Darshan Thoogudeepa: ಡಿಬಾಸ್ ಬರ್ತಡೇ ದಿನಾನೇ ಒಳ್ಳೆ ಹುಡ್ಗ ಪ್ರಥಮ್ ಹೇಳಿದ್ದು ಎಂಥಾ ಮಾತು ಗೊತ್ತಾ?

Darshan Thoogudeepa ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನಾಚರಣೆ. ಫೆಬ್ರವರಿ 16 ಬಂತೆಂದರೆ ಸಾಕು ರಾಜ್ಯದ ಮೂಲೆ ಮೂಲೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿರುವ ಡಿ ಬಾಸ್ ಅವರ ಮನೆ ಮುಂದೆ ಬಂದು ಲಕ್ಷ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ನಿಜಕ್ಕೂ ಇಂತಹ ದೊಡ್ಡ ಮಟ್ಟದ ಅಭಿಮಾನಿಗಳನ್ನು ಪಡೆದಿರುವಂತಹ ಮತ್ತೊಬ್ಬ ಕನ್ನಡದ ನಟ ಸದ್ಯಕ್ಕಂತೂ ನಿಮಗೆ ಕಾಣ ಸಿಗುವುದಿಲ್ಲ.

ಅದರಲ್ಲೂ ಮಾಸ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದರ್ಶನ್(Darshan) ಅವರನ್ನು ನಂಬರ್ ಒನ್ ನಟ ಎಂಬುದಾಗಿ ಹೇಳಬಹುದಾಗಿದೆ. ಹೀಗಿದ್ದರೂ ಕೂಡ ದರ್ಶನ್ ಅವರ ಸುತ್ತ ವಿವಾದಾತ್ಮಕ ವಿಚಾರಗಳು ಆಗಾಗ ಓಡಾಡುತ್ತಲೇ ಇರುತ್ತವೆ. ನಕಾರಾತ್ಮಕವೋ ಸಕಾರಾತ್ಮಕವೋ ಒಟ್ಟಾರೆ ಡಿ ಬಾಸ್ ಸುದ್ದಿಯಲ್ಲಂತೂ ಇರುತ್ತಾರೆ ಎಂಬುದು ಅವರೇ ಹೇಳಿರುವ ಮಾತಾಗಿದೆ. ಇನ್ನು ಅವರ ಬರ್ತಡೆಗೆ ನಟ ಪ್ರಥಮ್ ಈಗ ಪರೋಕ್ಷವಾಗಿಯೇ ಕಾಲು ಎಳೆಯುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ದೊಡ್ಡ ಮಾಸ್ ಹೀರೋ ನೀವು. ಎಷ್ಟು ಫ್ಯಾನ್ಸ್ ಇದಾರೆ ನಿಮಗೆ ಎಲ್ಲಾ ಭಗವಂತ ನಿಮಗೆ ನೀಡಿದ್ದಾನೆ ಕೂಲ್ ಆಗಿರಿ ಆರಾಮವಾಗಿರಿ. ನಿಮ್ಮ ಹಾಗೂ ಮಾಧ್ಯಮಗಳ ನಡುವಿನ ಮುನಿಸು ಆದಷ್ಟು ಬೇಗ ಪರಿಹಾರವಾಗಲಿ ಎಂಬುದಾಗಿ ಆ ದೇವರಲ್ಲಿ ಕೇಳುತ್ತೇನೆ ಎಂಬುದಾಗಿ ದರ್ಶನ್ ಅವರಿಗೆ ಜನ್ಮ ದಿನಾಚರಣೆಯ ಶುಭಾಶಯಗಳನ್ನು ಒಳ್ಳೆ ಹುಡುಗ ಪ್ರಥಮ್(Olle Hudga Pratham) ತಿಳಿಸಿದ್ದಾರೆ.

ಸಾಕಷ್ಟು ದಿನಗಳಿಂದಲೂ ಕೂಡ ಪ್ರಥಮ ಅವರು ದರ್ಶನ್ ಅವರ ವಿರುದ್ಧ ಅಥವಾ ಪರವಾಗಿ ಪರೋಕ್ಷವಾಗಿಯೇ ಕಾಲು ಎಳೆಯುವಂತಹ ಮಾತುಗಳನ್ನು ಆಡಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಈಗ ಡಿ ಬಾಸ್ ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸುವ ವಿಚಾರದಲ್ಲಿ ಕೂಡ ಪರೋಕ್ಷವಾಗಿಯೇ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂಬುದಾಗಿ ಒಳ್ಳೆ ಹುಡುಗ ಪ್ರಥಮ್ ಡಿ ಬಾಸ್(Dboss) ಅವರಿಗೆ ಹೇಳಿದ್ದಾರೆ.

Leave a Comment

error: Content is protected !!