ಕೆಜಿಎಫ್- ಸಲಾರ್ನಂತಹ ಪವರ್ ಫುಲ್ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ದಂಪತಿಗಳ ಸುಂದರ ಫೋಟೋಗಳು

ಕನ್ನಡ ಸಿನಿಮಾರಂಗದ ಪವರ್ ಫುಲ್ ಸಿನಿಮಾಗಳು ಎಂದೆನಿಸಿಕೊಂಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಮತ್ತು ಕೆಜಿಎಫ್ ಸರಣಿಗಳ ಸಂಗೀತ ನಿರ್ದೇಶಕರಾಗಿ ಪವರ್ಫುಲ್ ಸಿನಿಮಾಗಳಿಗೆ ಪವರ್ಫುಲ್ ಸಂಗೀತ ನೀಡುವ ಮೂಲಕ ಅದರ ಹೈಪನ್ನು ಇನ್ನಷ್ಟು ಹೆಚ್ಚಿಸಿರುವಂತಹ ರವಿ ಬಸ್ರೂರು(Ravi Basrur) ಯಾರಿಗೆ ತಾನೇ ಪರೀಕ್ಷೆವಿರದಿರಲು ಸಾಧ್ಯವಿಲ್ಲ ಹೇಳಿ?

ಸಿನಿಮಾದ ದೃಶ್ಯಕ್ಕೆ ತಕ್ಕನಾಗಿ ಅದ್ಭುತ ಸಂಗೀತ ಸಂಯೋಜನೆ ನೀಡುವ ಮೂಲಕ ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ಹೆಸರುವಾಸಿಯಾಗಿರುವಂತಹ ರವಿ ಬಸ್ರೂರು(Ravi Basrur) ತಮ್ಮ ಪತ್ನಿ ಜೊತೆಗೆ ತೆಗೆಸಿಕೊಂಡಿರುವಂತಹ ಕೆಲ ಸುಂದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ಜನವರಿ ಒಂದನೇ ತಾರೀಖಿನಂದು ರವಿ ಬಸ್ರೂರ್ 40ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತಿಯ ಫೋಟೋ ಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದರು. ಸದ್ಯ ಈ ಸುಂದರ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿದೆ. 1984 ಜನವರಿ 1 ನೇ ತಾರೀಖಿನಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಜನಿಸಿದಂತಹ ರವಿ ಅವರ ಕುಟುಂಬಸ್ಥರೆಲ್ಲರೂ ಸಂಗೀತ

ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಕಾರಣ ರವಿ ಅವರಿಗೂ ಕೂಡ ಚಿಕ್ಕಂದಿನಿಂದಲೂ ಈ ಕ್ಷೇತ್ರದಲ್ಲಿಯೇ ಏನನ್ನಾದರೂ ಸಾಧಿಸಬೇಕೆಂಬ ಆಸೆ ಇರುತ್ತದೆ. ಅವರ ತಾಯ್ನಾಡು ಯಕ್ಷಗಾನ ಮತ್ತು ದೇವಸ್ಥಾನದ ಭಜನೆಗಳಿಗೆ ಹೆಸರುವಾಸಿಯಾಗಿದ್ದು ಹಾಗೂ ಅವರ ಚಿಕ್ಕಪ್ಪ ಆರ್ಕೆಸ್ಟ್ರಾದ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲ ಅವರ ತಂದೆ ತಾಯಿ ಕೂಡ ಹೆಸರಾಂತ ಶಾಸ್ತ್ರಿಯ ಸಂಗೀತದ ಮೂಲಕ ಊರಿನಲ್ಲಿ ಪ್ರಸಿದ್ಧಿ ಪಡೆದಿದ್ದರು.

ಹೀಗೆ ಸಂಗೀತದ ನಂಟು ರ.ಕ್ತದಿಂದಲೇ ರವಿ ಬಸ್ರೂರವರನ್ನು ಅಂಟಿಕೊಂಡು ಬಂದಿದ್ದ ಕಾರಣ ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಂಗೀತ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆರಂಭಿಕ ದಿನಗಳಲ್ಲಿ ತಾವು ಎಲ್ಲರಂತೆ ಕಷ್ಟಪಟ್ಟು ಸಾಕಷ್ಟು ಸೋಲು ಅನುಮಾನಗಳಿಗೂ ಗುರಿಯಾದರು. ಅನಂತರ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ರವರ ಕಾಂಬಿನೇಷನ್ನಲ್ಲಿ ಮೂಡಿಬಂದ ಉಗ್ರಂ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು‌.

ಚಿತ್ರ ಬಹು ದೊಡ್ಡ ಮಟ್ಟದ ಹಿಟ್ ಆಗುವುದರ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಿರುವಂತಹ ಪ್ರತಿಯೊಬ್ಬರಿಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತದೆ. ಅದೇ ಹಂತದಲ್ಲಿ ರವಿ ಬಸ್ರೂರ್ ಕೂಡ ಜಿ ಮ್ಯೂಸಿಕ್ ಪ್ರಶಸ್ತಿ ವತಿಯಿಂದ ಅತ್ಯುತ್ತಮ ಸಂಗೀತ ಸಂಯೋಜಕ ಅವಾರ್ಡ್ ಅನ್ನು ಪಡೆದುಕೊಂಡರು, ಅಷ್ಟೇ ಅಲ್ಲದೆ ಅದೇ ಸಿನಿಮಾಗೆ ಅಂತರಾಷ್ಟ್ರೀಯ ಸಂಗೀತ ಪ್ರಶಸ್ತಿ ಕೂಡ ರವಿ ಬಸ್ರೂರು(Ravi Basrur) ಮುಡಿಗೇರುತ್ತದೆ.

ಅಲ್ಲಿಂದ ತಮ್ಮ ಸಿನಿ ಬದುಕಿನ ಪಯಣದಲ್ಲಿ ರವಿ ಬಸ್ರೂರು ಮತ್ತೊಂದು ಹಿಂದಿರುಗಿ ನೋಡಲೇ ಇಲ್ಲ. ಪ್ರಶಾಂತ್ ನೀಲ್(Prashanth Neel) ಅವರೊಂದಿಗೆ ನಿಕಟವಾಗಿದ್ದ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿರುವ ರವಿಯವರು ಅವರ ಕೆಜಿಎಫ್ ಸರಣಿಗಳು ಹಾಗೂ ಸಲಾಂ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!