Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಹಾಗೂ ಮೇರು ವ್ಯಕ್ತಿತ್ವದಲ್ಲಿ ಎಲ್ಲರಿಗಿಂತ ಒಂದು ಕೈ ಮುಂದೆ ಇರುವಂತಹ ವ್ಯಕ್ತಿ ಅಂದರೆ ತಪ್ಪಾಗಲಾರದು. ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಕನ್ನಡಿಗರಾದ ನಮ್ಮ ದುರದೃಷ್ಟ ಎಂದರೆ ತಪ್ಪಾಗಲಾರದು. ಅಪ್ಪು(Appu) ಕನ್ನಡಿಗರ ಆಸ್ತಿ ಎನ್ನುವಂತಹ ಮಹತ್ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿ ಹೋಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ನಟಿಸಿರುವಂತಹ ಕೊನೆಯ ಕಮರ್ಷಿಯಲ್ ಸಿನಿಮಾ ಎಂದರೆ ಅದು ಜೇಮ್ಸ್ ಸಿನಿಮಾ. ಈ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಪುನೀತ್ ರಾಜಕುಮಾರ್ ಅವರು ಒಂದು ಕೆಲಸವನ್ನು ಮಾಡಬೇಕು ಎಂಬುದಾಗಿ ಭಾವಿಸಿದ್ದರು. ಆದರೆ ವಿಧಿಯ ಕೈವಾಡ ಅಪ್ಪು ಅವರಿಗೆ ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇಂದಿಗೂ ಕೂಡ ಈ ವಿಚಾರದ ಬಗ್ಗೆ ಅವರ ಆಪ್ತರಲ್ಲಿ ಸಾಕಷ್ಟು ಬೇಸರವಿದೆ.
ಅಷ್ಟಕ್ಕೂ ಆ ವಿಚಾರ ಯಾವುದು ಇರಬಹುದು ಎಂಬುದಾಗಿ ನಿಮ್ಮಲ್ಲಿ ಗೊಂದಲ ಇರಬಹುದು. ಬನ್ನಿ ಈ ವಿಚಾರದ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳಲಿದ್ದೇವೆ. ಅಣ್ಣಾವ್ರ ಕಾಲದಿಂದಲೂ ಕೂಡ ದೊಡ್ಮನೆ ಅವರು ಅಭಿಮಾನಿಗಳನ್ನು ದೇವರು ಎಂಬುದಾಗಿ ಪೂಜಿಸಿದವರು. ಅಣ್ಣಾವ್ರ ಅದೇ ಗುಣ ಅಪ್ಪು ಅವರಲ್ಲಿ ಕೂಡ ರಕ್ತಗತವಾಗಿಯೇ ಬಂದಿದೆ. ಜೇಮ್ಸ್ ಸಿನಿಮಾ ಮುಗಿದ ನಂತರ ಅಭಿಮಾನಿಗಳಿಗಾಗಿ ಅದೊಂದು ಕೆಲಸವನ್ನು ಮಾಡಬೇಕು ಎಂಬುದಾಗಿ ಸಿನಿಮಾದ ನಿರ್ಮಾಪಕ ಆಗಿರುವ ಕಿಶೋರ್ ಪತಿಕೊಂಡ ಅವರಿಗೆ ಅಪ್ಪು ಹೇಳಿದ್ರಂತೆ.
ಹೌದು ಎದೆಯ ಮೇಲೆ ಅಭಿಮಾನಿಗಳ ದೇವರು ಎನ್ನುವ ಹಚ್ಚೆಯನ್ನು ಹಾಕಿಸಿಕೊಂಡು ಅಭಿಮಾನಿಗಳ ಪ್ರೀತಿಗೆ ನನ್ನ ಹೃದಯಪೂರ್ವಕ ನಮನವನ್ನು ಸಲ್ಲಿಸಬೇಕು ಎಂಬುದಾಗಿ ಪುನೀತ್ ರಾಜಕುಮಾರ್(Puneeth Rajkumar) ಹೇಳಿದ್ರಂತೆ. ಆದರೆ ಅಪ್ಪು ಅಂದುಕೊಂಡಿದ್ದ ಆ ಕೊನೆ ಆಸೆಯನ್ನು ಪೂರೈಸಲು ದೇವರು ಬಿಡಲೇ ಇಲ್ಲ. ಈ ವಿಚಾರವನ್ನು ಕೇಳಿದಾಗಲೆಲ್ಲ ಅಭಿಮಾನಿಗಳ ಕಣ್ಣಲ್ಲಿ ನೀರು ಹರಿಯುವುದಂತೂ ಖಚಿತ.