Kapil Dev: ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಗೆ ಕಪಾಳಮೋಕ್ಷ ಮಾಡ್ತೀನಿ ಎಂದ ಕಪಿಲ್ ದೇವ್. ಕ್ರಿಕೆಟ್ ಅಭಿಮಾನಿಗಳಲ್ಲಿ ತಳಮಳ

Rishab Pant ಭಾರತೀಯ ಕ್ರಿಕೆಟ್ ತಂಡದ ಭರವಸೆ ಆಟಗಾರ ಆಗಿರುವ ರಿಷಬ್ ಪಂತ್ ಈಗಾಗಲೇ ಕಾರು ಅಪ’ಘಾತದಲ್ಲಿ ಮಾಡಿಕೊಂಡಿರುವ ನಷ್ಟವನ್ನು ನೀವೆಲ್ಲ ತಿಳಿದಿರುತ್ತೀರಿ. ನಿಜಕ್ಕೂ ಕೂಡ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಸರಿಯಾದ ಆಟಗಾರನಿಂದ ತುಂಬಲು ಭಾರತೀಯ ಕ್ರಿಕೆಟ್ ತಂಡ ಕಷ್ಟಪಡುತ್ತಿದೆ ಎನ್ನುವುದು ಕಂಡುಬರುತ್ತದೆ. ಭವಿಷ್ಯದ ದೃಷ್ಟಿಯಿಂದ ರಿಷಬ್ ಪಂತ್ ಅವರ ಅನುಪಸ್ಥಿತಿ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ನಿಜಕ್ಕೂ ಕಷ್ಟವನ್ನು ನೀಡಲಿದೆ.

ಡೆಹರಾಡೂನ್ ನಲ್ಲಿ ರಿಷಬ್ ಪಂತ್ ಅವರ ಆ ಘಟನೆ ಇಂದಿಗೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಡಿಯೋಗಳ ಮುಖಾಂತರ ನಮ್ಮ ಕಣ್ಣಿಗೆ ಕಟ್ಟಿದಂತಿದೆ. ಅಷ್ಟೊಂದು ವೇಗವಾಗಿ ಅವರು ಬಂದಿರುವುದು ನಿಜಕ್ಕೂ ಕೂಡ ಅವರು ಬದುಕಿ ಉಳಿದಿರುವುದೇ ಕಷ್ಟ ಎಂಬಂತಿದೆ. ಸದ್ಯಕ್ಕೆ ರಿಷಬ್ ಪಂತ್ ಅವರು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದು ನೆಮ್ಮದಿ ನೀಡುತ್ತಿರುವ ವಿಷಯವಾಗಿದೆ. ಇನ್ನು ಇದರ ಬೆನ್ನಲ್ಲೇ ಖ್ಯಾತ ಹಿರಿಯ ಕ್ರಿಕೆಟಿಗ ರಿಷಬ್ ಪಂತ್ ಅವರ ಕುರಿತಂತೆ ಒಂದು ಹೇಳಿಕೆಯನ್ನು ನೀಡಿದ್ದಾರೆ.

kapil dev

ಅದಿನ್ಯಾರು ಅಲ್ಲ 1983ರ ವರ್ಲ್ಡ್ ಕಪ್ ವಿಜೇತ ತಂಡದ ನಾಯಕ ಆಗಿರುವ ಕಪಿಲ್ ದೇವ್. ಹೌದು ಮಿತ್ರರೇ ಕಪಿಲ್ ದೇವ್ ಅವರು ರಿಷಬ್ ಪಂತ್ ಅವರ ಬಗ್ಗೆ ಮಾತನಾಡುತ್ತಾ ಆತ ಚೇತರಿಸಿಕೊಂಡ ನಂತರ ಆತನ ಕಪಾಳ ಮೋಕ್ಷ ಮಾಡಬೇಕೆಂದು ಬಯಸಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಕಪಿಲ್ ದೇವ್ ಅವರ ಈ ಹೇಳಿಕೆಯಿಂದ ರಿಷಬ್ ಪಂತ್ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ತಳಮಳ ಪ್ರಾರಂಭವಾಗಿದೆ ಎನ್ನಬಹುದಾಗಿದೆ.

ಹೌದು ಗೆಳೆಯರೇ, ಇದರ ಹಿಂದಿನ ನಿಜವಾದ ಅರ್ಥ ಬೇರೇನೇ ಇದೆ. ಆತನ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಆತನ ಸ್ಥಾನವನ್ನು ತುಂಬಲು ಸಾಕಷ್ಟು ಕಷ್ಟ ಪಡುತ್ತಿದೆ. ಆತನನ್ನು ನಾನು ಕೂಡ ನಿಜವಾಗಿಯೂ ಪ್ರೀತಿಸುತ್ತೇನೆ ಆದರೆ ಆತ ಹೀಗೆ ಮಾಡಿಕೊಂಡಿರುವುದಕ್ಕಾಗಿ ನಾನು ಆತನಿಗೆ ಕಪಾಳ ಮೋಕ್ಷ ಮಾಡಿ ನಿನ್ನನ್ನು ಚೆನ್ನಾಗಿ ನೀನು ನೋಡಿಕೋ ಎಂಬುದಾಗಿ ಬುದ್ಧಿವಾದ ಹೇಳಬೇಕು ಎಂದಿದ್ದೇನೆ ಎಂಬುದಾಗಿ ಕಪಿಲ್ ದೇವ್ ಹೇಳಿದ್ದಾರೆ. ಮಕ್ಕಳು ತಪ್ಪು ಮಾಡಿದಾಗ ಪೋಷಕರಿಗೆ ಮಕ್ಕಳಿಗೆ ಹೊಡೆದು ಬುದ್ದಿ ಹೇಳುವ ಹಕ್ಕು ಇರುತ್ತದೆ ಹಾಗಾಗಿ ಅದೇ ಹಿನ್ನೆಲೆಯಲ್ಲಿ ನಾನು ಕೂಡ ಹೀಗೆ ಹೇಳಿದ್ದೇನೆ ಎಂಬುದು ಕಪಿಲ್ ದೇವ್ ಅವರ ಮಾತಿನ ಅರ್ಥವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!