Yash: ರಿಷಭ್ ಶೆಟ್ಟಿ ಹಾಗೂ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಇದೊಂದು ಕೆಲಸ ಮಾಡಬೇಡಿ ಎಂಬುದಾಗಿ ಮನವಿ ಮಾಡ್ತಿದ್ದಾರೆ!

Rishab Shetty ರಾಕಿಂಗ್ ಸ್ಟಾರ್ ಯಶ್(Yash) ರವರು ಕೆಜಿಎಫ್ ಸಿನಿಮಾಗಳ ಮೂಲಕ ಹಾಗೂ ರಿಷಭ್ ಶೆಟ್ಟಿ(Rishab Shetty) ಕಾಂತಾರ(Kantara) ಸಿನಿಮಾದ ಮೂಲಕ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಎರಡು ಸಿನಿಮಾಗಳು ಕೂಡ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿವೆ.

ಅದರಲ್ಲೂ ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ರಿಷಭ್ ಶೆಟ್ಟಿ(Rishab Shetty) ನಟನೆಯ ಕಾಂತಾರ ಸಿನಿಮಾ ಎನ್ನುವುದು ಕೇವಲ ಸಿನಿಮಾಗಿಂತ ಹೆಚ್ಚಾಗಿ ಒಂದು ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತಿಳಿಯುವಂತೆ ವೈಭವಿಕರಿಸಿರುವ ರೀತಿ ನಿಜಕ್ಕೂ ಕೂಡ ಅಸಮಾನ್ಯ. ಇಂದಿಗೂ ಕೂಡ ಪ್ರತಿಯೊಬ್ಬರೂ ಆ ಸಿನಿಮಾವನ್ನು ಪೂರ್ತಿಯನ್ನಾಗಿ ತೆಗೆದುಕೊಂಡು ಹಲವಾರು ಸಿನಿಮಾಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್(Yash) ಕೂಡ ಕೆಜಿಎಫ್(KGF) ಸಿನಿಮಾ ಗಳನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಕನಸನ್ನು ಹೊತ್ತು. ಇಂದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಮೊದಲ ಬಾರಿಗೆ ಓಪನ್ ಮಾಡಿಕೊಟ್ಟಿದ್ದಾರೆ. ಇಬ್ಬರು ನಟರು ಕೂಡ ತಮ್ಮದೇ ಆದಂತಹ ರೀತಿಯಲ್ಲಿ ಕನ್ನಡದ ಸಿನಿಮಾ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಆದರೆ ಈಗ ಈ ಇಬ್ಬರು ನಟರ ಅಭಿಮಾನಿಗಳು ಅದೊಂದು ಕೆಲಸವನ್ನು ಮಾತ್ರ ಮಾಡಬೇಡಿ ಎಂಬುದಾಗಿ ಕೇಳಿಕೊಳ್ಳುತ್ತಿದ್ದಾರೆ.

ಹೌದು ಮಿತ್ರರೇ ಇತ್ತೀಚಿಗಷ್ಟೇ ಹೊರಬಂದಿರುವ ಸುದ್ದಿಗಳ ಪ್ರಕಾರ ರಿಷಬ್ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರೂ ಕೂಡ ಬಾಲಿವುಡ್ ಚಿತ್ರರಂಗದ ಟಾಕಿಂಗ್ ಶೋ ಆಗಿರುವಂತಹ ಕರಣ್ ಜೋಹರ್(Karan Johar) ನಿರೂಪಕರಾಗಿ ನಡೆಸಿಕೊಡುವ ಕಾಫಿ ವಿತ್ ಕರಣ್(Coffee With Karan) ಕಾರ್ಯಕ್ರಮಕ್ಕೆ ಹೋಗಲೇ ಬೇಡಿ ಎಂಬುದಾಗಿ ಹೇಳಿದ್ದಾರೆ. ಯಾಕೆಂದರೆ ಈ ಕಾರ್ಯಕ್ರಮಕ್ಕೆ ಹೋದವರೆಲ್ಲ ಕೆಟ್ಟ ಹೆಸರನ್ನು ತಂದುಕೊಂಡು ಸಾಕಷ್ಟು ವಿವಾ’ ದಾತ್ಮಕ ವಿಚಾರಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಅಭಿಮಾನಿಗಳು ಈ ರೀತಿಯ ಮನವಿಯನ್ನು ಇಟ್ಟಿದ್ದಾರೆ.

Leave a Comment

error: Content is protected !!