ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಪೋಷಕ ನಟರಲ್ಲಿ ಒಬ್ಬರಾಗಿರುವವರು ನಮ್ಮ ಲೋಹಿತಾಶ್ವ ಅವರು. ನಟ ಲೋಹಿತಾಶ್ವ ಅವರು ಸಿನಿಮಾ ರಂಗಕ್ಕೂ ಬರುವುದಕ್ಕೆ ಮುನ್ನ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಹಲವಾರು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ ಹಾಗೂ ಸಿನಿಮಾ ರಂಗಕ್ಕೆ ಬಂದ ಮೇಲೂ ಕೂಡ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮಕ್ಕಳಿಗೆ ಬೋಧನೆಯನ್ನು ಮಾಡಿದ್ದಾರೆ ಎಂಬುದು ನಾವೆಲ್ಲರೂ ಗಮನಿಸಬೇಕಾಗಿರುವ ವಿಚಾರ.
ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ವಿಷ್ಣುವರ್ಧನ್ ಶಂಕರ್ ನಾಗ್ ಹಾಗೂ ಅಂಬರೀಶ್ ಅವರಂತಹ ನಟರು ಪೀಕ್ ಹಂತದಲ್ಲಿ ಇದ್ದಾಗ ಅವರ ಸಿನಿಮಾಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ಲೋಹಿತಾಶ್ವ ಅವರೇ ಮೊದಲ ಆಯ್ಕೆಯಾಗಿ ನಿರ್ದೇಶಕರಿಗೆ ಕಾಣಿಸಿಕೊಳ್ಳುತ್ತಿದ್ದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಲೆಜೆಂಡ್ ನಾಯಕ ನಟರುಗಳೊಂದಿಗೆ ಲೋಹಿತಾಶ್ವ ಅವರು ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ.
ಅದರಲ್ಲಿಯೂ ವಿಶೇಷವಾಗಿ ಲೋಹಿತಾಶ್ವ ಅವರು ಕಾಣಿಸಿಕೊಳ್ಳುತ್ತಿದ್ದ ಪೊಲೀಸ್ ಕಮಿಷನರ್ ಪಾತ್ರ ಇಂದಿಗೂ ಕೂಡ ಜನಮಾನಸದಲ್ಲಿ ಹಾಗೆಯೇ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು. ಇನ್ನು ಅವರ ಮಗ ಆಗಿರುವ ಶರತ್ ಲೋಹಿತಾಶ್ವ ಕೂಡ ತಂದೆಯಂತೆ ಸಿನಿಮಾರಂಗಕ್ಕೆ ಕಾಲಿಟ್ಟು ಈಗಾಗಲೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಕೂಡ ಪೋಷಕ ನಟನಾಗಿ ಹಾಗೂ ಖಳನಾಯಕನ ಪಾತ್ರದಲ್ಲಿ ಮಿಂಚಿ ಮೆರೆಯುತ್ತಿದ್ದಾರೆ.
ಇನ್ನು ಈಗಾಗಲೇ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರು ಹೃದಯದ ಸಮಸ್ಯೆಯಿಂದ ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಉಳಿಯುವುದು ಅನುಮಾನ ಎಂದು ತಿಳಿದಿದ್ದರೂ ಕೂಡ ಕುಟುಂಬಸ್ಥರು ಸೇರಿದಂತೆ ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರು ಕೂಡ ಕೊನೆಗೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು 500ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಲೋಹಿತಾಶ್ವ ಅವರು ಮನೆ ಹಾಗೂ ಐಷಾರಾಮಿ ಕಾರುಗಳು ಸೇರಿದಂತೆ ಒಟ್ಟಾರೆಯಾಗಿ ಎರಡು ಕೋಟಿಗೂ ಅಧಿಕ ಆಸ್ತಿಯನ್ನು ತಮ್ಮ ಮಕ್ಕಳಿಗಾಗಿ ಬಿಟ್ಟು ಹೋಗಿದ್ದಾರೆ. ಇನ್ನು ಅವರ ಕೊನೆಯ ವಿಧಿ ವಿಧಾನ ಕಾರ್ಯಕ್ರಮಗಳನ್ನು ಅವರ ಹುಟ್ಟೂರಾಗಿರುವ ತೊಂಡೆಗೆರೆ ಗ್ರಾಮದಲ್ಲಿ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.