Darshan Thoogudeepa: ದರ್ಶನ್ ನನ್ನ ದೊಡ್ಡಮಗ ಯಾರು ತೊಂದರೆ ಕೊಡಬೇಡಿ, ಸೃಜನ್ ತಾಯಿ ಗಿರಿಜಮ್ಮ ಹೀಗೇಳಿದ್ಯಾಕೆ ಗೊತ್ತಾ?

Darshan Thoogudeepa ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಕ್ಸ್ ಆಫೀಸ್ ನಲ್ಲಿ ಶತಕವನ್ನು ಬಾರಿಸಿ ಮುನ್ನುಗುತ್ತಿದೆ. ನೆಗೆಟಿವ್ ಪ್ರಚಾರದ ನಡುವೆ ಕೂಡ ಕ್ರಾಂತಿ(Kranti) ಗೆದ್ದ ರೀತಿ ನಿಜಕ್ಕೂ ಕೂಡ ದರ್ಶನ್(Darshan) ಅಭಿಮಾನಿಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾ ರಸಿಕರಿಗೆ ಕೂಡ ಸಮಾಧಾನವನ್ನು ತಂದಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 2023ಅನ್ನು ಕನ್ನಡ ಚಿತ್ರರಂಗ ಅದ್ದೂರಿಯಾಗಿಯೇ ಪ್ರಾರಂಭಿಸಿದೆ ಎಂದು ಹೇಳಬಹುದಾಗಿದೆ.

ಇನ್ನು ಕ್ರಾಂತಿ(Kranti) ಸಿನಿಮಾ ತಂಡ ಖಾಸಗಿ ಹೋಟೆಲ್ ನಲ್ಲಿ ಇಡೀ ಚಿತ್ರತಂಡ ಸೇರಿ ಸಿನಿಮಾದ ಗೆಲುವಿನ ಸಂಭ್ರಮಾಚರಣೆಯನ್ನು ಕೂಡ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದಲ್ಲಿ ನಟಿಸಿರುವಂತಹ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಹಾಜರಿದ್ದರು. ಕ್ರಾಂತಿ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಎದುರಿಸಿದಂತಹ ನೆಗೆಟಿವ್ ಪ್ರಚಾರಗಳನ್ನು ಕೂಡ ಹಾಗೂ ಅಭಿಮಾನಿಗಳು ತೋರಿದಂತಹ ಸಪೋರ್ಟ್ ಅನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಲಾಗಿದೆ.

Dboss With girija lokesh

ಇನ್ನು ಕ್ರಾಂತಿ ಸಿನಿಮಾದ ಸಾಂಗ್ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಅವರು ಎದುರಿಸಿದಂತಹ ಅವಮಾನಗಳು ಕೂಡ ನಿಮಗೆಲ್ಲರಿಗೂ ನೆನಪಿರಬಹುದು. ಕ್ರಾಂತಿಯ ಸಕ್ಸಸ್ ಮೀಟ್ ನಲ್ಲಿ ಸೃಜನ್ ಲೋಕೇಶ್ ಅವರ ತಾಯಿ ಆಗಿರುವ ಗಿರಿಜಾ ಲೋಕೇಶ್ ಅವರು ದರ್ಶನ್ ಅವರನ್ನು ತಮ್ಮ ದೊಡ್ಡ ಮಗ ಎಂಬುದಾಗಿ ಪ್ರೀತಿಯಿಂದ ಕರೆಯುತ್ತಾರೆ. ಮುಂದುವರೆದು ಅವರು ಮಾತನಾಡಿರುವ ಮಾತುಗಳು ಕೂಡ ಈಗಾಗಲೇ ಡಿ ಬಾಸ್ ಅಭಿಮಾನಿಗಳ(Dboss Fans) ಪಾಲಿಗೆ ಖುಷಿಯನ್ನು ನೀಡಿದೆ.

ಹೌದು ಇತ್ತೀಚಿಗೆ ನಡೆದಿರುವಂತಹ ದರ್ಶನ್ ಅವರ ಕುರಿತಾದ ಅಹಿತಕರ ಘಟನೆಗಳನ್ನು ನೆನಪಿಸಿಕೊಂಡು ಗಿರಿಜಾ ಲೋಕೇಶ್ ಅವರು ನನ್ನ ದೊಡ್ಡ ಮಗನಿಗೆ ತೊಂದರೆಯನ್ನು ನೀಡಬೇಡಿ ಎಂಬುದಾಗಿ ಹೇಳಿದ್ದಾರೆ. ಮೊದಲಿನಿಂದಲೂ ಕೂಡ ತೂಗುದೀಪ ಹಾಗೂ ಲೋಕೇಶ್ ಕುಟುಂಬ ಉತ್ತಮವಾದ ಸಂಬಂಧವನ್ನು ಹೊಂದಿದೆ. ಇದು ಈಗ ದರ್ಶನ್ ಹಾಗೂ ಸೃಜನ್ ಲೋಕೇಶ್(Srujan Lokesh) ಅವರ ಜೊತೆಗೆ ಉತ್ತಮವಾಗಿ ಮುಂದುವರಿದುಕೊಂಡು ಬಂದಿದೆ ಎಂದು ಹೇಳಬಹುದಾಗಿದೆ. ಗಿರಿಜಾ ಲೋಕೇಶ್(Girija Lokesh) ಅವರ ಈ ಮಾತಿನ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!