Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ಅವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಹಾಗೂ ನಿರ್ದೇಶಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ಸಿನಿಮಾ ವ್ಯಕ್ತಿಯಾಗಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ತಮ್ಮ ಆದಾಯದ 45 ಪ್ರತಿಶತಕ್ಕೂ ಅಧಿಕ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ವಿನಯೋಗಿಸುವಂತಹ ಹೃದಯ ಶ್ರೀಮಂತ. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಕೂಡ ಅವರು ಮೊದಲ ಸಾಲಿನಲ್ಲಿ ಕಂಡುಬರುತ್ತಾರೆ.
ಇದ್ದಿದ್ದನ್ನು ನೇರವಾಗಿ ಹೇಳುವಂತಹ ಅವರ ವ್ಯಕ್ತಿತ್ವ ಕೂಡ ಎಲ್ಲರಿಗೂ ಇಷ್ಟವಾದದ್ದು. ತಂದೆ ಶ್ರೀಮಂತ ಕೋಟ್ಯಾಧೀಶ ಆಗಿದ್ದರೂ ಕೂಡ ಸಿನಿಮಾದಲ್ಲಿ ಬೆಳೆಯಲು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮವನ್ನು ಉಪಯೋಗಿಸಿಕೊಂಡು ಕಿಚ್ಚ(Kiccha) ಇಲ್ಲಿಯವರೆಗೂ ಬೆಳೆದು ನಿಂತಿದ್ದು. ಇಂದು ಈ ಆರಡಿ ಕಟೌಟ್ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಬೇಕಾಗಿರುವಂತಹ ಅತ್ಯಮೂಲ್ಯ ಪ್ರತಿಭೆ. ಇನ್ನು ಇತ್ತೀಚಿಗಷ್ಟೇ ಅಂದರೆ ನಿನ್ನೆಯಷ್ಟೇ ದಾವಣಗೆರೆಯಲ್ಲಿ ನಡೆದಿರುವಂತಹ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ವಾರ್ಷಿಕೋತ್ಸವಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಸಿದ್ದರಾಮಯ್ಯ(Siddaramayya) ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಕಿಚ್ಚ ಸುದೀಪ್ ಅವರನ್ನು ನೋಡಲೆಂದೆ ಸಾವಿರಾರು ಲಕ್ಷಾಂತರ ಅಭಿಮಾನಿಗಳು ಅಲ್ಲಿ ನೆರೆದಿದ್ದರು.
ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರು ಬರುವುದಿಲ್ಲ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿದ್ದ ಅಭಿಮಾನಿಗಳು ಆಕ್ರೋಶದಿಂದ ಕುರ್ಚಿಯನ್ನು ಪುಡಿಗಟ್ಟಲು ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕೂಡ ಆಶ್ಚರ್ಯ ಚಕಿತರಾಗಿ ಕಿಚ್ಚ ಸುದೀಪ್ ಇನ್ನೂ ಬಂದಿಲ್ಲ ಎಲ್ಲರೂ ಶಾಂತ ರೀತಿಯಿಂದ ನಮ್ಮ ಮಾತನ್ನು ಕೇಳಿ ಎಂಬುದಾಗಿ ವಿನಂತಿಸಿಕೊಳ್ಳುತ್ತಾರೆ. ನಂತರ ಸ್ವಾಮೀಜಿಗಳು ಕೂಡ ಇದೇ ಮಾತನ್ನು ಹೇಳಿದ ನಂತರ ಎಲ್ಲರೂ ಶಾಂತ ರೀತಿ ಇಂದ ವರ್ತಿಸುತ್ತಾರೆ ಹಾಗೂ ಅದರಲ್ಲಿ ಹೆಚ್ಚಿನವರು ತಮ್ಮ ಮನೆಗೆ ನಿರಾಶೆಯಿಂದ ವಾಪಾಸ್ ತೆರಳುತ್ತಾರೆ.