ ಕೂಡ ಸಾಬೀತಾಗಿದೆ. ಹಬ್ಬದ ಸಮಯ ಆಗಿರುವುದರಿಂದ ಕಾಟೇರ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ನಿರ್ಮಾಪಕರು ಮಾತ್ರ ಇದೇ ರಿಲೀಸ್ ಡೇಟ್ ಗೆ ರಿಲೀಸ್ ಮಾಡಬೇಕು ಅನ್ನೋದಾಗಿ ಕಾತರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!