ಅಪ್ಪು ಜೊತೆ ನಟನೆ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡೆ ಎಂದ ದುನಿಯ ವಿಜಯ್ ಯಾವ ಪಾತ್ರದಲ್ಲಿ ಗೊತ್ತಾ?

Duniya Vijay says she missed the chance to act with: Appu ಕನ್ನಡ ಚಿತ್ರರಂಗದಲ್ಲಿ ಆರಂಭದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡ ದುನಿಯಾ ವಿಜಯ್ ರವರು 2006ರಲ್ಲಿ ಬಿಡುಗಡೆಯಾದ ದುನಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನ ಪಟ್ಟವನ್ನು ಪಡೆದುಕೊಳ್ಳುತ್ತಾರೆ. ದುನಿಯಾ ಸಿನಿಮಾದ ಯಶಸ್ಸಿನ(Success) ನಂತರ ಮತ್ತೆ ಚಿತ್ರರಂಗದಲ್ಲಿ ದುನಿಯಾ ವಿಜಯ್ ಅವರು ಹಿಂತಿರುಗಿ ನೋಡಲೇ ಇಲ್ಲ. ಅದಾದ ನಂತರ ಸಾಕಷ್ಟು ಸೋಲುಗಳಿಂದ ಕಂಗೆಟ್ಟಿದ್ದ ದುನಿಯಾ ವಿಜಯ್ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ರಿಲೀಫ್(Relief) ನೀಡಿದ್ದು ಸಲಗ ಸಿನಿಮಾ ಎಂದು ಹೇಳಬಹುದಾಗಿದೆ.

ಸಲಗ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೇವಲ ಒಬ್ಬ ನಾಯಕನಟನಾಗಿ ಪುನರ್ಜನ್ಮವನ್ನು ಪಡೆದಿದ್ದು ಮಾತ್ರವಲ್ಲದೆ ಒಬ್ಬ ನಿರ್ದೇಶಕನಾಗಿ(Director) ಅದರಲ್ಲಿಯೂ ವಿಶೇಷವಾಗಿ ಭರವಸೆಯ ನಿರ್ದೇಶಕನಾಗಿ ಜನ್ಮ ಪಡೆಯುತ್ತಾರೆ. ಸಲಗ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿ ಘರ್ಜಿಸಿದೆ (Roar) ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂಬುದಾಗಿ ಭಾವಿಸುತ್ತೇವೆ. ಇನ್ನು ಸದ್ಯಕ್ಕೆ ದುನಿಯಾ ವಿಜಯ್ ಅವರು ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ಹೌದು ಗೆಳೆಯರೇ ತೆಲುಗು ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಬಾಲಯ್ಯ ಅವರ ನಟನೆಯ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ದುನಿಯಾ ವಿಜಯ್ ಅವರು ಕಾಣಿಸಿಕೊಳ್ಳುವ ಮೂಲಕ ತೆಲುಗು ಚಿತ್ರರಂಗಕ್ಕೆ ಕೂಡ ಪಾದರ್ಪಣೆ(Debut) ಮಾಡಿದ್ದಾರೆ. ಇನ್ನು ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಯಾವುದಾದರೂ ಸ್ಟಾರ್ ನಟನ ಜೊತೆಗೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೀರ ಎಂಬುದಾಗಿ ಸಂದರ್ಶಕರು ಕೇಳಿದ ಪ್ರಶ್ನೆಗೆ ದುನಿಯಾ ವಿಜಯ್ ಅವರು ನೀಡಿದ ಉತ್ತರ ವಿಶೇಷವಾಗಿತ್ತು.

ಇದನೊಮ್ಮೆ ಓದಿ..ರೆಕಾರ್ಡ್ಗಳನ್ನು ಕ್ರಿಯೇಟ್ ಮಾಡಿದ್ದರೂ ಕೂಡ ಕ್ರಾಂತಿ ಟ್ರೈಲರ್ ಗೆ ವ್ಯಕ್ತವಾಗುತ್ತಿದೆ ವ್ಯಾಪಕ ಟೀಕೆ. ಸಿನಿಮಾ ಕಾಪೀನಾ?

ನಾನು ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಅವರ ಜೊತೆಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ತುಂಬಾ ಇಷ್ಟಪಡುತ್ತೇನೆ. ಅವರ ಜೊತೆ ಸಿನಿಮಾ ಮಾಡಬೇಕು ಎಂಬುದಾಗಿ ನಾನು ಹಾಗೂ ಅವರು ಇಬ್ಬರೂ ಕೂಡ ಕಾಯುತ್ತಿದ್ದೇವೆ ಎಂಬುದಾಗಿ ಹೇಳುತ್ತಾ ಅಪ್ಪು ಅವರ ಜೊತೆಗೂ ಕೂಡ ಖಳನಾಯಕನ ಪಾತ್ರದಲ್ಲಿ ನಟಿಸುವ ಅವಕಾಶ(Opportunity) ನನ್ನನ್ನು ಹುಡುಕಿಕೊಂಡು ಬಂದಿತ್ತು ಆದರೆ ಕಾರಣಾಂತರಗಳಿಂದ ಅದು ಸಂಪೂರ್ಣವಾಗಲಿಲ್ಲ ಎಂಬುದಾಗಿ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!