ಸೆಲ್ಫಿ ತೆಗೆದುಕೊಳ್ಳಲು ಬಂದ ಯುವತಿಯ ಮೊಬೈಲ್  ಕಸಿದುಕೊಂಡು ಎಲ್ಲರ ಮುಂದೆಯೇ ಅವಾಜ್ ಹಾಕಿದ ಡಿ ಬಾಸ್ ಕಾರಣವೇನು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಒಳಗೊಂದು ಹೊರಗೊಂದು ಇಟ್ಟುಕೊಂಡು ಓಡಾಡುವ ವ್ಯಕ್ತಿ ಇವರಲ್ಲ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಡೈರೆಕ್ಟಾಗಿ ಹೇಳಿಕೊಂಡು ಓಡಾಡುವ ಗಂಡೆದೆ ಇವರದ್ದು. ಡಿ ಬಾಸ್ ಅವರ ಈ ಸ್ಟ್ರೇಟ್ ಫಾರ್ವರ್ಡ್ ವ್ಯಕ್ತಿತ್ವವೇ ಇವರ ಅಭಿಮಾನಿಗಳಿಗೆ ಇಷ್ಟವಾಗುತ್ತೆ . ಈ ಒಂದು ವ್ಯಕ್ತಿತ್ವದಿಂದಲೇ ದರ್ಶನ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ತಪ್ಪಾಗಲಾರದು. ಆಗಾಗ ದರ್ಶನ್ ಅವರಂತೂ ಕಾಂಟ್ರವರ್ಸಿಯಲ್ಲಿ ಇದ್ದೇ ಇರುತ್ತಾರೆ ಆದರೂ ಕೂಡ ಇವರ ಅಭಿಮಾನಿಗಳ ಸಂಖ್ಯೆ ಸ್ವಲ್ಪವೂ ಕಡಿಮೆಯಾಗಿಲ್ಲ.

ಇತ್ತೀಚೆಗೆ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಗೈರಾಗಿದ್ದರು. ಇದು ಹಲವಾರು ಜನರಿಗೆ ಬೇಸರ ತಂದು ದರ್ಶನ್ ಅವರ ಮೇಲೆ ಕೋಪವನ್ನು ಹೊರಹಾಕಿದ್ದರು. ಪುನೀತ ಪರ್ವ ಕಾರ್ಯಕ್ರಮಕ್ಕೆ ಹೋಗದೆ ಇದ್ದ ದರ್ಶನ್ ಅವರು ಶಾಸಕ ಜಮೀರ್ ಅಹ್ಮದ್ ಮಗನ ಸಿನಿಮಾವನ್ನು ಲಾಂಚ್ ಮಾಡುವ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಿದ್ದರು. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಸ್ಟೇಜ್ ಮುಂದೆ ಕುಳಿತುಕೊಂಡು ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದ ಸಂದರ್ಭದಲ್ಲಿ ದರ್ಶನ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಒಂದು ಯುವತಿ ಬಂದಳು.

ದರ್ಶನ್ ಅವರು ಸ್ಟೇಜ್ ಮುಂದೆ ವಿನೋದ್ ಪ್ರಭಾಕರ್ ಮತ್ತು ಜಮೀರ್ ಅಹಮದ್ ಮಗನ ಜತೆ ಮಾತನಾಡಿಕೊಂಡು ಕುಳಿತಿದ್ದರುಮ ಈ ಸಂದರ್ಭದಲ್ಲಿ ಯುವತಿ ಬಂದು ನನಗೆ ಸೆಲ್ಫಿ ಕೊಡಿಯೆಂದು ಮೊಬೈಲನ್ನು ಹಿಡಿದು ಸೆಲ್ಫೀ ತೆಗೆದುಕೊಳ್ಳಲು ಹೋದೆ ಆಗ ದರ್ಶನ್ ಅವರಿಗೆ ಕೋಪ ಬಂತು.. ಅದೇ ಸ್ಥಳದಲ್ಲಿಯೇ ಬೆರಳುಮಾಡಿ ತೋರಿಸಿ ಯುವತಿಗೆ ಅವಾಜ್ ಹಾಕಿ ದರ್ಶನ್ ಅವರು ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಹೇಳಿದರು ಆದರೂ ಕೂಡ ಯುವತಿ ಕೇಳದೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದಳು ಆಗ ದರ್ಶನ್ ಅವರು ಯುವತಿಯ ಮೊಬೈಲ್ ಕಸಿದುಕೊಂಡರು. ಆಗಿ ಇವತ್ತಿಗೆ ಸರಿಯಾಗಿ ಬುದ್ಧಿ ಹೇಳಿ ಪಾಠ ಹೇಳಿ ಕಳಿಸಿದರು ಅಷ್ಟಕ್ಕೂ ದರ್ಶನ್ ಅವರು ಆ ಯುವತಿಗೆ ಸೆಲ್ಫಿ ಕೊಡದೇ ಇರುವುದಕ್ಕೆ ಕಾರಣ ಏನೆಂದರೆ…

ಆ ಕ್ಷಣದಲ್ಲಿ ದರ್ಶನ್ ಅವರು ಆ ಯುವತಿಗೆ ಫೋಟೋಗಳಿದ್ದರೆ ಅದರ ಹಿಂದೆ ನೂರಾರು ಮಂದಿ ಸೆಲ್ಫಿ ಕುಡಿಯೆಂದು ಓಡಿ ಬರುತ್ತಿದ್ದರು ಆಗ ಕಾರ್ಯಕ್ರಮಕ್ಕೆ ಇದು  ಎಂಬ ಕಾರಣಕ್ಕೆ ದರ್ಶನ್ ಅವರು ಸೆಲ್ಫಿ ಕೊಡಲು ಮುಂದಾಗಲಿಲ್ಲ ಅಷ್ಟೇ ಅಲ್ಲದೆ.. ಹುಡುಗಿ ಸಿಲುಕಿ ಕೇಳಲು ಬಂದ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರ ರಾಜಕುಮಾರ ಚಿತ್ರದ ಹಾಡು ಪ್ರಸಾರವಾಗುತ್ತಿತ್ತು ದರ್ಶನ್ ಅವರು ಸೆಲ್ಫಿ ಕೊಟ್ಟು ಸೋಕಿ ಮಾಡಿದರೆ ಅಪ್ಪು ಅವರಿಗೆ ಅವಮಾನ ಆಗಬಹುದು ಎಂಬ ಕಾರಣದಿಂದ ದರ್ಶನ್ ಅವರು ಗಮನದಲ್ಲಿಟ್ಟುಕೊಂಡು ಸೆಲ್ಫಿಯನ್ನು ಕೊಟ್ಟಿಲ್ಲ. ದರ್ಶನ್ ಅವರ ಈ ಒಂದು ಉದ್ದೇಶ ಒಳ್ಳೆಯದೇ ಆಗಿದ್ದರೂ ಇದನ್ನು ಕೆಟ್ಟದ್ದಾಗಿ ಹಲವರು ಪ್ರದರ್ಶಿಸುತ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್ ಅವರು ಏನೇ ಮಾಡಿದರೂ ಅದು ಇತ್ತೀಚೆಗೆ ಕಾಂಟ್ರವರ್ಸಿ ಆಗುತ್ತಿರುವುದು ನಿಜಕ್ಕೂ ಅಭಿಮಾನಿಗಳಿಗೆ ಬೇಸರದ ವಿಷಯ.

Leave a Comment

error: Content is protected !!