Rishab Shetty: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ರಿಷಭ್ ಶೆಟ್ಟಿ ಅವರಿಗೆ ಹೇಳಿದ್ದೇನು ಗೊತ್ತಾ?

Rishab Shetty ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ರಾಕಿಂಗ್ ಸ್ಟಾರ್ ಯಶ್ ವಿಜಯ್ ಕಿರಗಂದೂರು ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಇನ್ನೂ ಹಲವಾರು ಗಣ್ಯರ ಜೊತೆಗೆ ನಾಡಿನ ಹೆಮ್ಮೆಯ ಪ್ರಧಾನಮಂತ್ರಿಗಳಾಗಿರುವ ಶ್ರೀ ನರೇಂದ್ರ ಮೋದಿಜಿ ಅವರನ್ನು ರಾಜಭವನದಲ್ಲಿ ಭೇಟಿಯಾಗಿರುವ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ.

ಕಾಂತರಾ ಸಿನಿಮಾದ ಬಗ್ಗೆ ಇತ್ತೀಚಿಗಷ್ಟೇ ಮಂಗಳೂರಿಗೆ ಭೇಟಿ ನೀಡಿದ್ದ ಮಾನ್ಯ ಕೇಂದ್ರ ಗೃಹ ಮಂತ್ರಿಗಳಾಗಿರುವ ಅಮಿತ್ ಶಾ ಕೂಡ ಮನದುಂಬಿ ಹೊಗಳಿದ್ದರು. ಈಗ ಪ್ರಧಾನಿ ಮೋದಿಗಳಿಂದ ಕೂಡ ಔತಣಕೂಟಕ್ಕೆ ಆಹ್ವಾನ ಸಿಕ್ಕಿ ಭೇಟಿಯಾಗಿರುವುದು ಪ್ರತಿಯೊಬ್ಬರು ಹೆಮ್ಮೆ ಪಡುವಂತಹ ವಿಚಾರವಾಗಿದೆ. ನಿಜಕ್ಕೂ ಕನ್ನಡದ ಪ್ರತಿಭೆಗಳನ್ನು ದೇಶ ಈಗ ಗುರುತಿಸುತ್ತಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Rishab Shetty

ಇನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದಾಗ ರಿಷಬ್ ಶೆಟ್ಟಿ ಯಾವುದರ ಕುರಿತಂತೆ ಚರ್ಚೆ ಮಾಡಿರಬಹುದು ಎನ್ನುವ ಕುತೂಹಲ ಸಾಕಷ್ಟ ಜನರಿಗೆ ಇದೆ ಈಗ ಅದನ್ನು ಅವರೇ ಬಗೆಹರಿಸಿದ್ದಾರೆ. ಹಾಗಿದ್ದರೆ ಬನ್ನಿ ಕಾಂತಾರದ ಮೂಲಕ ಇಡೀ ದೇಶದ ಸಿನಿಮಾ ಪ್ರೇಮಿಗಳು ಬೆಕ್ಕಸ ಬೆರಗಾಗುವಂತೆ ಮಾಡಿರುವ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರು ಇಡೀ ವಿಶ್ವದಲ್ಲೇ ಭಾರತ ವಿಶ್ವಗುರುವಂತೆ ಮೆರೆಯುತ್ತಿರುವುದಕ್ಕೆ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಯಾವ ವಿಚಾರದ ಕುರಿತು ಚರ್ಚಿಸಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ನವ ಭಾರತವನ್ನು ಕಟ್ಟುವುದರಲ್ಲಿ ಮನೋರಂಜನ ಕ್ಷೇತ್ರದ ಪಾತ್ರವೇನು ಹಾಗೂ ಕರ್ನಾಟಕದ ಪ್ರಗತಿಯ ಕುರಿತಂತೆ ರಿಷಭ್ ಶೆಟ್ಟಿ ಅವರ ಜೊತೆಗೆ ನಮೋ ಚರ್ಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇಷ್ಟು ಮಾತ್ರವಲ್ಲದೆ ನಿಮ್ಮ ದೂರಲೋಚನೆಯೂ ನಮ್ಮ ಭಾರತ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ದೇಶಕ್ಕೆ ಉಪಯುಕ್ತವಾಗುವಂತಹ ಕೆಲಸ ಮಾಡಲು ಉತ್ತೇಜಿಸುತ್ತಿದೆ ಎಂಬುದಾಗಿ ರಿಶಭ್ ಶೆಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿಗಳ ಕುರಿತಂತೆ ಮನ ಬಿಚ್ಚಿ ಹೊಗಳಿದ್ದಾರೆ. ಕನ್ನಡದ ಗಣ್ಯರು ಹಾಗೂ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!