ಮಗನನ್ನು ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ಗೆ ಮೋಜು ಮಾಡಲು ಹೋಗಿದ್ದಾರೆ ಎಂದವರಿಗೆ ಮೇಘನಾ ರಾಜ್ ತಂದೆ ನೀಡಿದ ಖಡಕ್ ರಿಪ್ಲೈ ಏನ್ ಗೊತ್ತಾ?

ಚಿರು ಸರ್ಜಾ ಅವರನ್ನು ಕಳೆದುಕೊಂಡು ಒಬ್ಬಂಟಿಯಾದ ಮೇಲಿನಿಂದ ಮೇಘನಾ ರಾಜ್ ಅವರಿಗೆ ಅವರ ಏಕೈಕ ಮಗನಾಗಿರುವ ರಾಯನ್ ರಾಜ್ ಸರ್ಜಾನೇ ಸರ್ವಸ್ವವು ಆಗಿದ್ದಾರೆ ಎಂದರೆ ತಪ್ಪಾಗಲಾರದು. ತಮ್ಮ ಮಗನಿಗಾಗಿಯೇ ಮತ್ತೊಮ್ಮೆ ಚಿತ್ರರಂಗದಲ್ಲಿ ಕಾಲಿಟ್ಟು ನಟಿಯಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಹಾಗೂ ಜಾಹೀರಾತು ಹಿತರಿಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ರಾತ್ರಿ ಹಗಲು ಎನ್ನದೆ ಮೇಘನಾ ರಾಜ್ ಅವರು ದುಡಿಯುತ್ತಿದ್ದಾರೆ.

ತಮ್ಮ ಮಗನ ಉತ್ತಮ ಭವಿಷ್ಯಕ್ಕಾಗಿ ಈಗಲೇ ಕಷ್ಟಪಟ್ಟು ದುಡಿಯುತ್ತಿರುವ ಮೇಘನಾ ರಾಜ್ ನಿಜಕ್ಕೂ ಕೂಡ ಒಬ್ಬ ಮಾದರಿ ತಾಯಿಯಾಗಿ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇಷ್ಟೊಂದು ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ತಮ್ಮ ಗೆಳತಿಯರ ಜೊತೆಗೆ ವಿದೇಶ ಆಗಿರುವ ಥೈಲ್ಯಾಂಡ್ ನಲ್ಲಿ ತಮ್ಮ ರಜಾ ದಿನಗಳನ್ನು ಕಳೆಯುತ್ತಿದ್ದು ತಮ್ಮ ಮಗನನ್ನು ತಂದೆ-ತಾಯಿ ಆಗಿರುವ ಪ್ರಮೀಳಾ ಜೋಶಾಯಿ ಹಾಗೂ ಸುಂದರ್ ರಾಜ್ ಅವರ ಬಳಿ ಬಿಟ್ಟು ಹೋಗಿದ್ದಾರೆ.

ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವಿದೇಶದಲ್ಲಿ ಮೋಜು ಮಾಡಲು ತಮ್ಮ ಮಗುವನ್ನು ತಂದೆ-ತಾಯಿಯ ಬಳಿ ಬಿಟ್ಟು ನಟಿ ಮೇಘನರಾಜ ಅಅವರು ಥೈಲ್ಯಾಂಡ್ ಗೆ ಹೋಗಿದ್ದಾರೆ ಎಂಬುದಾಗಿ ವ್ಯಂಗ್ಯವಾಗಿ ಟೀಕಿಸುವಂತೆ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಇದಕ್ಕೆ ಚೆಲುವಿನ ಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತವಾಗಿ ಬಾಲ ನಟರಾಗಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ನಟರನ್ನು ಕರೆಸಿ ಸನ್ಮಾನ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ಸುಂದರ್ ರಾಜ್ ಅವರು ತೋರ್ಪಡಿಸಿದ್ದಾರೆ.

ಕೆಲವು ಸಮಯಗಳ ಹಿಂದಷ್ಟೇ ನಮ್ಮ ಕುಟುಂಬ ದೊಡ್ಡಮಟ್ಟದ ಒಂದು ದುಃಖವನ್ನು ಅನುಭವಿಸಿದೆ. ಅದರಿಂದ ಹೊರಬರಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ರೀತಿ ಸುದ್ದಿಗಳನ್ನು ಬಿತ್ತರಿಸುತ್ತಿರುವುದು ನಿಜಕ್ಕೂ ಸರಿಯಲ್ಲ. ಇದೇ ವಿಚಾರವನ್ನು ನಾನು ವಾಣಿಜ್ಯ ಮಂಡಳಿಗೆ ತೆಗೆದುಕೊಂಡು ಹೋದಾಗ ನಿಮ್ಮ ಪರವಾಗಿ ನಾವೆಲ್ಲರೂ ಇದ್ದೇವೆ ಎಂಬುದಾಗಿ ಎಲ್ಲರೂ ಕೂಡ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಎಂದು ಸುಂದರ್ ರಾಜ್ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Leave a Comment

error: Content is protected !!